Tuesday 16 May 2017

ಹ್ಯಾಪಿ ಮದರ್ಸ್ ಡೇ ಫಾರ್‌ ಆಲ್ ಲವ್ಲಿ ಅಮ್ಮಾಸ್..

ಎದೆಯೊಳಗಿನ ಮೌನಕ್ಕೂ ದನಿಯಾಗುವ 
ಹೇಳಿದಷ್ಟು ತುಂಬಿ ತೊರೆಯಾಗುವ 
ಬೇಕೆಂದಾಗಲೆಲ್ಲ ಸಿಕ್ಕು ಜತೆಯಾಗುವ 
ಬೇಡೆಂದಾಗ ಬೇಸರಿಸದೆ ಪಕ್ಕವೇ ಸರಿದು ನಿಲ್ಲುವ 
ಹುಡುಕುತ್ತಿದ್ದೇನೆ ಒಬ್ಬ ಗೆಳತಿಯನ್ನ 

ಒಡಲಿನ ರಹಸ್ಯ ಭೇದಿಸದ 
ವದರಿಬಿಟ್ಟ ಗುಟ್ಟುಗಳಿಗೆ ಮುಚ್ಚಿಟ್ಟ ಡೈರಿಯಾಗುವ 
ಬೇಡೆಂದಾಗಲೆಲ್ಲ ಕಾರಣವಿಲ್ಲದೆ ಜಗಳವಾಡಿ
ಬೇಕೆಂದಾಗಲೆಲ್ಲಾ ಮುದ್ದುಮಾಡಿ ಉಪಚರಿಸುವ 
ಹುಡುಕುತ್ತಿದ್ದೇನೆ ಒಬ್ಬ ಗೆಳತಿಯನ್ನ 

ದಣಿದು ಸುಸ್ತಾದಾಗಲೆಲ್ಲ ತಲೆ ಸವರಿ ಹಿತವಾಗಿ ನೀಯುವ 
ಅದೇನೆನೆಲ್ಲ ಮಾತಾಡಿ ಉಳಿದುಬಿಡುವ ಸಣ್ಣ ಪದಕ್ಕೂ ಕಾದು ನಿಲ್ಲುವ 
ಒಂಟಿತನದ ಚಡಪಡಿಕೆಗೆ ಬೋರೆನಿಸದೆ ಜತೆಗಾರಳಾಗಿ ಬಹುದೂರ ಒಯ್ಯುವ 
ಹುಡುಕುತ್ತಿದ್ದೇನೆ ಒಬ್ಬ ಗೆಳತಿಯನ್ನ ..!

ಹೆಗಲಿಗೇರುವ ಪ್ರತಿ ಜವಾಬ್ದಾರಿಯನೂ ತನ್ನದೆಂಬಂತೆ ಬಲು ಮುತುವರ್ಜಿಯಿಂದ ನಿಭಾಯಿಸುವ 
ಎಡವಿ ಬಿದ್ದಾಗಲೆಲ್ಲ ನಗದೆ ಮೇಲೆತ್ತುವ 
ತೊಡರಿ ಹಾದಿ ತಪ್ಪಿದಾಗಲೆಲ್ಲ ಎಳೆದು ಸರಿದಾರಿಗೆ ತಂದುಬಿಡುವ
ಒಳ್ಳೆಯದು ಕೆಟ್ಟದ್ಸು ಚೌಕಟ್ಟಿನಾಚೆಗೂ ಉಳಿದುಬಿಡುವ 
ಹುಡುಕುತ್ತಿದ್ದೇನೆ ಒಬ್ಬ ಗೆಳತಿಯನ್ನ ..!

ಈ ನಡುವೆ ಘಳಿಗೆ ಇದ್ಹಂಗೆ ಇನ್ನೊಂದರೆ ಘಳಿಗೆ ಇರಲ್ಲ, 
ಹು ತುಮುಲಗಳು ಆಳುವ ವಯಸ್ಸಿದು ಬಿಡೆ ಇವೆಲ್ಲ ಸಹಜವೆನ್ನುವ 
ಯಾರ ಹಂಗಿಲ್ಲದೆ ಹೊತ್ತಿನ ನೆಪವಿಲ್ಲದೆ ಪಿಸುದನಿಗಳಿಗೆ ಕಿವಿಯಾಗುವ 
ದೋಷಗಳನು ದೊಡ್ಡದು ಮಾಡದೆ 
ಸಣ್ಣ ಗದರುವಿಕೆ, ದೊಡ್ಡ ಭರವಸೆಯೊಂದಿಗೆ ಬದುಕು ಕಟ್ಟುವ ಕಾಯಕಕ್ಕೆ ಜತೆಯಾಗಿ ನಿಲ್ಲುವ 
ಹುಡುಕುತ್ತಿದ್ದೇನೆ ಒಬ್ಬ ಗೆಳತಿಯನ್ನ..!

ವರ ಪರೀಕ್ಷೆಗೆ ಜತೆಗೆ ನಿಲ್ಲುವ 
ಆಯ್ಕೆಗೆ ಸಲಹೆಯನ್ನಿಕ್ಕುವ 
ಎಲ್ಲದಕ್ಕೂ ಪ್ರಾಮಾಣಿಕಳೆನಿಸುವ 
ಕಪಟವಿಲ್ಲದೆ ಪ್ರೀತಿಯ ನದಿ ಹರಿಸುವ 
ಹಸಿವಿಗೆ ಅನ್ನವಿಕ್ಕುವ, ಬೆತ್ತಲಿಗೆ ಬಟ್ಟೆ ತೊಡಿಸುವ, ಸೋಲಿಗೆ ಧೈರ್ಯ ತುಂಬುವ, ಬದುಕಿನ ಕತ್ತಲೆಗೆ ಅನವರತ ತಾ ಉರಿದು ಬೆಳಕಾಗಿಹ "ಅಮ್ಮ" ವಾಸ್ತವದಲಿ ಎದೆಯಲ್ಲಿ ನಂದಾದೀಪವಾಗಿ ಅಷ್ಟ ದಿಕ್ಕುಗಳಲ್ಲಿ ದೇದೀಪ್ಯಮಾನವಾಗಿ ಬೆಳಗುತ್ತಾ ಪ್ರತಿಷ್ಠಾಪನೆಗೊಂಡಿರುವಾಗ
ನಾನೊಬ್ಬಳು ಹುಚ್ಚಿ ಭ್ರಮೆಯಲ್ಲಿ ಹುಡುಕುತ್ತಲೇ ಇದ್ದೇನೆ 'ಒಬ್ಬ' ಗೆಳತಿಯನ್ನ ....!!! 

ಬದುಕಿನ್ನೆಲ್ಲ ಪಾತ್ರಗಳನು ದಿನಗಳ ಲೆಕ್ಕವಿಲ್ಲದೆ ನಿರ್ವಹಿಸುವ ತಾಕತ್ತುಳ್ಳ ಅಮ್ಮ... ಕ್ಷಮಿಸಿಬಿಡು ನಿನಗೆ ಒಂದು ದಿನಕ್ಕಾದ್ರೂ ವಿಷ್ ಮಾಡಿ ತುಸು ಪಾಪ ಕಳ್ಕೊಳ್ತಿದೀನಿ. ಯಾರೂ ನಿನ್ನ ಮಟ್ಟಕ್ಕೆ ನಿಲ್ಲಲಿಕ್ಕೆ ಸಾಧ್ಯ ಇಲ್ಲ 
ನಿನಗೆ ನಿನ್ನ ದಿನದ ಶುಭಾಶಯ 💐

ಹ್ಯಾಪಿ ಮದರ್ಸ್ ಡೇ ಫಾರ್‌ ಆಲ್ ಲವ್ಲಿ ಅಮ್ಮಾಸ್.. 😘😊

#ಭಾಚಿ

Friday 30 December 2016

ಕಾಣುವ ಕಂಗಳಲ್ಲಿ ಹೊಸ ವರುಷ


ಹುಟ್ಟಿದಾಗಿನಿಂದ ನಾವು, ನಮ್ಮ ಸಹಿತ ಮನೆಯ ಗೋಡೆಗಳು ಅದೆಷ್ಟು ಬಣ್ಣ ಬಣ್ಣದ ಕ್ಯಾಲೆಂಡರ್​ಗಳನ್ನು ನೋಡಿಬಿಟ್ವಿ. ದಿನದ ಅಧಿಕ, ಕಡಿತ, ಒಂದಷ್ಟು ಸರ್ಕಾರಿ ರಜೆಗಳು ಹೆಚ್ಚಾಗಿದ್ದು ಬಿಟ್ಟರೆ, ಅಲ್ಲೇನೂ ಹೊಸತನ ಕಾಣಿಸಲೇ ಇಲ್ಲ. ಆದರೆ ನಾವು ಅಧಿಕಗೊಳಿಸಿಕೊಂಡಿದ್ದೇನು? ಕಡಿತ ಮಾಡಿಕೊಂಡಿದ್ದೇನು? ಎಂದಾದರೂ ಲೆಕ್ಕಾಚಾರ ಹಾಕಿದ್ದೀವಾ! ಇಷ್ಟಕ್ಕೂ ಅದಕ್ಕೆಲ್ಲಾ ಪುರುಸೊತ್ತೆಲ್ಲಿದೆ ಎನ್ನುವ ಸಬೂಬು ನಮ್ಮ ಏಕಮಾತ್ರ ಡೈಲಾಗ್ ಆಗಿರುವಾಗ, ಅದಕ್ಕೆಲ್ಲ ತಲೆಕೆಡಿಸಿಕೊಳ್ಳುವ ಗೋಜಿಲ್ಲ. ಆದರೂ ಪ್ರತಿ ಸಂವತ್ಸರ ತಪ್ಪದಂತೆ ಹೊಸ ವರ್ಷವಾಗಿ ದಾಂಗುಡಿ ಇಟ್ಟು, ಹಳೆಯದರ ನೆನಪೆಲ್ಲವನ್ನು ಇತಿಹಾಸಕ್ಕೆ ಸೇರಿಸಿಬಿಡುತ್ತೆ. ವರ್ಷಕ್ಕೆ 365 ದಿನಗಳೇ ಇದ್ದರೂ, ಅಗಾಧ ನೋವು-ನಲಿವುಗಳ ಚೂರಣವನ್ನು ಕಾಲಗರ್ಭದಲ್ಲಿ ಹುದುಗಿಸಿಡುತ್ತಲೇ ಸಾಗುವ ಜಾಯಮಾನ ಅದರದು. ಅದಕ್ಯಾವ ಅಂಕೆ ಶಂಕೆಗಳಿಲ್ಲ. ಕಾಲಕ್ಕೆ ಮಾತ್ರವೇ ಎಲ್ಲವನ್ನೂ ಮೆಟ್ಟಿ ಸಾಗುವ ಗುಂಡಿಗೆ ಇರೋದು!
ಗ್ರೀಕ್ ಮತ್ತು ಈಜಿಪ್ಟಿಯನ್ ನಾಗರಿಕತೆಯಲ್ಲಿ ಹೊಸ ವರ್ಷದ ಹುಟ್ಟು ಮಗುವಿನ ಜನನಕ್ಕೆ ಸಮ. ಕಾಲಾಂತರದಲ್ಲಿ ಜಾಗತಿಕವಾಗಿ ಗ್ರಿಗೋರಿಯನ್ ಕ್ಯಾಲೆಂಡರ್ ಪ್ರಕಾರ ಅದು ಪ್ರತಿ ಖಂಡ, ದೇಶ, ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ, ಬೇರೆ ಬೇರೆ ದಿನಗಳಲ್ಲಿ ಆಚರಣೆಗೆ ಒಗ್ಗಿಕೊಂಡಿದೆ. ಉತ್ತರ ಭಾರತದಲ್ಲಿ ‘ದೀಪಾವಳಿ’ಯಾಗಿ ಹೊಸ ವರ್ಷ ಆಚರಣೆಯಾದರೆ, ಕೇರಳದಲ್ಲಿ ‘ವಿಶು’, ತಮಿಳುನಾಡಿನಲ್ಲಿ ‘ವರ್ಷಪಿರಪ್ಪು’, ಬೆಂಗಾಲಿಗರು ‘ನಬ’, ಬಾಂಗ್ಲಾದಲ್ಲಿ ‘ಪೈಲಾ ಬೈಸಾಖ್’, ಕಾಶ್ಮೀರದಲ್ಲಿ ‘ನವ್ರೆಹ್’, ಪಾರ್ಸಿ ಸಮುದಾಯದವರು ‘ನವ್ರೊಜ್’, ಪಂಜಾಬಿನಲ್ಲಿ ‘ಬೈಸಾಕಿ’, ಮಹರಾಷ್ಟ್ರೀಯರು ‘ಗುಡಿಪಾಡವ’, ಅಸ್ಸಾಮಿಗರು ‘ಗೊರು ಬಿರ್ಹ’, ಆಂಧ್ರ ಮತ್ತು ಕರ್ನಾಟಕದಲ್ಲಿ ‘ಯುಗಾದಿ’, ಹೆಸರಿನಲ್ಲಿ ಆಚರಣೆಗಳು ಜಾರಿಯಲ್ಲಿವೆ. ಯಾವ ಹೆಸರಿನಲ್ಲಿ ಆಚರಣೆಗಳು ನಡೆದುಬಂದಿದ್ದರೂ, ಅವೆಲ್ಲದರ ಆಶಯ ಮಾತ್ರ ಒಂದೇ, ಬದಲಾವಣೆಗೆ ತೆರೆದುಕೊಳ್ಳುವುದು, ಸಕಾರಾತ್ಮಕತೆ ಬೆಳೆಸಿಕೊಳ್ಳುವುದು, ಹೊಸತನ ಕಾಯ್ದುಕೊಳ್ಳೋದು. ಇವೆಲ್ಲ ಹೇಗೆ ಸಾಧ್ಯ ಎಂಬ ಪ್ರಶ್ನಾರ್ಥಕ ಚಿಹ್ನೆ ಬೇಡ. ಇಂದಿನ ಯುವಜನತೆ ಕಂಡುಕೊಳ್ಳಬೇಕಾದ ಸತ್ಯಗಳ ಕೆಲ ಪುಟ್ಟ ಪುಟ್ಟ ಕಥೆಗಳು ಇಲ್ಲಿವೆ. ಇವು ಎಲ್ಲೊ ಓದಿದವು, ಯಾರಿಂದಲೋ ಕೇಳಿದಂಥವು, ಸ್ಪಷ್ಟತೆ ಇಲ್ಲದೆ ಗೋಚರಗೊಂಡ ಸ್ವಂತ ಕಥೆಗಳಿಗೆ ಒಂದಿಷ್ಟು ಪ್ರೇರಣೆ ಒದಗಿ ಅವಕ್ಕೆ ಮೂರ್ತ ರೂಪ ಕೊಟ್ಟಂಥವು. ಕತೆ ಒಂದೊಂದೇ ಆದರೂ, ಅದರಿಂದ ದಕ್ಕುವ ಅನುಭವಗಳು ಬೇರೆ ಬೇರೆ. ನಿಜ, ಹೇಗಾದರೂ ಸರಿ ಅವುಗಳನ್ನು ಓದಿಕೊಳ್ಳಿ ನಿಮಗೂ ಏನಾದರೂ ಇದರಿಂದ ಹೊಳೆದರೆ, ಒಂದಿಷ್ಟು ತಾನೂ ಬದಲಾಗಬೇಕು ಎನಿಸಿದರೆ ಈಗಲೇ ಬದಲಾಗಿಬಿಡಿ. ಅನಿಸದಿದ್ರೆ ಯಾರ ತಕರಾರು ಇಲ್ಲ ಬಿಟ್ಟುಬಿಡಿ. ಬಟ್ಟೆ ತೊಟ್ಟ ರೂಪವೂ ನಿಮ್ಮದೇ, ಬಟ್ಟೆಯೊಳಗಿನ ಬೆತ್ತಲೆಯೂ ನಿಮ್ಮದೇ….
ಎಲ್ಲ ‘ಸರಿ’ಯಿರುವ ನಾವುಗಳು…!?
ಹಿಲರಿ ಎಲ್ಲ ಮಕ್ಕಳಂತೆ ಆರೋಗ್ಯವಾಗಿ ದಷ್ಟಪುಷ್ಟವಾಗಿ ಹುಟ್ಟಿದಾಕೆ. ನೃತ್ಯ ಮತ್ತು ಕ್ರೀಡೆಗಳಲ್ಲಿ ಆಕೆಗೆ ಅತೀವ ಆಸಕ್ತಿ. ಹಾಗೆಯೇ ಮುಂದೆ ನೃತ್ಯಗಾರ್ತಿಯಾದಳು ಕೂಡ. ಆದರೆ ಒಂದು ಭೀಕರ ಕಾಯಿಲೆ ಆಕೆಯನ್ನು ಹೇಗೆ ಜಡ್ಡು ಹಿಡಿಸಿತೆಂದರೆ, ಆಕೆಯ ಬಾಯಿ ಕಣ್ಣುಗಳು ಸಂಪೂರ್ಣವಾಗಿ ಮುಚ್ಚಿಬಿಟ್ಟವು. ಟ್ಯೂಬಿನಿಂದ ಆಕೆಗೆ ಆಹಾರ ಒದಗಿಸಲಾಗಿತ್ತು. ಉಸಿರಾಟ ಯಂತ್ರದ ಮೂಲಕ ಆಕೆ ಜೀವಂತವಾಗಿ ಉಳಿದಳಷ್ಟೇ. ಇಷ್ಟಾದರೂ ಆಕೆ ಎಂದೂ ಸಾಯಬೇಕು ಅಂದುಕೊಳ್ಳಲಿಲ್ಲ. ಹುಟ್ಟಿನಿಂದಲೇ ಆಕೆ ಅಂಗವಿಕಲೆಯಾಗಿದ್ದರೆ ಅದು ಬೇರೆ ಮಾತು. ಆದರೆ, ಆಕೆ ಎಲ್ಲರಂತೆ ಜಗತ್ತನ್ನು ಕಣ್ಣಲ್ಲಿ ಕಂಡವಳು. ಈಗ ಏನೂ ಇಲ್ಲದಂತೆ ಕೂರುವುದೆಂದರೆ ಅದು ಎಲ್ಲರಿಗೂ ಸಾಧ್ಯವಾಗದ ಮಾತು. ಆಕೆ ಹೀಗೆ 10 ವರ್ಷ ಕಳೆದಳು. ಅನಂತರ ಆಕೆಗೆ ತಂತ್ರಜ್ಞಾನದ ಆವಿಷ್ಕಾರದಿಂದ ಬಲಗಾಲಿನ ಹೆಬ್ಬೆರಳು ಮಾತ್ರ ನಿಯಂತ್ರಣದಲ್ಲಿಡುವಂತಾಯಿತು. ಅಷ್ಟು ಸಾಕಿತ್ತು ಆಕೆಗೆ. ಫಾಸಮ್ ಅನ್ನೋ ಯಂತ್ರದಿಂದ ಆಕೆ ಎಲ್ಲ ಕೆಲಸಗಳನ್ನು ಸ್ವಿಚ್ಚುಗಳ ಮೂಲಕ ಮಾಡತೊಡಗಿದಳು. ಅಷ್ಟಲ್ಲದೆ, ಓದಲು, ಬರೆಯಲು ಶುರು ಮಾಡಿದ ಆಕೆ ಅಂಗವಿಕಲರಿಗೆ ಮಾಡಿದ ಕೆಲಸ ಶ್ಲಾಘಿಸಿ 1973ರಲ್ಲಿ ಇಂಗ್ಲೆಂಡಿನ ರಾಣಿ ಎಮ್​ಇ ಪ್ರಶಸ್ತಿ ನೀಡಿ ಗೌರವಿಸುವ ಮಟ್ಟಕ್ಕೆ ಹಿಲರಿ ಬೆಳೆದಳು. ಆದರ್ಶವಾಗಿ ಬದುಕಿದಳು.
ಬುದ್ಧಿಯನ್ನೂ ಒಂದಿಷ್ಟು ಖರ್ಚು ಮಾಡಿ
ಒಬ್ಬ ಬಡಗಿ ಮರಗಳನ್ನು ಕಡಿಯುವುದಕ್ಕೆ ಗುತ್ತಿಗೆ ಪಡೆದನು. ಇದಕ್ಕಾಗಿ ಆತನಿಗೆ ಬಂಡವಾಳದ ರೂಪದಲ್ಲಿ ಒಂದು ಉತ್ತಮವಾದ ಗರಗಸ ಕೊಳ್ಳಬೇಕಿತ್ತು. ಆದರೆ, ಆತನಲ್ಲಿ ಅಷ್ಟು ದುಡ್ಡಿರಲಿಲ್ಲ. ಆದರೂ ಆತ ಸಾಲ ಮಾಡಿ ಗರಗಸ ಕೊಂಡು ಕೆಲಸ ಪ್ರಾರಂಭಿಸಿದ. ಮೊದಲ ದಿನ ಆತ 8 ಗಂಟೆಗಳಲ್ಲಿ 8 ಮರಗಳನ್ನು ಕತ್ತರಿಸಿದ. ಎರಡನೇ ದಿನ 5, ಮೂರನೇ ದಿನ 3, ನಾಲ್ಕನೇ ದಿನಕ್ಕೆ ಆತ ಎರಡು ಮರಗಳನ್ನು ಮಾತ್ರ ಕತ್ತರಿಸಲು ಶಕ್ತನಾದ. ತನ್ನ ಕಾರ್ಯಕ್ಷಮತೆ ಕುಗ್ಗುತ್ತಿರೋದಕ್ಕೆ ಬೇಸತ್ತು, ಆತ ಗುತ್ತಿಗೆ ಪಡೆದ ಮಾಲೀಕನ ಬಳಿ ಅಳಲು ತೋಡಿಕೊಂಡ. ಆತ ಕೇಳಿದ ಗರಗಸವನ್ನೇನೋ ಹೊಸತು ಕೊಂಡಿದ್ದೀಯಾ ಸರಿ, ಆದರೆ ಅದನ್ನು ಕೆಲಸಕ್ಕೆ ತಕ್ಕಂತೆ ದಿನನಿತ್ಯ ಹರಿತಗೊಳಿಸುತ್ತಿದ್ದೀಯಾ? ಆತನ ಉತ್ತರ ಇಲ್ಲ ಎಂಬುದಾಗಿತ್ತು. ಅವನು ದಿನನಿತ್ಯ 8ಗಂಟೆ ಕಾಲ ಎಲ್ಲರಂತೆ ಕೆಲಸ ಮಾಡುತ್ತಿದ್ದನಷ್ಟೇ. ಆದರೆ, ಯಾವುದೇ ಪೂರ್ವಸಿದ್ಧತೆ ಇಲ್ಲದೆ, ಮಾಡೋ ಕೆಲಸವನ್ನೇ ಮಾಡುತ್ತಾ, ಬಾಹ್ಯ ಬಲ ಮಾತ್ರ ಉಪಯೋಗಿಸುತ್ತಿದ್ದ. ಒಂದಿಷ್ಟು ತನ್ನ ಕಾರ್ಯಕ್ಷಮತೆಯನ್ನೂ ಹೆಚ್ಚಿಸಿಕೊಳ್ಳಲು ಬುದ್ಧಿಯನ್ನು ಖರ್ಚು ಮಾಡಿದ್ರೆ ಆತ ಅಂದುಕೊಂಡಿದ್ದನ್ನ ಒಂದು ವಾರಕ್ಕೆ ಮಾಡಿ ಮುಗಿಸಿಬಿಡಬಹುದಿತ್ತು.
ಅವರಂತೆ ನೀವಿರಬೇಕಿಲ್ಲ, ವಿಭಿನ್ನತೆ ರೂಢಿಸಿಕೊಳ್ಳಿ
ಒಬ್ಬ ಹುಡುಗ ಅಪ್ಪನಿಂದ ಬಂಡವಾಳ ಪಡೆದು ಅಂಗಡಿ ವ್ಯಾಪಾರ ಶುರುಮಾಡಿಕೊಂಡ. ಆದರೆ, ಸ್ವಲ್ಪ ದಿನದಲ್ಲಿಯೇ ಆತನಿಗೆ ತಾನು ಮಾಡುತ್ತಿದ್ದ ವ್ಯಾಪಾರದಲ್ಲಿ ಬಂಡವಾಳ ನಷ್ಟವಾಗುತ್ತಿದೆಯೆಂಬ ಅರಿವಾಯಿತು. ಖ್ಯಾತ ಬಿಜಿನೆಸ್ ಶಾಲೆಯಲ್ಲಿ ಎಲ್ಲ ಕಲೆಗಳನ್ನು ಕಲಿತು ಬಂದಿರುವ ತನ್ನ ವ್ಯಾಪಾರದಲ್ಲೇಕೆ ಹೀಗೆ ನಷ್ಟವಾಗುತ್ತಿದೆ. ಎಲ್ಲಿ ತಪ್ಪಾಗುತ್ತಿದೆ? ಇದಕ್ಕೆ ಪರಿಹಾರವೇನು ಎಂಬುದನ್ನು ಕಂಡುಕೊಳ್ಳಲು ತುಂಬಾ ಪ್ರಯಾಸಪಟ್ಟ. ಇದೇ ಯೋಚನೆಯಲ್ಲಿ ಆತ ಒಬ್ಬ ಸಾಧುವನ್ನು ಭೇಟಿ ಮಾಡಿದ. ತನ್ನ ವ್ಯಾಪಾರದಲ್ಲಾಗುತ್ತಿರುವ ನಷ್ಟ ವಿವರಿಸಿದ. ವ್ಯಾಪಾರದ ಬಗೆಗೆ ಲವಲೇಶವೂ ಗೊತ್ತಿರದ ಆ ಸಾಧು ಹೇಳಿದ್ದಿಷ್ಟು, ‘ದಿನಕ್ಕೆ ಎಷ್ಟು ಗಂಟೆ ವ್ಯಾಪಾರದಲ್ಲಿ ತತ್ಪರನಾಗಿದ್ದೀ? ಬೆಳಗ್ಗೆಯಿಂದ ಮಧ್ಯಾಹ್ನದ ತನಕ 4 ಗಂಟೆ ಆನಂತರ ಸಂಜೆಯ ಮೇಲೆ 4 ಗಂಟೆ. ಮಧ್ಯಾಹ್ನದ ಅವಧಿಯಲ್ಲಿ ಏನು ಮಾಡುತ್ತೀ? ಆ ವೇಳೆಯಲ್ಲಿ ಗ್ರಾಹಕರ್ಯಾರು ಬಾರದೇ ಇರುವುದರಿಂದ ನಾನು ಅಂಗಡಿ ಬಂದ್ ಮಾಡಿರುತ್ತೇನೆ. ಬರಲ್ಲ ಎಂದು ನಿನಗೆ ಹೇಗೆ ಗೊತ್ತು?’ ಆಗ ವ್ಯಾಪಾರಿ ತಬ್ಬಿಬ್ಬಾದ. ‘ಅಕ್ಕ ಪಕ್ಕದ ಅಂಗಡಿಗಳು ಆ ಹೊತ್ತಿನಲ್ಲಿ ಮುಚ್ಚುವುದರಿಂದ ತಾನು ಮುಚ್ಚುತ್ತಿದ್ದೇನಷ್ಟೇ’ ಎಂಬ ಉತ್ತರ ಬಂತು. ಆಗ ಸಾಧು, ‘ಒಬ್ಬರಂತೆ ತಾನೂ ಮಾಡಬೇಕೆಂಬ ಯಾವ ನಿಯಮವೂ ಇಲ್ಲವಲ್ಲ. ಗ್ರಾಹಕರು ಕೂಡ ಆ ಹೊತ್ತಿನಲ್ಲಿ ಎಲ್ಲ ಅಂಗಡಿಗಳು ಮುಚ್ಚಿರುತ್ತವೆಂದು ಬರದೇ ಇರಬಹುದಲ್ಲ’ ಎಂದರಷ್ಟೆ. ಈತ ಏನೋ ಹೊಳೆದವನಂತೆ ಅಲ್ಲಿಂದ ಹೊರಟು ಬಿಟ್ಟ. ದಿನಕ್ಕೆ 14ಗಂಟೆ ಕೆಲಸದಲ್ಲಿ ತೊಡಗಿಕೊಂಡ. ಒಂದು ವರ್ಷಕ್ಕೆ ಆತ ಕಳೆದುಕೊಂಡ ಹತ್ತುಪಟ್ಟು ಹೆಚ್ಚಿನಷ್ಟು ಸಂಪಾದಿಸಿದ.
ನಾಯಕತ್ವ ಬೇಡೋದು ಅಗಾಧ ತಾಳ್ಮೆ
ಒಂದು ತರಗತಿಯಲ್ಲಿ 8 ಜನ ಸಹಪಾಠಿಗಳಿರ್ತಾರೆ. ಅದರಲ್ಲಿ ಇಬ್ಬರು ಅತೀವ ಬುದ್ಧಿವಂತರು. ಒಂದು ದಿನ ಶಾಲಾಶಿಕ್ಷಕಿ ತನ್ನ ಅನುಪಸ್ಥಿತಿಯಲ್ಲಿ ಕೆಲವೊಂದು ಡಿಕ್ಟೇಷನ್ ತರಗತಿಗಳನ್ನು ನಡೆಸಲು ಒಬ್ಬರನ್ನು ಆಯ್ಕೆ ಮಾಡುವ ತುರ್ತು ಒದಗಿತು. ಅದಕ್ಕಾಗಿ ಒಬ್ಬ ವಿದ್ಯಾರ್ಥಿಗೆ ಅಷ್ಟು ಜವಾಬ್ದಾರಿ ನೀಡಬೇಕಿತ್ತು. ಅಲ್ಲದೆ, ಆತ ತರಗತಿಯ ಎಲ್ಲರನ್ನೂ ಸಂಭಾಳಿಸುವ ವಿವೇಚನೆಯುಳ್ಳವನಾಗಿರಬೇಕಿತ್ತು. ಅದಕ್ಕಾಗಿ ಟೀಚರ್ ಒಂದು ಸ್ಪರ್ಧೆ ಇಟ್ಟರು. ತಾನಿರುವಾಗಲೇ ನಾಲ್ಕು ದಿನ ಪರ್ಯಾಯವಾಗಿ ಸರದಿಯಲ್ಲಿ ಆ ಕರ್ತವ್ಯ ನಿಭಾಯಿಸಬೇಕಿತ್ತು. ಶುರುವಾಯಿತು ಜವಾಬ್ದಾರಿ. ಆದರೆ, ಅದರಲ್ಲಿ ಒಬ್ಬ ತೀವ್ರ ಮುಂಗೋಪಿ. ಇನ್ನೊಬ್ಬ ಅದಕ್ಕೆ ತದ್ವಿರುದ್ಧ. ಇಬ್ಬರೂ ಅವರ ಸಾಮರ್ಥ್ಯದ ಮೇರೆಗೆ ತರಗತಿಯನ್ನೇನೋ ಚೆನ್ನಾಗಿಯೇ ನಿಭಾಯಿಸುತ್ತಿದ್ದರು. ಆದರೆ, ಕೊಟ್ಟ ಕೆಲಸದಲ್ಲಿ ತೃಪ್ತಿ ಹೊಂದಿರದ ಆ ಮುಂಗೋಪಿ ಹುಡುಗ ತನಗೆ ಸಿಕ್ಕ ಆ ನಾಯಕತ್ವದ ಅವಕಾಶ ಬೇಡ ಎಂದು ಕೈಚೆಲ್ಲಿದ್ದ. ಸಹಜವೆಂಬಂತೆ ತರಗತಿಯನ್ನು ಚೆನ್ನಾಗಿಯೇ ನಿಭಾಯಿಸಿದ್ದರಿಂದ ಇನ್ನೊಬ್ಬ ಹುಡುಗನಿಗೆ ಜವಾಬ್ದಾರಿ ನೀಡಲಾಯಿತು. ಆನಂತರ ಅದು ಕಾಯಂ ಆಗಿಯೂ ಹೋಯಿತು. ಆನಂತರ ಆತ ಶಾಲೆಗೇ ಮುಖಂಡತ್ವ ವಹಿಸಿದ.
ದುರಭ್ಯಾಸಗಳು ನಿಮಗಿದ್ಯಾ?
ಇಬ್ಬರು ವ್ಯಕ್ತಿಗಳು ಒಂದು ದ್ವೀಪದಲ್ಲಿ ಕಂಠಪೂರ್ತಿ ಕುಡಿದು ಮತ್ತರಾಗಿದ್ದರು. ಕುಡಿದು ಸಾಕೆನಿಸಿದ ಮೇಲೆ ಅವರು ಅಲ್ಲೆ ಇದ್ದ ಒಂದು ಪುಟ್ಟ ದೋಣಿಯಲ್ಲಿ ಮನೆಗೆ ತಲುಪಲು ನಿರ್ಧರಿಸಿ, ಹುಟ್ಟು ಹಾಕಲು ಶುರುವಿಟ್ಟರು. ದ್ವೀಪದಿಂದ ಮನೆಗೆ ದೋಣಿಯಲ್ಲಿ ತಲುಪಿದರೆ ಒಂದು ಗಂಟೆಯ ಪ್ರವಾಸವದು ಅಷ್ಟೇ. ಆದರೆ, ಅವರು ಬೆಳಗಾದರೂ ಹುಟ್ಟು ಹಾಕುತ್ತಲೇ ಇದ್ದರು. ಆದರೆ ಅವರು ದೋಣಿ ಹತ್ತಿದ ಒಂದಿಂಚು ಆಚೀಚೆ ಕದಲಿರಲಿಲ್ಲ. ದೋಣಿಯನ್ನು ದಡಕ್ಕೆ ಕಟ್ಟಿರುವುದು ಅವರ ಅರಿವಿಗೆ ಬರಲೇ ಇಲ್ಲ. ಬಂದಾಗ ಆಗಲೇ ಬೆಳಗಾಗಿತ್ತು. ನಾವು ಎಲ್ಲಿಯವರೆಗೂ ನಕಾರಾತ್ಮಕ ವಿಚಾರಗಳಿಗೆ, ದುರಭ್ಯಾಸಗಳಿಗೆ ಜೋತು ಬೀಳುತ್ತೇವೆಯೋ ಅಲ್ಲಿಯವರೆಗೂ ನಾವಂದುಕೊಂಡದ್ದನ್ನು ಸಾಧಿಸಲಾಗದು.
 ಹೇಳದೆ ಮಾಡಿ ಗೆದ್ದೇ ಗೆಲ್ತೀರಾ
ವಾಹನ ಕಂಪನಿ ಯೊಂದರ ಮಾಲೀಕ ತನ್ನ ಬಳಿ ಕೆಲಸ ಮಾಡುವ ಉದ್ಯೋಗಿಗಳಿಗೆ ಒಂದಿಷ್ಟು ಉತ್ಸಾಹ ಮತ್ತು ಕ್ರಮಬದ್ಧತೆ ಮೈಗೂಡಿಸುವ ಸಮಯ ಒದಗಿಬಂತು. ಇದಕ್ಕಾಗಿ ಆತ ಒಂದು ಸಭೆ ಏರ್ಪಡಿಸಿದ. ಅಲ್ಲಿ ಅವರಿಗೆ ನಾನಾ ಗೇಮ್ಳಿದ್ದವು. ಆ ಗೇಮ್ಳಲ್ಲಿ ಒಂದು ಕಂಪನಿಯಿಂದ ಆ ಸಿಬ್ಬಂದಿ ಏನು ನಿರೀಕ್ಷಿಸುತ್ತಿದ್ದಾರೆಂಬುದನ್ನು ಒಂದು ಕಪ್ಪು ಹಲಗೆಯಲ್ಲಿ ಬರೆಯಬೇಕಿತ್ತು. ಅದೆಲ್ಲವನ್ನೂ ವೀಕ್ಷಿಸುತ್ತಿದ್ದ ಮಾಲಿಕ, ವೆಲ್ ನೀವು ನಿರೀಕ್ಷಿಸುವ ಎಲ್ಲವನ್ನೂ ನಾನು ನೀಡಬಲ್ಲೆ. ಆದರೆ, ನಾನು ನಿಮ್ಮಿಂದ ಏನನ್ನು ನಿರೀಕ್ಷಿಸುತ್ತಿದ್ದೀನೆಂದು ಯಾರಾದರೂ ಹೇಳಬಲ್ಲಿರಾ ಎಂದು ಪ್ರಶ್ನೆಯಿತ್ತನು. ಸಿಬ್ಬಂದಿಗಳು ಎಲ್ಲರೂ ಕಾಯುತ್ತಿದ್ದವರಂತೆ ಒಂದೊಂದಾಗಿ, ನಿಷ್ಠೆ, ಪ್ರಾಮಾಣಿಕತೆ, ಇನ್ನೊಂದಿಷ್ಟು ಮಾರ್ಕೆಟಿಂಗ್ ಸ್ಕಿಲ್ಸ್, ಗ್ರಾಹಕಸ್ನೇಹಿ ಮನೋಭಾವ, ಸಮರ್ಪಣೆ.. ಹೀಗೆ ಒಂದಾದರೊಂದರಂತೆ ಪಟ್ಟಿ ನೀಡುತ್ತಾ ಹೋದರು. ಮಾಲಿಕನಿಗೆ ಇಷ್ಟೇ ಸಾಕಿತ್ತು. ಇವೆಲ್ಲವನ್ನೂ ನೀವೂ ನನಗೆ ಕೊಟ್ಟಿದ್ದೇ ಆದರೆ, ನೀವು ನಿರೀಕ್ಷಿಸುವ ಎಲ್ಲವನ್ನೂ ನೀಡುತ್ತೇನೆ ಎಂದು ಆಶ್ವಾಸನೆಯಿತ್ತನು. ಇದರಿಂದ ಅವರ ಮಾರಾಟ ಸ್ಪರ್ಧೆ ಹೆಚ್ಚಿತು. ಮಾಲಿಕ, ಸಿಬ್ಬಂದಿಗಳಿಗೆ ಹೀಗೆ ಮಾಡಿ, ಹಾಗೆ ಮಾಡಿ ಅನ್ನುವುದಕ್ಕಿಂತ ಅವರಿಗೆ ಸಂಪೂರ್ಣ ಸ್ವಾತಂತ್ರ ಕೊಟ್ಟು, ಹೇಳದೆಯೇ ಎಲ್ಲ ಹೇಳಿ ಮುಗಿಸಿದ್ದ. ಅಲ್ಲದೆ, ಇತರರನ್ನು ಸಂತೋಷಗೊಳಿಸಿ ತಾನೂ ಗೆದ್ದಿದ್ದ.
 ಏನು ಯೋಚಿಸ್ತಿರೋ ನೀವು ಅದೇ ಆಗ್ತೀರಿ
ಒಬ್ಬ ಕಥೆಗಾರ ತನ್ನ ಒಂದು ಪ್ರವಾಸ ಪುಸ್ತಕದ ಬರಹಕ್ಕೆ ಒಂದಿಷ್ಟು ಅನುಭವಗಳು ಬೇಕೆಂಬುದಾಗಿ ಒಂದು ನಗರದ ನಿಲ್ದಾಣಕ್ಕೆ ಭೇಟಿ ನೀಡಿದ. ಅಲ್ಲಿ ಒಂದೇ ಕಡೆಯಿಂದ ಬಂದ ನಾನಾ ವ್ಯಕ್ತಿಗಳು ಅವನಿಗೆ ಎದುರಾಗುತ್ತಾರೆ. ಅಲ್ಲಿ ಇಬ್ಬರನ್ನು ಆಯ್ಕೆ ಮಾಡಿಕೊಂಡು ಒಬ್ಬೊಬ್ಬರನ್ನು ಪ್ರತ್ಯೇಕವಾಗಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುವಂತೆ ಕೇಳಿಕೊಂಡ. ಸಂದರ್ಶನ ಆರಂಭವಾಯ್ತು. ನೀವೆಲ್ಲಿಂದ ಬಂದಿರಿ. ನೀವು ಬಂದ ಜಾಗದಲ್ಲಿದ್ದ ಜನರು ಎಂತಹವರಾಗಿದ್ದರು ತಿಳಿಸಿ ಎಂಬ ಎರಡು ಪ್ರಶ್ನೆಗಳನ್ನು ಇಬ್ಬರಿಗೂ ನೀಡಿದ. ಇಬ್ಬರೂ ಪ್ರತ್ಯೇಕವಾಗಿ ಉತ್ತರಗಳನ್ನು ಹೇಳಿದರು. ಮೊದಲನೆಯವನು ನಾನು ಮಿಲಿಂದ್​ನಿಂದ ಬಂದೆ. ಅಲ್ಲಿನ ಜನರು, ಸುಳ್ಳುಗಾರರು, ಮೋಸಗಾರರು ಹಾಗೂ ವಾಚಾಳಿಗಳು ಎಂದ. ಮತ್ತೊಬ್ಬ ನಾನು ಮಿಲಿಂದ್​ನಿಂದ ಬಂದೆ, ಅಲ್ಲಿನ ಜನರು ಸತ್ಯವಂತರು, ದಯಾಮಯಿಗಳು, ವಿಚಾರವಂತರು ಎಂದು ಹೇಳುತ್ತಾನೆ. ಆಗ ಇಬ್ಬರಿಗೂ ಆ ಕಥೆಗಾರ ಒಂದೇ ಉತ್ತರ ನೀಡುತ್ತಾನೆ. ಇಲ್ಲಿಯೂ ಅಂತದ್ದೇ ಜನರಿದ್ದಾರೆ. ನೀವು ಇಲ್ಲಿಯೂ ಅಂತದ್ದೇ ಅನುಭವಗಳನ್ನು ಕಾಣಬಲ್ಲಿರಿ!
ಎಲ್ಲಿ ಕಳೆದಿದ್ದೀರೋ ಅಲ್ಲೇ ಹುಡುಕಿ
ಒಬ್ಬ ಸಿರಿವಂತ ಹುಡುಗ ಓದಿನಲ್ಲಿ ಹಿಂದುಳಿದಿದ್ದ ಆದರೂ, ಆತ ಓದಿನಲ್ಲಿ ಯಶ ಸಾಧಿಸಬೇಕೆಂದು ಅಂದುಕೊಳ್ಳಲೇ ಇಲ್ಲ. ಅಪ್ಪನ ಅಕಾಲಿಕ ಮರಣದಿಂದ ಈತನಿಗೆ ಮುಂದೇನು ಮಾಡಬೇಕೆಂಬುದು ತಿಳಿಯದಾಯಿತು. ಸಂಸ್ಥೆಯನ್ನು ಹೇಗೆ ನಡೆಸಬೇಕು. ಚರ್ಚೆಗಳಲ್ಲಿ ಹೇಗೆ ಭಾಗವಹಿಸಬೇಕು ಎಂಬುದರ ಅರಿವೂ ಇಲ್ಲದಂತಾಯ್ತು. ಅಪಾರ ಆಸ್ತಿ ನೋಡಿಕೊಳ್ಳಲಾಗದೇ ಆತ ತತ್ತರಿಸಿಹೋದ. ಇದಕ್ಕೆಲ್ಲ ಕಾರಣವಾಗಿದ್ದು, ಓದಿನಲ್ಲಿ ಆತ ತೋರಿದ ನಿರ್ಲಕ್ಷ್ಯ ಒಂದು ದಿನ ಜ್ಞಾನೋದಯವಾಗಿ ವಿದ್ಯೆಯಿಲ್ಲದೇ, ಅದೆಷ್ಟೇ ಶ್ರೀಮಂತಿಕೆಯಿದ್ದರೂ ಕಾಪಾಡಿಕೊಳ್ಳಲಾಗದು ಎಂಬ ಅರಿವಾಗಿ, ಆತ ತನ್ನ 32ನೇ ವಯಸ್ಸಿಗೆ ಮತ್ತೆ ಓದಲು ಶುರು ಮಾಡಿಕೊಂಡ. ಅದರ ಜತೆಗೆ ಬೇಕಾದ ಕೌಶಲಗಳನ್ನು ಕಲಿತ. ಆನಂತರ ಆತನ ಯಶಸ್ಸಿನ ಪಯಣ ಕೊನೆ ಕಾಣಲೇ ಇಲ್ಲ.
ಸ್ಮಾರ್ಟ್ ಆಗಿದ್ರೆ ಕೆಲಸ ಸಲೀಸು…
ಪುರಾತನ ಲೈಬ್ರರಿಗೆ ಒಬ್ಬ ಹೊಸದಾಗಿ ಗ್ರಂಥಪಾಲಕನಾಗಿ ಸೇರಿಕೊಂಡ. ಸೇರಿದ ಕೆಲವೇ ದಿನಗಳಿಗೆ ಅವನಿಗೆ ತಿಳಿದದ್ದು, ಅದು ಹೇಳಿಕೊಳ್ಳಲಷ್ಟೇ ಪುರಾತನ. ಅಲ್ಲಿಗೆ ಭೇಟಿ ನೀಡುವವರ್ಯಾರು ಇತಿಹಾಸ ಸೇರಿ ಹಳೆಯ, ಮೌಲ್ಯಯುತವಾದ ಪುಸ್ತಕಗಳನ್ನು ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಆಗ, ಗ್ರಂಥಪಾಲಕ ಒಂದು ಉಪಾಯ ಮಾಡಿದ. ಹಳೆಯ ಪುಸ್ತಕಗಳ ಪಟ್ಟಿ ಮಾಡಿ, ಅದನ್ನು ಒಂದೆಡೆ ಜೋಡಿಸಿ ಅವುಗಳ ಮೇಲೆ ಒಂದು ಲೇಬಲ್ ಅಂಟಿಸಿದ. ಅದು ಹೀಗಿತ್ತು ‘ಈ ಪುಸ್ತಕಗಳನ್ನು ಓದುವುದು ಬಹಳ ಕಷ್ಟ. ಹಾಗೇನಾದರೂ ಓದಬೇಕೆಂದರೆ ಅಪಾರ ತಿಳಿವಳಿಕೆ ಬೇಕು.’ ಹೀಗೆ ಮಾಡಿದ ಎರಡೇ ದಿನಗಳಲ್ಲಿ ಆ ಕಬೋರ್ಡ್​ನಲ್ಲಿ ಒಂದೂ ಪುಸ್ತಕ ಉಳಿದಿರಲಿಲ್ಲ.
ಎಲ್ಲಿ ಸಿಕ್ಕರೂ ಸರಿ ಪ್ರೇರಣೆಯನ್ನು ಹೆಕ್ಕಿಕೊಳ್ಳಿ
ಹದಿಹರೆಯದ ಒಬ್ಬ ಹುಡುಗ ತಾನಿನ್ನೂ ಬದುಕಲು ಲಾಯಕ್ಕಿಲ್ಲ. ಈ ಬದುಕಿಗೆ ಯಾವುದೇ ಅರ್ಥವಿಲ್ಲ. ಇಷ್ಟಪಟ್ಟದ್ದು ಯಾವುದೂ ದಕ್ಕುತ್ತಿಲ್ಲ, ಇಷ್ಟಕ್ಕೂ ನಾನು ಅದನ್ನು ಇಷ್ಟಪಟ್ಟಿದ್ದಕ್ಕೇ ನನಗದು ಸಿಗಲಿಲ್ಲ, ನಾನೊಬ್ಬ ದುರದೃಷ್ಟವಂತ ನನಗೆ ಏನೂ ಮಾಡಲು ಆಗದು ಎಂದು ಅಂದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಒಂದು ದಾರಿಯಲ್ಲಿ ಸಾಗುತ್ತಿದ್ದ. ದಾರಿ ಮಧ್ಯೆ ಒಬ್ಬ ರೈತ ಸಿಕ್ಕ. ಆತ ತನ್ನ ಎತ್ತುಗಳೊಂದಿಗೆ ಒಂದೆಡೆಯಿಂದ ಇನ್ನೊಂದೆಡೆಗೆ ತುಂಬು ಕೊಡಗಳಲ್ಲಿ ನೀರನ್ನು ಸಾಗಿಸುತ್ತಿದ್ದ. ಆ ರೈತನಿಗೆ ಎರಡು ಬಾರಿಯಿಂದ ನೀರಾವರಿ ತೊಂದರೆಯಿಂದ ಬೆಳೆ ಕೈ ಹತ್ತಿರಲಿಲ್ಲ. ಆದರೂ, ಆತ ಬೆಳೆ ಬೆಳೆಯುವುದನ್ನು ನಿಲ್ಲಿಸದೇ, ಈ ವರ್ಷವೂ ಪೈರನ್ನು ಹಾಕಿ, ಮಾಡುವ ಕೆಲಸವನ್ನೇ ಮತ್ತಷ್ಟು ಶ್ರದ್ಧೆಯಿಂದ ಮಾಡಲು ಮುಂದಾಗಿದ್ದ. ಆತನ ಅತೀವ ತಾಳ್ಮೆ, ಕಳೆದುದ್ದಕ್ಕೆ ಬೇಸರಿಸದೇ, ಮತ್ತೆ ಅದೇ ಕೆಲಸದಲ್ಲಿ ತೊಡಗಿಕೊಂಡಿದ್ದರ ಲವಲವಿಕೆಯನ್ನು ಆತ ಗಮನಿಸಿದ. ತನ್ನಲ್ಲೇ ಆತ ಕೆಲ ಮಾತುಗಳನ್ನು ಹೇಳಿಕೊಂಡ. ತನಗೇ ಈ ರೈತನಿಗಾದಂಥ ಯಾವ ನಷ್ಟಗಳೂ ಆಗಿಲ್ಲ. ತಾನು ಅಂದುಕೊಂಡಿದ್ದು ಸಿಗುವುದಿಲ್ಲ ಎಂದು ಭಾವಿಸಿದ್ದೇನೆ. ಇಷ್ಟಕ್ಕೂ ನಾನದನ್ನೂ ಪಡೆಯುವುದಕ್ಕೆ ಈ ರೈತನ ಹಾಗೇ ಯಾವ ವಿಧವಾದ ಪ್ರಯತ್ನವನ್ನೂ ಮಾಡಿಯೇ ಇಲ್ಲ. ಅಂಥಾದ ಮೇಲೆ ಸಿಗುತ್ತಿಲ್ಲ ಎಂದು ಕರುಬುತ್ತಿರುವುದರಿಂದ ಆದ ಪ್ರಯೋಜನವಾದರೂ ಏನು? 
ಇಷ್ಟಕ್ಕೂ ಜಗತ್ತಿನಾದ್ಯಂತ ಆಚರಿಸೋ ನ್ಯೂ ಇಯರ್ ಆಚರಣೆಗೆ ಬಂದದ್ಹೇಕೆ ಗೊತ್ತಾ? ತಪ್ಪುಗಳಿಗೂ/ನೋವುಗಳಿಗೂ ಒಂದು ಅಂತ್ಯ ಕಾಣಿಸಿ ಹೊಸ ಬದುಕನ್ನ ಆಹ್ವಾನಿಸಿ ಹೊಸ ಮನುಷ್ಯರಾಗೋಕೆ. ನ್ಯೂನತೆಗಳನ್ನು ಕಳಚಿ, ಹೊಸದಾಗಿ ರೂಪುಗೊಳ್ಳೋದಕ್ಕೆ. ನಾವುಗಳು, ನೀವುಗಳು ಯಾವತ್ತಾದರೂ ಸರಿಯೇ, ಆ ಅವಕಾಶದಿಂದ ವಂಚಿತರಾಗದೇ ಬಂದದ್ದನ್ನು ಬಂದ ಹಾಗೆ ಸ್ವೀಕರಿಸಿ, ‘ಇಂದಿಗಿಂತ ಮುಂದಿನ ದಿನಗಳು ಅದ್ಭುತವಾಗಿರಲಿವೆ ಮತ್ತು ಆ ಅದ್ಭುತವನ್ನ ನಾನೇ ಸೃಷ್ಟಿಸಿಕೊಳ್ಳುತ್ತೇನೆ’ ಎಂಬ ಸಂಕಲ್ಪ ಮಾಡೋಣ. ಇಷ್ಟು ಸಾಕಲ್ವ 2017ನ್ನು ಯಶಸ್ವಿಯಾಗಿ ಪೂರ್ಣಗೊಳಿಸೋಕೆ. ಜಸ್ಟ್ ಎಂಜಾಯ್.

-| ಭಾಚಿ.

Wednesday 14 December 2016

`ಡಿಯರ್ ಜಿಂದಗಿ'.... ಕ್ಯೂಟ್ ವಯಸ್ಸಿಗೆ 7 ಬ್ಯೂಟಿಫುಲ್ ಪಾಠ


ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದವನ ಜತೆ ಬ್ರೇಕಪ್ ಆಗಿದೆ, ಓದು ಯಾಕೋ ತಲೆಗೆ ಹತ್ತುತ್ತಲೇ ಇಲ್ಲ, ಇಷ್ಟಪಟ್ಟಿದ್ದ ಕೆಲಸ ಕೈ ತಪ್ಪಿಹೋಗಿದೆ, ಅಪ್ಪ-ಅಮ್ಮ ಸರಿಯಾಗಿ ಬೆಂಬಲ ನೀಡುತ್ತಿಲ್ಲ, ತನ್ನ ಬದುಕು ತಾನೇ ಕಟ್ಟಿಕೊಳ್ಳುವ ಸಮಯದಲ್ಲೂ ಇನ್ನೊಬ್ಬರಿಗೆ ಹೊರೆಯಾಗಿ ನಿಂತಿz್ದÉೀನೆ, ಇನ್ನೂ ಏನನ್ನೂ ಸಾಧಿಸಿಲ್ಲ ಎಂಬ ಕಾರಣಕ್ಕೆ ಈ ಸಮಾಜ ಕೂಡ ಕೀಳಾಗಿ ಕಾಣುತ್ತಿದೆ...ಸಾಮಾನ್ಯವಾಗಿ ಯುವಜನತೆಗೆ ಎದುರಾಗುವ ಸಮಸ್ಯೆಗಳ ಪಟ್ಟಿಯಲ್ಲಿ ಇವುಗಳಿಗೆ ಮೊದಲ ಸ್ಥಾನ. ಖುಷಿಗೂ, ದುಃಖಕ್ಕೂ ಬಹುಬೇಗ ಸ್ಪಂದಿಸುವ ಯುವಮನಸುಗಳನ್ನು ಈ ಬದುಕನ್ನ ಪ್ರೀತಿಸೋದಕ್ಕೆ ಒಗ್ಗಿಸುವುದು ಅಂದ್ರೆ ಸುಖಾಸುಮ್ಮನೆಯ ಮಾತಲ್ಲ ಬಿಡಿ. ಆದರೆ, ಅದೆಂತಹ ದುರಂತದ ಅಧ್ಯಾಯಕ್ಕೂ ಅಂತ್ಯ ಹಾಡಿ, ಹೊಸ ಅಧ್ಯಾಯ ಪ್ರಾರಂಭಿಸಿ ಬದುಕನ್ನ ಚಾಲೂ ಮಾಡಿಬಿಡಬಹುದು. ಎಲ್ಲದಕ್ಕೂ ಕೊಂಚ ಸಾವಧಾನ ಬೇಕಷ್ಟೆ. ಅದಕ್ಕೆ `ಡಿಯರ್ ಜಿಂದಗಿ' ಚಿತ್ರ ಉತ್ತಮ ಉದಾಹರಣೆ. ಅದರ ಒಂದಷ್ಟು ಸಂದೇಶಗಳ ಕ್ವಿಕ್ ಸಿರಪ್ ನಿಮಗಾಗಿ..
1. ಆದದ್ದು ಆಗಲಿ, ಮುಂದಿನ ಆಯ್ಕೆ ಸರಿ ಇರಲಿ:
 ಸಣ್ಣ ಆಘಾತಕ್ಕೂ ಜೀವನವೇ ಬರಿದಾಯಿತು ಎಂಬಂತೆ ವರ್ತಿಸುವ ಯುವ ಸಮುದಾಯಕ್ಕೆ, ಬಿದ್ದಷ್ಟೇ ವೇಗವಾಗಿ ಫಿನಿಕ್ಸ್‍ನಂತೆ ಎದ್ದು ಸಾಗಿದ ಕೆಲವು ಸಾಧಕರ ಜೀವನದ ಕಥೆಗಳು ಪ್ರೇರಣೆಯಾಗಬಲ್ಲದು. ಇಂದು ಏಟಿನ ಮೇಲೆ ಏಟು ಬೀಳುತ್ತಿದೆ ಎಂದರೆ, ಮುಂದೆ ತಾನೂ ಅದ್ಭುತವಾಗಿ ಬದುಕಬಲ್ಲೆ ಎಂಬುದನ್ನು ನೆನಪಿಡಿ. ಸಾಧಕರ ಕಥೆಗಳನ್ನು ಓದಿ. ಓದಲು ಬೋರ್ ಅನಿಸಿದರೆ, ಅಂತಹವರ ಕೆಲವು ಮಾತುಗಳು, ಸ್ಫೂರ್ತಿದಾಯಕ ನುಡಿಗಳು ಯೂಟ್ಯೂಬ್‍ನಲ್ಲಿ ಲಭ್ಯ. ತಲೆ ತುಂಬ ಯೋಚನೆಗಳೇ ತುಂಬಿ ಹಾಳು ಮಾಡುತ್ತಿವೆ ಅಂದಾಗ ಇಂತಹವುಗಳು ನಿಜಕ್ಕೂ ಕ್ವಿಕ್ ಟಾನಿಕೇ ಸರಿ. ಮುಂದಡಿ ಇಡಲು ಇದಕ್ಕಿಂತ ಉತ್ತಮ ಮಾರ್ಗದರ್ಶನವುಂಟೆ ?
2. ನಿಮ್ಮೊಳಗಿನ 5 ಜನರನ್ನು ನಿಯಂತ್ರಿಸಿ, ಬಡಿದೆಬ್ಬಿಸಿ.
ಯಾವಾಗಲೂ ನಾವು ಹೊರಗಿನವರನ್ನು ನಿಯಂತ್ರಿಸುವುದಕ್ಕೆ ಉತ್ಸುಕರಾಗಿರುತ್ತೇವೆ. ಅದು ಎಷ್ಟು ದಿನ ಸಾಧ್ಯವಾದೀತು? ಆದರೆ ನಮ್ಮೊಳಗೇ ಬಂಧಿಯಾಗಿರುವ ಭಾವಗಳನ್ನು ಮುಕ್ತಗೊಳಿಸುವುದು, ಹಿಡಿದಿಡುವುದರ ಬಗ್ಗೆ ಸಣ್ಣ ಯೋಚನೆ ಕೂಡ ಮಾಡುವುದಿಲ್ಲ.  ಅದೇ ನಮ್ಮಲ್ಲಿನ ಶಕ್ತಿ, ದೌರ್ಬಲ್ಯ, ಪ್ರತಿಭೆ, ಕೋಪ, ಅನುಕೂಲ. ನಮ್ಮ ಶಕ್ತಿ, ದೌರ್ಬಲ್ಯ ನಮಗೆ ಮಾತ್ರವೇ ಗೊತ್ತಿರುತ್ತೆ. ಅದನ್ನು ಎಲ್ಲಿ ಹೇಗೆ ಬಳಸಿಕೊಳ್ಳಬೇಕು, ಹಿಡಿದಿಡಬೇಕು ಎಂಬುದರ ಅರಿವಿರಲಿ. ಪ್ರತಿಭೆಯ ಅನಾವರಣಕ್ಕೆ ಇದು ಕೂಡ ಪೂರಕವಾದೀತು. ಇನ್ನು ಕೋಪದ ಮಟ್ಟ ಎಷ್ಟಿರಬೇಕು? ನಾವು ಎಲ್ಲಿದ್ದರೆ, ಹೇಗಿದ್ದರೆ ಆರಾಮಾಗಿ ಇರಬಲ್ಲೆವು ಎಂಬುದರ ಮೇಲೆ ನಿಗಾ ಇರಲಿ.
 3. ನಿಮ್ಮ ಬಗ್ಗೆ ನೀವು ತಿಳಿಯಿರಿ:
ಯಾವಾಗಲೂ ಸ್ನೇಹಿತರು, ಅಕ್ಕಪಕ್ಕದವರ ಬಗ್ಗೆಯೇ ಯೋಚಿಸುತ್ತ, ತಿಳಿಯಲು ತವಕಿಸುತ್ತ ಇರುವ ನಾವು, ನಮ್ಮ ಬಗ್ಗೆ ತಿಳಿಯುವುದಕ್ಕೆ ಮುಂದಾಗುವುದೇ ಇಲ್ಲ. ಮೊದಲು ನಮ್ಮನ್ನು ನಾವು ಅರಿಯುವುದು ಮುಖ್ಯ. ನಮಗೇನು ಬೇಕು? ಯಾವುದನ್ನ ಮನಸ್ಸು, ಬುದ್ಧಿ ಅಪೇಕ್ಷಿಸುತ್ತಿದೆ? ಯಾವುದು ಬದುಕಿಗೆ ಅತ್ಯಗತ್ಯ? ಎನ್ನುವುದನ್ನು ಅರಿಯಬೇಕು. ಅದನ್ನು ಅರಿಯದ ಹೊರತು ನೀವು ಸಾಗುವ ದಾರಿಯಲ್ಲಿ ವೇಗ ಕಾಣದು.
4. ನಿಮ್ಮ ಬಗ್ಗೆ ನೀವೇ ಕಠಿಣರಾಗದಿರಿ:
ನನ್ನ ಸಾಮಥ್ರ್ಯ ಇಷ್ಟೇ. ನನ್ನಿಂದೇನೂ ಆಗದು ಎನ್ನುವ ನಿರ್ಧಾರಗಳೂ ನಮ್ಮನ್ನು ಮತ್ತಷ್ಟು ಕುಗ್ಗಿಸಿಬಿಡುತ್ತವೆ. ನಿಮ್ಮನ್ನು ನೀವು ಕೇವಲವಾಗಿ ನೋಡುವುದನ್ನು ನಿಲ್ಲಿಸಿ. ಎಸ್, ಇದು ನನ್ನಿಂದ ಸಾಧ್ಯ ಎಂಬ ಉತ್ಸಾಹದ ಗುಳಿಗೆಯನ್ನು ಮನಸ್ಸಿಗೆ ಆಗಾಗ ನೀಡುತ್ತೀರಿ. ನಿಮ್ಮ ಮೇಲಿರುವ ನೆಗೆಟಿವಿಟಿ ದೂರವಾದರೆ ಬದುಕಿನ ಸ್ವಾದವನ್ನು ಅರ್ಧ ದಕ್ಕಿಸಿಕೊಂಡಂತೆ.
5. ಖುಷಿ ಘಟನೆಗಳ ಖಜಾನೆ ಆದಷ್ಟು ತುಂಬಿಸಿ:
ಬದುಕು ಸಿಹಿ-ಕಹಿ ಅನುಭವಗಳ ಮೂಟೆ. ಆದರೆ ಯಾವುದನ್ನ ಕೂಡಿಟ್ಟರೆ ಬದುಕಿನ ಗತಿಯನ್ನು ವೇಗ ಮಾಡಬಹುದು ಎಂಬುದು ನಮಗೇ ಬಿಟ್ಟದ್ದು. ಬದುಕಲ್ಲಿ ಕಹಿ ಇದ್ದಷ್ಟೇ ಸಿಹಿ ಘಟನೆಗಳೂ ಇರುತ್ತವೆ, ಅವು ನಮ್ಮನ್ನು ಖುಷಿಯಾಗಿರಿಸುತ್ತವೆ. ಆದಷ್ಟು ಅಂಥವುಗಳನ್ನೇ ನೆನಪಿನ ಖಜಾನೆಯಲ್ಲಿ ತುಂಬಿಸಿಡಿ. ಅವು ನಿಜಕ್ಕೂ ಬದುಕಿನ ವೇಗ ಹೆಚ್ಚಿಸುವುದು ಮಾತ್ರವಲ್ಲ, ಸರಿಯಾದ ಲಯದಲ್ಲಿಯೂ ಮುನ್ನಡೆಸುತ್ತವೆ.
6. ಪೆÇೀಷಕರೊಂದಿಗೆ ಆದಷ್ಟು ಮಾತನಾಡಿ
ತಂದೆ ತಾಯಿ ಮಕ್ಕಳಿಗೆ ಕೆಟ್ಟದ್ದಾಗಲಿ ಅಂಥ ಯಾವತ್ತೂ ಬಯಸುವುದಿಲ್ಲ. ಆದರೆ, ಅವರ ತ್ಯಾಗಗಳೇ ಕೆಲವೊಮ್ಮೆ ಮಕ್ಕಳಿಗೆÀ ಮುಳುವಾಗಿದ್ದುಂಟು. ಅವರಿಗೆ ಹೆಚ್ಚಿನ ಸಮಯ ನೀಡದೆ ತಪ್ಪು ಮಾಡಿರಬಹುದು. ಆದರೆ, ಬೆಳೆದು ಸ್ವಂತ ಯೋಚನೆ ಮಾಡುವ ವಯಸ್ಸಿನಲ್ಲಿರುವ ನಾವು ಅವರೊಟ್ಟಿಗೆ ನಮ್ಮ ಸುಖ-ದುಃಖ, ಅವರು ನಮಗಾಗಿ ಕಷ್ಟಪಟ್ಟ ಘಟನೆಗಳ ಬಗ್ಗೆ ಕೇಳಿದರೆ ಅವರ ಬಗ್ಗೆ ತಿಳಿಯುವುದರ ಜತೆಗೆ, ಅವರೊಂದಿಗಿನ ಸಂಬಂಧ ಗಟ್ಟಿಯಾಗುತ್ತೆ. ಜಗತ್ತು ತಿರಸ್ಕರಿಸಿದರೂ, ದೂಷಿಸಿದರೂ, ಹೆತ್ತವರಿಗೆ ಹೆಗ್ಗಣವೂ ಮುದ್ದು. ಅವರೊಂದಿಗೆ ನಿಮ್ಮೆಲ್ಲ ಮಾತುಗಳನ್ನು ಹೇಳಿಕೊಳ್ಳಿ.
7. ಮುಂದಿನ ಭವಿಷ್ಯ ನಿಮ್ಮ ಕೈಯಲ್ಲಿದೆ :
ಹಿಂದಿನದರ ಚಿಂತೆಯಲ್ಲಿ ಕೈಯಲ್ಲಿರುವ ಇಂದು, ಇಂದಿನ ಅದ್ಭುತ ಕ್ಷಣಗಳನ್ನು ಆಸ್ವಾದಿಸದೇ ಹೋದರೆ, ಇದು ಕೂಡ ಇತಿಹಾಸ ಸೇರದು. ಇಂದಿನ ಕ್ಷಣಗಳನ್ನು ಅದ್ಭುತವಾಗಿರಿಸಿಕೊಳ್ಳದೇ ಹೋದರೆ, ಮುಂದಿನ ಅತ್ಯದ್ಭುತ ಕ್ಷಣಗಳನ್ನು ಖಂಡಿತಾ ಮಿಸ್ ಮಾಡಿಕೊಂಡಂತೆ. ಬದುಕಲ್ಲಿ ಬರುವ ಎಲ್ಲ ಅನುಭವಗಳು ಒಂದಲ್ಲ ಒಂದು ಪಾಠ ನೀಡಲೇ ಬರುವಂಥವು. ಬಂದದ್ದನ್ನ ಪಾಸಿಟಿವ್ ಆಗಿ ಸ್ವೀಕರಿಸಿ. ಜಸ್ಟ್ ಚಿಲ್. ನಿನ್ನೆಯದರ ಚಿಂತೆ ಬೇಡ, ಈ ದಿನ ನಮ್ಮದು.... ಅಷ್ಟೆ.
ಯಾರಿಗಾದರೂ ಬದುಕಿನಲ್ಲಿ ಆಕಸ್ಮಿಕವಾಗಿ ಘಟಿಸಿಬಿಡುವ ಕಹಿ ಅನುಭವದಿಂದ ಹೊರಬರುವುದು ಕಷ್ಟವೇ. ಅದರಲ್ಲೂ ಭಗ್ನಪ್ರೇಮ, ನಿರಂತರವಾದ ಏಕಾಂಗಿತನ, ನಿರಾಶೆಯು ಓರ್ವ ವ್ಯಕ್ತಿಯ ಬದುಕನ್ನು ಹೇಗೆಲ್ಲ ಹಾಳುಮಾಡಬಲ್ಲದು. ಅದರಿಂದ ಹೊರ ಬರುವುದು ಹೇಗೆ ಅನ್ನೋ ತೊಳಲಾಟ ಸರ್ವೇಸಾಮಾನ್ಯ. ಆದರೆ, ಎಲ್ಲದಕ್ಕೂ ಪರಿಹಾರ ಒಂದಿದೆ ಎಂಬ ಸಾರ್ವಕಾಲಿಕ ಸತ್ಯವನ್ನೂ ಅರಿತರೆ ಬದುಕಿನೊಟ್ಟಿಗೆ ಪ್ರೀತಿಯಾಗುವುದು ಖಂಡಿತ.










Thursday 29 September 2016



ಬದುಕೆನ್ನುವುದು ರಾತ್ರೋ ರಾತ್ರಿ ರೂಪುಗೊಳ್ಳುವುದಿಲ್ಲ. ಅದಕ್ಕೆ ಎಷ್ಟೋ ವರ್ಷಗಳ ತಪಸ್ಸು ಬೇಕು. ನಿಯಮ ಬೇಕು, ನಿರೀಕ್ಷೆ ಬೇಕು, ಎಲ್ಲಕ್ಕಿಂತ ಹೆಚ್ಚಾಗಿ ಒಂದು ಮುಷ್ಠಿ ಹೆಚ್ಚೇ ಎನಿಸುವಷ್ಟು ಶ್ರದ್ಧೆ ಬೇಕು. ಒಂದು ಕಡೆಯಿಂದ ಅದನ್ನ ಕಟ್ಟಿಕೊಳ್ಳುತ್ತಾ ಬರಬೇಕು. ಅಪ್ಪಿ ತಪ್ಪಿ ಕೂಡ ಎಲ್ಲಿಯೂ ಆ ತಪಸ್ಸಿಗೆ ಭಂಗ ಬರದಂತೆ ಎಚ್ಚರ ವಹಿಸಬೇಕು..!
ನಿಜಕ್ಕೂ ಇವಿಷ್ಟು ಅನುಸರಿಸಿz್ದÉೀ ಆದರೆ ಕನಸಿಗೆ ರೆಕ್ಕೆಕಟ್ಟಿ ಅದನ್ನ ತಲುಪುವುದೇ ತನ್ನ ಗುರಿ ಎಂದುಕೊಂಡು ಹೊರಟರೆ, ಅಂದುಕೊಂಡ ಬದುಕನ್ನ ಅರ್ಧಪಾಲು ದಕ್ಕಿಸಿಕೊಂಡಂತೆ. ಆದರೆ ಕೆಲ ನ್ಯೂನತೆಗಳನ್ನ ಬಗಲಲ್ಲೇ ಇರಿಸಿ, ಮನಸ ಮೂಲೆಯಲ್ಲಿ ಇದು ನನ್ನಿಂದಾ ಸಾಧ್ಯವಾ ಎಂದು ಅಳುಕಿಟ್ಟುಕೊಂಡೇ ಸಾಗಹೊರಟವರು ಅದೆಷ್ಟೋ ಮಂದಿ ಮಗುಚಿಬಿದ್ದಿದ್ದಾರೆ, ಅರ್ಧದಲ್ಲೇ ಕೈಚೆಲ್ಲಿ ಇದು ತನ್ನಿಂದ ಸಾಧ್ಯವೇ ಇಲ್ಲ ಎಂದು ಮರಳಿದವರಿದ್ದಾರೆ. ಇನ್ನೂ ಕೆಲವರು ದಿಕ್ಕನ್ನೇ ಬದಲಿಸಿ, ಕೈಗೊಪ್ಪಿದ ಕಾಯಕದಲ್ಲಿ ಯಶಸ್ಸು ಗಳಿಸಿಕೊಂಡವರಿದ್ದಾರೆ.
ಆರು ವರ್ಷಗಳ ಹಿಂದೆ ಪತ್ರಿಕೋದ್ಯಮದ ಪದವಿ ಮುಗಿಸಿ, ಒಂದು ಖಾಸಗಿ ಸಂಸ್ಥೆಗೆ ಇಂಟರ್ನಿಯಾಗಿ ಸೇರಿದಾಗ ಸ್ವಭಾವತಃ ಒಂದಷ್ಟು ಉತ್ಸಾಹ, ಆಸಕ್ತಿ, ಎಲ್ಲಕ್ಕೂ ಹೆಚ್ಚಾಗಿ ಆ ಪತ್ರಿಕೆಯಲ್ಲಿ ತನ್ನದೊಂದು ಬೈಲೈನ್ ಬರಬೇಕೆಂಬ ಧಾವಂತದಲ್ಲಿ `ಅ'ಪೂರ್ಣಗೊಂಡ  ಲೇಖನವೊಂದನ್ನು ಸಂಸ್ಥೆಯ ಸಹಾಯಕ ಮುಖ್ಯಸ್ಥರ ಮುಂದಿಟ್ಟಿದ್ದೆ. ಪ್ರಕಟಗೊಳಿಸುವಂತೆ ಮನವಿಯನ್ನೂ ಮಾಡಿದ್ದೆ. ಆದರೆ ಅವರು ನೇರವಾಗಿ ಲೇಖನ ಸರಿಯಾಗಿ ಮೂಡಿಬಂದಿಲ್ಲ ಎನ್ನಲೇ ಇಲ್ಲ. ಬದಲಾಗಿ ಆ ಲೇಖನದ ವಿಭಿನ್ನ ಕೋನಗಳನ್ನು ಸ್ಪಷ್ಟ ಉದಾಹರಣೆಗಳೊಂದಿಗೆ ವಿವರಿಸಿ ಹೇಳಿದ್ದರು. ಇದನ್ನ ಹೀಗೂ ಬರೆಯಬಹುದು. ಹೀಗೂ ಯೋಚಿಸಬಹುದು. ಎಲ್ಲರೂ ಬರೆಯುವ ಹಾಗೆಯೇ ಬರೆಯಬೇಕೆಂದೇನಿಲ್ಲ, ಆಲೋಚನೆಗಳು ಬದಲಾದಷ್ಟು, ಓದುಗರು ಬರಹಗಳನ್ನು ನಮ್ಮಂತೆಯೇ ಪ್ರೀತಿಸುತ್ತಾರೆ. ಪ್ರಯೋಗ ಬರಹಗಳು ಸತ್ವಯುತವಾಗಿರಲಿ. ಯಾವುದೇ ವಿಷಯ ಆಯ್ಕೆ ಮಾಡಿಕೊಂಡರೂ, ಅದರ ಆಳಕ್ಕಿಳಿದು ಅಧ್ಯಯನ ಮಾಡಿಯೇ ಲೇಖನಕ್ಕಿಳಿಸಬೇಕು. ಮತ್ತು ಅವರು ನನಗರರ್ಥವಾಗುಂತೆ ಹೇಳಿದ್ದಿಷ್ಟು `ಪತ್ರಕರ್ತರು ಯಾವಾಗಲೂ ಕುರಿಗಳಂತೆ ಇರಬೇಕು. ಒಂದು ಕಡೆಯಿಂದ ಅದನ್ನು ತಿನ್ನುತ್ತಾ ಬರಬೇಕು, ಇನ್ನೊಂದು ಕುರಿ ಅಲ್ಲಿ ಬಂದರೂ, ಅದಕ್ಕೆ ತಿನ್ನುವುದಕ್ಕೆ ಏನೂ ಇರಕೂಡದು' ಈ ಮಾತು ಈಗಲೂ ಅವರು ನನ್ನ ಕಿವಿಯಲ್ಲಿ ಆಗಾಗ ಬಂದು ಹೇಳಿದಂತೆಯೇ ಭಾಸವಾಗುತ್ತಿರುತ್ತೆ. ಅವರ ಆ ಮಾತು ಅಷ್ಟು ಸ್ಪಷ್ಟವಾಗಿತ್ತು. ಈ ಕ್ಷೇತ್ರದಲ್ಲಿ ಉಳಿಯಬೇಕು ಎಂದುಕೊಂಡರೆ ವಿಷಯದ ಅರಿವು ಎಷ್ಟರ ಮಟ್ಟಿಗೆ ಇರಬೇಕು ಎಂಬುದನ್ನು ಒತ್ತಿ ಎರಡೇ ವಾಕ್ಯದಲ್ಲಿ ಹೇಳಿ ಮುಗಿಸಿದ್ದರು. ವಿಷಯದ ಬಗ್ಗೆ ಅರಿವಿಲ್ಲದೆ ಬರೆಯುವ ಕೆಲಸವನ್ನು ನಾನಂದೆಯೇ ಕೈಬಿಟ್ಟೆ. ಅಲ್ಲದೆ, ಹಲವು ವಿಷಯದ ಬಗ್ಗೆ ಒಂದೇ ಸಮಯದಲ್ಲಿ ತಿಳಿದುಕೊಳ್ಳುವ ಅವಸರವನ್ನು ನಾನಂದಿನಿಂದ ಯಾವತ್ತಿಗೂ ಮಾಡಿಲ್ಲ. ಬದಲಾಗಿ ಒಂದೇ ವಿಷಯದಲ್ಲಿನ ಹಲವು ಕೋನಗಳನ್ನು ಅಭ್ಯಸಿಸುತ್ತಾ ಹೊರಟೆ. ಸತ್ಯಾಂಶವೆಂದರೆ, ನನಗಿನ್ನೂ ಒಂದು ವಿಷಯವನ್ನೇ ಪೂರ್ಣಗೊಳಿಸಲಾಗಿಲ್ಲ. ವಿಷಯದ ಆಳ ಅಗಲಗಳು ಈ ಮಟ್ಟಕ್ಕಿದೆ ಎಂದು ಮನನವಾಗಿದೆ.
ಇಷ್ಟಕ್ಕೂ ಅನಿವಾರ್ಯಕ್ಕೆ ಬಿದ್ದು, ಬರೆಯುವ ಅದೆಷ್ಟೋ ಲೇಖನಗಳು ಪೂರ್ವಾಪರ ತಿಳಿಯದೇ ಅರ್ಧಂಬರ್ಧ ಎನಿಸಿ, ಮತ್ತೊಮ್ಮೆ ಓದಿದಾಗ ಮನಸ್ಸಿಗೆ ಹಿಡಿಸದೆಯೇ ಅದನ್ನು ಅಳಿಸಿ ಹಾಕಿದ್ದುಂಟು. ಆದರೆ, ಮತ್ತೆಲ್ಲೋ ಅದರ ಬಗ್ಗೆ ಓದಿದಾಗ ಅದನ್ನು ಈ ರೀತಿ ಪೂರ್ಣಗೊಳಿಸಬಹುದಿತ್ತೇನೋ ಎಂದೂ ಅನಿಸಿದೆ. ಸಾಕಷ್ಟು ಗ್ರೌಂಡ್‍ವರ್ಕ್ ಮಾಡಿ, ಕೊಟ್ಟ ಲೇಖನಗಳು ಸಂಸ್ಥೆಯ ಮುಖ್ಯಸ್ಥರಿಗೂ ಹಿಡಿಸಿ, ಓದುಗರಿಗೂ ಇಷ್ಟವಾಗಿ ಬಹಳಷ್ಟು ಪ್ರಶಂಸೆಯ ಮಾತುಗಳು  ಕೇಳಿಬಂದಿವೆ. ಆದರೆ, ಅನಿವಾರ್ಯತೆಗೆ ಜೋತುಬಿದ್ದು ಬರೆದ ಲೇಖನಗಳು ಯಾರೂ ಗುರುತಿಸದೆಯೂ, ನಾನೇ ಅದನ್ನ ಮತ್ತೊಮ್ಮ ಓದಿದಾಗ ಢಾಳಾಗಿ ಕಂಡು ಮರುಕ ಪಟ್ಟಿದ್ದಿದೆ. ಇಷ್ಟಕ್ಕೂ ಯಾವ ಕ್ಷೇತ್ರದಲ್ಲಿ  ಕೆಲಸ ಮಾಡುತ್ತೇನೆಂದರೂ ಎಲ್ಲಕ್ಕೂ ಬೇಕಾದ್ದು ತಾಳ್ಮೆ. ಬಹಳಷ್ಟು ಸನ್ನಿವೇಶಗಳಲ್ಲಿ ಗೆಲ್ಲುವ ಅವಕಾಶವನ್ನು ಅವಸರಕ್ಕೆ ಬಿದ್ದು ಕಳೆದುಕೊಂಡಿರುತ್ತೇವೆ. ಗೆಲುವು ನಮ್ಮ ತಾಳ್ಮೆಯನ್ನು ಪ್ರತಿಕ್ಷಣ ಪರೀಕ್ಷಿಸುತ್ತಿರುತ್ತದೆ. ಸಹನೆಯಿಲ್ಲದೆ, ಪೂರ್ಣಗೊಳಿಸುವ ಧಾವಂತದಲ್ಲಿ ನಮ್ಮ ವೃತ್ತಿಬದುಕನ್ನೇ ಕ್ಷುಲ್ಲಕವಾಗಿ ಮಾಡಿಕೊಂಡಿರುತ್ತೇವೆ ನಮಗೆ ತಿಳಿಯದೆಯೇ. ಅದಾ ಮಾಡಿದರಾಯಿತು. ಇದಾ ಮಾಡಿ ಮುಗಿಸಿದರಾಯ್ತು ಬಿಡು ಎನ್ನುವ ಉಡಾಫೆ ಧೋರಣೆ ಕೆಲಸದಲ್ಲಿ ಅಬ್ಬಾ! ಅಂತೂ ಮುಗಿಸಿದೆ ಅನ್ನುವ ಸಮಾಧಾನ ನೀಡಬಹುದು.ಆದರೆ, ಆತ್ಮತೃಪ್ತಿ? ಅತ್ಯುತ್ತಮವಾಗಿ ಅಲ್ಲದಿದ್ದರೂ, ಕನಿಷ್ಟಪಕ್ಷ ಉತ್ತಮ
ವಾಗಿ ನಿಭಾಯಿಸಿz್ದÉೀನೆಂಬ ಸಾರ್ಥಕತೆ? ಉಹುಂ ದಕ್ಕುವುದೇ ಇಲ್ಲ. ಇದು ಕೇವಲ ಉದಾಹರಣೆಯಷ್ಟೆ. ಯಾವುದೇ ಕೆಲಸವಾದರೂ ಸಹನೆಯಿಂದ ವರ್ತಿಸಿದರಷ್ಟೆ ಗೆಲುವಿನ ಮೆಟ್ಟಿಲುಗಳನ್ನು ಹತ್ತುವ ಸದಾವಕಾಶ ನಮಗೆ ಲಭಿಸೀತು. ಇಲ್ಲದಿದ್ದರೆ ಇದ್ದಲ್ಲೇ ಇರಬೇಕಾಗುತ್ತದೆ ಮೂವರ ನಡುವೆ ಮತ್ತೊಬ್ಬರಾಗಿ!
ಯಾವುದೇ ಕೆಲಸದ ಆರಂಭದಲ್ಲಿ ಅಂದುಕೊಂಡದ್ದನ್ನು ಮುಗಿಸಲೋಸುಗ ಆ ಹಾದಿಯಲ್ಲೇ ಸಾಗಿ ಗೆಲುವಿನ ಶಿಖರವನ್ನತ್ತಿ, ಉತ್ತುಂಗದಲ್ಲೇ ರಾರಾಜಿಸುತ್ತಿರುವ ಅದೆಷ್ಟೋ ಸಾಧಕರ ಅನುಕರಣೆಯಲ್ಲಿ ಸಾಗುವುದು ಪುಸ್ತಕ ನೋಡಿ, ಅಡುಗೆ ಮಾಡಿ ತಿಂದಷ್ಟೆ ಸಹಜ. ಎಲ್ಲರ ಹಾದಿಯೂ ಅನುಕರಣೆಯಿಂದಲೇ ಆರಂಭವಾಗುತ್ತದೆ. ನಿಜ ಆದರೆ, ಬರಬರುತ್ತಾ ನಮ್ಮ ಆಸಕ್ತಿ  ಕ್ಷೇತ್ರದಲ್ಲಿ ನಮ್ಮದೊಂದು ಶೈಲಿ ಅಂತಹದೊಂದನ್ನು ರೂಪಿಸಿಕೊಳ್ಳದೇ ಹೋದರೆ, ಮೌಂಟ್ ಎವರೆಸ್ಟ್‍ನ್ನು ಹತ್ತುತ್ತೇನೆಂದು ಸಾಗಿ ಹಾದಿ ಮಧ್ಯದಲ್ಲಿ ಸಿಕ್ಕ ನಿಲ್ದಾಣವನ್ನೇ ಶಿಖರ ಹತ್ತಿz್ದÉೀನೆಂಬ ಭ್ರಮೆಯಲ್ಲಿ ಸಂಭ್ರಮಿಸಿದಷ್ಟೆ ಕ್ಷುಲ್ಲಕ. ಇಷ್ಟಕ್ಕೂ ಕಠಿಣ ಪರಿಶ್ರಮ ಅನ್ನೋದು ಮೆಟ್ಟಿಲುಗಳಿದ್ದಂತೆ, ಹತ್ತುವುದಕ್ಕೆ ತುಸು ಕಷ್ಟ ಎನಿಸಿದರೂ, ನಮ್ಮ ಮೇಲಿನ ಆತ್ಮವಿಶ್ವಾಸ ಹತ್ತಿಸಿಯೇ ತೀರುತ್ತೆ. ಅದೃಷ್ಟ ಅನ್ನೋದು ಲಿಫ್ಟ್ ಇದ್ದಂತೆ. ಯಾವಾಗ ಕೈ ಕೊಡುತ್ತೋ ಹೇಳಲಿಕ್ಕಾಗದು ಎಂದು ದೊಡ್ಡವರು ಸುಮ್ಮನೆ ಹೇಳಿರಲಿಕ್ಕಿಲ್ಲ ಅಲ್ಲವಾ!

- ಭಾಚಿ

 

Wednesday 31 August 2016

ಸೋಲೇ ಗೆಲುವಾಗಿ ದಕ್ಕುವುದು ಅಂದ್ರೆ.....!



                ಜೀವನದಲ್ಲಿ ಪದೇಪದೆ ಫೇL ಆದವರು ಸೋಲಿನ ರುಚಿ, ಕಹಿ, ಸಿಹಿ ಎಲ್ಲವನ್ನೂ ಅರಿತಿರುತ್ತಾರೆ. ಸೋಲನ್ನು ದಕ್ಕಿಸಿಕೊಂಡು, ಅದರ ಅವಮಾನವನ್ನು ಸಹಿಸಿಕೊಂಡು ಪುನಃ ಮೊದಲಿನಂತಾಗಲು ಪ್ರಯತ್ನಿಸುತ್ತಾರೆ.......
 - ಮೊನ್ನೆ ಅದ್ಯಾಕೋ ಈ ಸಾಲುಗಳು ಬಹಳ ಕಾಡಿದವು.
ಆಗಷ್ಟೇ ಡಿಗ್ರಿ ಪರೀಕ್ಷೆಗಳು ಮುಗಿದಿದ್ದವು. ಇನ್ನೇನು ಮುಂದಿನ ಭವಿಷ್ಯದ ಬಗ್ಗೆ ನಿಖರವಾದ ಯೋಜನೆಗಳನ್ನು ಮಾಡಬೇಕೆಂದು ಎಂಟ್ಹತ್ತು ಗೆಳತಿಯರು ಒಂದೆಡೆ ಸೇರಿ ಒಂದೊಂದು ಮಾರ್ಗವಾಗಿ ಚರ್ಚೆಗಳನ್ನು ಅರಹುತ್ತಾ ಕುಳಿತಿದ್ದರೆ, ಸಂಧ್ಯಾ ತೀರಾ ಮಂಕಾಗಿ ಕಂಡಳು. ಯಾವುದಕ್ಕೂ ಪ್ರತಿಕ್ರಿಯಿಸದೆ ತನ್ನ ಪಾಡಿಗೆ ತಾನು ಏನನ್ನೋ ಯೋಚಿಸುತ್ತ, ಮಂಡಿಗೆ ತಲೆಯೂರಿ ಪ್ರಪಂಚದ ಪರಿವೆಯೇ ಇಲ್ಲದಂತೆ ಬೇರಾವುದೋ ಲೋಕಕ್ಕೆ ಜಿಗಿದಿದ್ದಳು. ಪರೀಕ್ಷೆಗಳು ಮುಗಿದಿದ್ದರಿಂದ ಕೆಲವರಿಗೆ ಮನೆಯ ಸಂಪೂರ್ಣ ಜವಾಬ್ದಾರಿ ಹೊರುವ ಅನಿವಾರ್ಯ, ಇನ್ನು ಕೆಲವರಿಗೆ ಮದುವೆ ಮಾಡಿಕೊಳ್ಳಲೇಬೇಕಾದ ಕರಾರಿಗೆ ಮೊಹರು ಬಿz್ದÁಗಿತ್ತು. ಒಬ್ಬರಿಗೆ ಒಂದೊಂದು ದಾರಿ ಕಡಿದು ಬಿದ್ದದ್ದು ಅಲ್ಲಿ ಸ್ಪಷ್ಟವಾಗಿದ್ದರೂ, ಇನ್ನೂ ಕೆಲವರಿಗೆ ಮುಂದೇನು ಮಾಡಬೇಕೆಂಬ ಯಾವುದೇ ಯೋಜನೆ ಯೋಚನೆಗಳಿರಲಿಲ್ಲ. ಅದರಲ್ಲಿ ಒಂದಷ್ಟು ಮಂದಿ ಅನುಕೂಲಸ್ಥರು ಇದ್ದರು. ಮತ್ತೂ ಕೆಲವರು ಏನೇನೂ ಇಲ್ಲದ ಅಸಹಾಯಕರು ತಮ್ಮ ಚಿಕ್ಕಪ್ಪ, ಅತ್ತೆ ಮನೆಯಲ್ಲಿದ್ದುಕೊಂಡು ಓದಿಕೊಂಡಿದ್ದವರು.

ಇಷ್ಟೆಲ್ಲ ಇರುವಾಗ ಸಂಧ್ಯಾಗೆ ಎಲ್ಲವೂ ಆರಾಮಿದೆ. ಅಪ್ಪನಿಗೆ ಸರ್ಕಾರಿ ನೌಕರಿ, ಅಮ್ಮ ಗೃಹಿಣಿ. ತನಗಿಂತಲೂ ಎಂಟು ವರ್ಷಕ್ಕೆ ಚಿಕ್ಕವನಾದ ತಮ್ಮ. ಈಕೆಯ ಕುಟುಂಬ ಅತ್ಯಂತ ಸುಖೀ ಎಂದೇ ಭಾವಿಸಿz್ದÉವು. ಹೀಗಿರುವಾಗ ಈಕೆಗೇನು ತಲೆನೋವು? ಅಂದುಕೊಳ್ಳುತ್ತಿರುವಾಗಲೇ ಅವಳ ಕಣ್ಗಳು ನೀರಿನಿಂದ ತುಂಬಿ ಜಿನುಗುತ್ತಿದ್ದವು. ಬಂದಾಗಿನಿಂದ ಅವಳತ್ತ ಅಷ್ಟಾಗಿ ಗಮನ ಕೊಡದೆ ಇದ್ದ ನಾವು ಈಗ ಏಕಾಏಕಿ ಅವಳ ಸದ್ಯದ ಪರಿಸ್ಥಿತಿಗೆ ಕಾರಣ ತಡಕಾಡಲೇಬೇಕಿತ್ತು. ಏನಾಯ್ತು ಎಂದು ಕೇಳಿದರೆ ಮಾತಿಲ್ಲ ಕತೆಯಿಲ್ಲ. ಕಣ್ಗಳು ಮಾತ್ರ ಮತ್ತದೇ ಧಾರಾಕಾರ ನೀರಿನಿಂದ ತುಂಬಿ ತುಳುಕುತ್ತಿವೆ. ಸದ್ಯ ಸಮಾಧಾನವಾಗಿ ಸಮಸ್ಯೆಯನ್ನು ಹೇಳಿಕೊಳ್ಳುವ ಪರಿವೆಯಲ್ಲಿ ಆಕೆಯೂ ಇಲ್ಲದ್ದರಿಂದ ನಾವೂ ಕೊಂಚ ಗಮನ ಬೇರೆ ಕಡೆ ಸರಿಸಲು ತ್ರಾಸಪಟ್ಟು ಸುಮ್ಮನಾದೆವು. ಒಂದು ವಾರದ ಬಳಿಕ ಎಲ್ಲರೂ ಮತ್ತದೇ ಸ್ಥಳಕ್ಕೆ ಸೇರುವುದು ಎಂಬ ಷರತ್ತು ಹಾಕಿ, ಎಲ್ಲರೂ ಅವರವರ ಮನೆಗೆ ಹೊರಟುಬಿಟ್ಟೆವು.
ನಾನು, ಮತ್ತೊಬ್ಬಳು ಗೆಳತಿ, ಸಂಧ್ಯಾ ಮೂವರ ಮನೆಯೂ ಒಂದೇ ಹಾದಿಯಲ್ಲಿದ್ದುದರಿಂದ ಅಂದು ನಡೆದೇ ಮನೆ ಮುಟ್ಟಲು ನಿರ್ಧರಿಸಿ ಅಲ್ಲಿಂದ ಕಾಲ್ಕಿತ್ತೆವು. ಜತೆಯಲ್ಲಿದ್ದ ಗೆಳತಿಯ ಮನೆ ಸಿಕ್ಕಿತು. ಸಂಧ್ಯಾ ಆ ಹೊತ್ತಿಗೆ ಕೊಂಚ ನಿರಮ್ಮಳವಾಗಿದ್ದಳು. ಇನ್ನೇನು ನಾಳೆಯಿಂದ ಕಾಲೇಜಿಲ್ಲ ಮತ್ತೆ ಈ ಹಾದಿಯಲ್ಲಿ ಬರುವುದು ಇನ್ನ್ಯಾವಾಗಲೋ ಅಂದುಕೊಂಡು ವೇಗದ ಹೆಜ್ಜೆ ನಿಧಾನದ ಗತಿಗೆ ಅರಿವಿಲ್ಲದೆಯೇ ಬಂದು ನಿಂತಿತ್ತು. ಇಬ್ಬರಲ್ಲೂ ಒಂಥರಾ ಬೇಸರದ ಭಾವ. ಹಾದಿಯ¯್ಲÉೀ ಒಂದು ಸಣ್ಣ ಪಾರ್ಕ್. ಇಬ್ಬರೂ ಅಲ್ಲಿ ಒಂದಷ್ಟು ಹೊತ್ತು ಕುಳಿತು ಹೊರಡೋಣ ಎಂದುಕೊಂಡು ಉದ್ಯಾನದ ಒಳಹೊಕ್ಕೆವು. ಆಗ ಭೋರ್ಗರೆಯಲು ಅನುವಾಯಿತು ಸಂಧ್ಯಾಳ ನೋವಿನ ಒಡಲು. ಯಾವುದೋ ಹುಡುಗನ ಗುಂಗಿಗೆ ಬಿದ್ದು, ಆಕೆ ಸಂಪೂರ್ಣ ಹೈರಾಣಾಗಿದ್ದಳು. ಇದೇ ಹುಚ್ಚಲ್ಲಿ ಪರೀಕ್ಷೆಗಳಿಗೆ ಏನೇನೂ ಸಿದ್ಧತೆ ನಡೆಸದೆ ಬರೆದು ಬಂದಿದ್ದಳು. ಅವಳಿಗೆ ಗೊತ್ತಿತ್ತು, ತಾನು ಪಾಸ್ ಆಗಲಾರೆನೆಂದು. ಇತ್ತ ಸಿಗದ ಹುಡುಗ. ಹಿಂದಿನ ಎಲ್ಲ ಅಂತಿಮ ಪರೀಕ್ಷೆಗಳಲ್ಲೂ ರ್ಯಾಂಕ್ ವಿದ್ಯಾರ್ಥಿ ಅಲ್ಲದಿದ್ದರೂ, ಫ¸್ಟï ಕ್ಲಾಸ್‍ಗೆ ಒಂದಂಕ ಕಡಿಮೆ ಇಲ್ಲದೆ ಪಡೆಯುತ್ತ ಬಂದಿದ್ದ ಆಕೆ ಮೊದಲ ಬಾರಿ ದಾರಿ ತಪ್ಪಿದ್ದಳು. ಅದು ಕೇವಲ ಒಬ್ಬ ಹುಡುಗನೆಡೆಗಿನ ಆಕರ್ಷಣೆಯ ನಿಮಿತ್ತ.
ವಿಷಯ ಹೇಳುತ್ತಾ ಆಕೆ ಕುಳಿತಿದ್ದರೆ ನನಗೇನು ಆಘಾತವಾಗಲಿಲ್ಲ. ನಾನು ಇಂತಹ ಪರಿಸ್ಥಿತಿಗಳನ್ನು ಎದುರಿಸಿಯಾಗಿತ್ತು. ಪಿಯುಸಿಯಲ್ಲಿ ಜೊತೆಗೆ ಬರುತ್ತಿದ್ದ ಪಕ್ಕದ ರಸ್ತೆಯ ಗೆಳತಿ ಯಾವುದೋ ಹುಡುಗನೊಟ್ಟಿಗೆ ಸದ್ದಿಲ್ಲದೆ ಕಾಲ್ಕಿತ್ತಾಗಲೇ ನಮ್ಮನೆಯಲ್ಲಿ ಭೂಕಂಪವಾಗಿತ್ತು. ಅವಳ್ಯಾರೋ ಮಾಡಿದ ತಪ್ಪಿಗೆ ನನ್ನನ್ನು ಬಲಿಕೊಡಲು ಮನೆಯಲ್ಲಿ ಹತಾರ ರೆಡಿ ಮಾಡಿಬಿಟ್ಟಿದ್ದರು. ಅಂತಹ ಸಂದಿಗ್ಧ ಪರಿಸ್ಥಿತಿಯನ್ನು ನಿಭಾಯಿಸಿ ಪದವಿಗೆ ಅರ್ಧ ವರ್ಷದ ನಂತರ ಅಡ್ಮಿಷನ್ ಆಗಿ ಪರೀಕ್ಷೆ ಎದುರಿಸಿ ಸೆಕೆಂಡ್ ಕ್ಲಾಸ್‍ನಲ್ಲಿ ಪಾಸ್ ಕೂಡ ಆಗಿz್ದÉ. ಯಾಕೋ ಇವಳ
ವಿಷಯ ದೊಡ್ಡದಾಗಿ ಕಾಡಲಿಲ್ಲ. ಆಕೆಯೇನೂ ಪ್ರೀತಿಗೆ ಬಿದ್ದಿರಲಿಲ್ಲ. ಆಕರ್ಷಣೆಗೇ ಅಷ್ಟು ಹೈರಾಣಾಗಿ ಹೋಗಿದ್ದಳು. ಅದು ವಯಸ್ಸಿನ ತಪ್ಪಷ್ಟೇ ಎಂದುಕೊಂಡು ತಕ್ಕಮಟ್ಟಿಗೆ ಗೊತ್ತಿರುವ ಬಗೆಯಲ್ಲಿ ತಿಳಿಹೇಳಿ ಆ P್ಷÀಣಕ್ಕೆ ಸಮಾಧಾನವನ್ನೇನೋ ಮಾಡಿ ಎದ್ದು ಬಂದಿz್ದÉ. ಆಕೆ ಎಣಿಕೆಯಂತೆಯೇ ಎಲ್ಲ ಪರೀಕ್ಷೆಗಳಲ್ಲೂ -ಲï ಆಗಿದ್ದಳು. ಆದರೆ, ಆ ಪರೀಕ್ಷೆ ಬರೆಯಲಿಕ್ಕೆ ಮತ್ತೆ ಒಂದು ವರ್ಷ ಕಾಯಬೇಕಾಯ್ತು.
ಬಿಡುವಿನ ಆ ಒಂದು ವರ್ಷ ಆಕೆ ಟೈಪಿಂಗ್, ಶಾರ್ಟ್ ಹ್ಯಾಂಡ್, ಕಂಪ್ಯೂಟರ್ ಕ್ಲಾಸ್, ಟೈಲರಿಂಗ್ ಕ್ಲಾಸ್ ಅಂತ ಬಿಜಿಯಾಗಿಬಿಟ್ಟಳು. ಅಲ್ಲದೆ, ಮತ್ತದೇ ವಿಷಯಗಳನ್ನು ಮನನ ಮಾಡಿದ್ದರ -ಲವಾಗಿ ಎಲ್ಲ ವಿಷಯಗಳಲ್ಲೂ ತೊಂಭತ್ತರಾಚೆಗೂ ಸ್ಕೋರï ಮಾಡಿದಳು. ಅವತ್ತು ನಾನಷ್ಟೇ ಅಲ್ಲ, ಇತರ ಗೆಳತಿಯರು ಕೂಡ ನಿಬ್ಬೆರಗಾಗಿ ಆಕೆಯತ್ತ ನೋಡಿz್ದÉವು. ಈಗ ಆಕೆಗೆ ಪದವಿ ನಿಮಿತ್ತದ ಒಂದು ಕೆಲಸವಲ್ಲ, ನಾನಾ ಆಯ್ಕೆಗಳು. ಬದುಕಿನ ಒಂದು ತಪ್ಪು, ಒಂದು ಸೋಲು, ಆಕೆಗೆ ಅದೆಷ್ಟು ಬಲ ತುಂಬಿತ್ತು ಎಂದರೆ ಮುಂದೆಂದೂ ಸೋಲಲೇಬಾರದು ಎಂಬಂತೆ ಮುಂದಕ್ಕಡಿಯಿಟ್ಟಿದ್ದಳು. ಆ ಸೋಲನ್ನು ಅವಳು ಅದೆಷ್ಟು ಸದ್ಬಳಕೆ ಮಾಡಿಕೊಂಡಿದ್ದಳು ಎಂದರೆ ಯಶಸ್ಸಿಗೆ ಇದೇ ಮೆಟ್ಟಿಲು ಎಂಬಂತೆ ಮೇಲೇರಿದ್ದಳು. ಎಷ್ಟೋ ಸಲ ಸೋಲಿಗಿಂತ, ಸೋಲಿನ ಹೊಡೆತಕ್ಕೆ ನರಳುವವರನ್ನು ನೋಡುವ ಹೊತ್ತ¯್ಲÉಲ್ಲ, ಸೋತು ಗೆದ್ದ ಸ್ಫೂರ್ತಿಯ ಸೆಲೆ ಸಂಧ್ಯಾ ನೆನಪಾಗುತ್ತಾಳೆ. ಅವಳು ಸೋಲನ್ನು ಗೆಲುವಾಗಿ ದಕ್ಕಿಸಿಕೊಂಡ ಪರಿಗೆ ನಿಜಕ್ಕೂ ತಲೆ ಬಾಗಲೇಬೇಕೆನಿಸುತ್ತದೆ.

- ಭಾಚಿ

Thursday 5 May 2016

ಸಬಲ ಸ್ತ್ರೀ ಮದುವೆಯಲ್ಲೇಕೆ ಅಬಲೆಯಾಗ್ಬೇಕು?


ಅದು ಪ್ರತಿಷ್ಠಿತರೇ ನೆರೆದಿದ್ದ ಒಂದು ಸಂವಾದ ಕಾರ್ಯಕ್ರಮ. ಧರೆಗಿಳಿದ ರಂಬೆಯೇನೋ ಎನಿಸುವಷ್ಟು ಅಪರೂಪದ ಸುಂದರಿಯು ಪ್ರಶ್ನೆಗಳ ಮಳೆಗೈಯ್ಯುತ್ತಿದ್ದರೇ ಅಲ್ಲಿ ನೆರೆದಿದ್ದವರೆಲ್ಲ ಅವಳ ಅಂದವನ್ನು ಕಣ್ತುಂಬಿಕೊಳ್ಳುತ್ತಾ ಗಪ್‍ಚುಪ್ ಎನ್ನುವ ನಿಲುವಲ್ಲಿದ್ದುಬಿಟ್ಟಿದ್ದರು. ಇತ್ತ ಪ್ರಶ್ನೆಗೆ ಉತ್ತರಿಸಬೇಕಿದ್ದುದು ಪ್ರತಿಷ್ಠಿತ ಸಾವಿರಾರು ಕೋಟಿ ರೂ. ವಹಿವಾಟು ನಡೆಸುವ ದ ಬಿಗ್ ಬಿಸಿನೆಸ್‍ಮನ್ ರಿಲಯನ್ಸ್ ಇಂಡಸ್ಟ್ರಿ ಅಧ್ಯಕ್ಷ ಮುಖೇಶ್ ಅಂಬಾನಿ. ಆ ಚೆಲುವೆಯಿಂದ ಪ್ರಶ್ನೆಗಳು ಬಾಣಗಳಂತೆ ಬಂದು ನಾಟುತ್ತಿದ್ದರೆ, ಆತ ಮಾತ್ರ ಕೂಲ್ ಆಗಿಯೇ ಉತ್ತರಿಸುತ್ತಿದ್ದರು. ಅದು ಎಲ್ಲ ಏಳು-ಬೀಳುಗಳನ್ನು ಕಂಡು ದೈತ್ಯ ಎತ್ತರಕ್ಕೆ ಏರಿದವರ ಮುಖದಲ್ಲಿ ಮಾತ್ರವೇ ಕಾಣುವಂತಹ ಒಂದು ಕೂಲ್ ರಿಫ್ಲೆಕ್ಟು.
ಇಷ್ಟಕ್ಕೂ ಅವಳು ಹೇಳಿz್ದÉೀನು?  ಮುಖೇಶ್ ಅಂಬಾನಿ ಉತ್ತರಿಸಿz್ದÉೀನು ಕೇಳಿ ಅವರದೇ ಮಾತುಗಳಲ್ಲಿ ....
ನನಗೀಗ 25 ವರ್ಷ ವಯಸ್ಸು, ಸುಂದರವಾಗಿz್ದÉೀನೆ. ಹಾಗಂತ ಎಲ್ಲರೂ ಹೇಳ್ತಾರೆ. ಉತ್ತಮ ಜೀವನ ಶೈಲಿ, ಉತ್ತಮ ಅಭಿರುಚಿ ಹೊಂದಿz್ದÉೀನೆ. ಸಾಕೆನಿಸುವಷ್ಟು ಓದಿಕೊಂಡಿz್ದÉೀನೆ ಕೂಡ. ನಾನು ತುಂಬಾ ಶ್ರೀಮಂತ ವ್ಯಕ್ತಿಯನ್ನು ಮದುವೆಯಾಗಬೇಕೆಂದಿz್ದÉೀನೆ. ಅದು ಅಂತಿಂಥಾ ಸಿರಿವಂತನಲ್ಲ. 100ಕೋಟಿಗೂ ಹೆಚ್ಚು ಆದಾಯವುಳ್ಳ ಅತಿ ಶ್ರೀಮಂತ ವ್ಯಕ್ತಿಯನ್ನ..! ವಾರ್ಷಿಕವಾಗಿ  ಕೋಟಿ ಲೆಕ್ಕಾಚಾರದಲ್ಲಿ ಸಂಬಳ ತೆಗೆಯುವವರು ಈಗ ಮಧ್ಯಮವರ್ಗ ಎಂಬ ಲೆಕ್ಕದಲ್ಲೇ ಪರಿಗಣಿಸಲ್ಪಡುತ್ತಾರೆ. ನನ್ನ ನಿರೀಕ್ಷೆಗಳೇನೂ ಅಷ್ಟೊಂದು ಜಾಸ್ತಿಯೇನಿಲ್ಲ. 100ಕೋಟಿ ಅಥವಾ ಅದಕ್ಕಿಂತ ಮೇಲ್ಪಟ್ಟು ದುಡಿಮೆಯುಳ್ಳ ವ್ಯಕ್ತಿಯನ್ನ ಮದುವೆಯಾಗಬೇಕು ಎಂದು ಬಯಸಿz್ದÉೀನೆ. ಇಲ್ಲಿರುವವರಲ್ಲಿ ಯಾರಾದರೂ ಅಷ್ಟು ಆದಾಯ ಪಡೆಯುವವರು ಇದ್ದಾರೆಯೇ? ಇದ್ದರೆ ಮದುವೆಯಾಗಿರುವವರೇ ಹೆಚ್ಚಿದ್ದೀರಿ ಅನಿಸುತ್ತೆ. ಆದರೆ ನಾನು ನಿಮ್ಮಂತಹ  ಶ್ರೀಮಂತ ವ್ಯಕ್ತಿಯನ್ನು ಮದುವೆಯಾಗಬೇಕು ಎಂದು ಬಯಸಿz್ದÉೀನೆ. ಇತ್ತೀಚೆಗೆ ನನಗೆ ಮದುವೆಯಾಗಲು ಸಂಬಂಧ ಒಂದು ಬಂದಿತ್ತು. ಅಮೆರಿಕದ ನ್ಯೂಯಾರ್ಕ್‍ನಲ್ಲಿರುವ ಪ್ರತಿಷ್ಠಿತ ಮನೆತನದ ಹುಡುಗ. ಆದರೆ ಆತನಿಗೆ ವಾರ್ಷಿಕ 50ಕೋಟಿ ಆದಾಯವಿದೆ. ನಾನಾದಕ್ಕೆ ಇಲ್ಲಿ ನೆರೆದಿರುವ ಗಣ್ಯರನ್ನ ಕೇಳಬಯಸುವುದು ಯಾವ ಕ್ಷೇತ್ರದಲ್ಲಿ ಅತಿ ಶ್ರೀಮಂತ ಹುಡುಗ ಸಿಗುತ್ತಾನೆ? ಯಾವ ವಯಸ್ಸಿನ ಹುಡುಗರನ್ನು ನನ್ನಂತಹ ಹುಡುಗಿಯರು ಟಾರ್ಗೆಟ್ ಮಾಡಬಹುದು? ಬಹಳಷ್ಟು ಬಾರಿ ನೊಡೋಕೆ ಸುಮಾರಾಗಿದ್ದವರ ಹತ್ತಿರ ಹೆಚ್ಚು ದುಡ್ಡಿರುತ್ತೆ. ಹೆಚ್ಚಿಗೆ ದುಡ್ಡಿರುವವರು ನೋಡೋಕೆ ಸುಮಾರಾಗಿರ್ತಾರೆ ಅಥವಾ ಚೆನ್ನಾಗಿಯೇ ಇರೋದಿಲ್ಲ ಆದರೂ, ಅವರಿಗೆ ಸುಂದರವಾದ ಹೆಂಡತಿಯಿರುತ್ತಾಳೆ.
ನೀವು ಹೇಗೆ ನಿಮ್ಮ ಬಾಳಸಂಗಾತಿಯನ್ನು ಆಯ್ಕೆ ಮಾಡಿದಿರಿ? ಮತ್ತು ಏಕೆ?
ನನ್ನೆಲ್ಲ ಪ್ರಶ್ನೆಗಳಿಗೂ ಪ್ರಾಮಾಣಿಕವಾಗಿ ಉತ್ತರಿಸಿ. ಸದ್ಯ ನಾನು ಮದುವೆಯಾಗುವ ಆಕಾಂಕ್ಷೆ ಹೊಂದಿz್ದÉೀನೆ.
ಇತ್ತ ಮುಖೇಶ್ ಅಂಬಾನಿ ಕಡೆಯಿಂದ  ತಾತ್ವಿಕ ಪ್ರತಿಕ್ರಿಯೆ..
ನಿಮ್ಮ ಪ್ರಶ್ನೆಗಳು ಬಹಳ ಆಸಕ್ತಿಕರ ಎನಿಸಿದವು. ನಿಮ್ಮ ಹಾಗೆ ಇದೇ ಪ್ರಶ್ನೆಗಳು ಸಾಕಷ್ಟು ಹುಡುಗಿಯರ ತಲೆಯಲ್ಲಿ ಕೊರೆಯುತ್ತಿರುತ್ತವೆ. ನಾನೊಬ್ಬ ವೃತ್ತಿಪರ ಹೂಡಿಕೆದಾರನಾಗಿ ಇದಕ್ಕೆ  ಉತ್ತರಿಸಲು ಬಯಸುತ್ತೇನೆ. ಹೌದು, ನನ್ನ ವಾರ್ಷಿಕ ಆದಾಯ ನಿಮ್ಮ ಅವಶ್ಯಕತೆಗೂ ಮೀರಿದೆ 100 ಕೋಟಿಗೂ ಅಧಿಕ. ಇದರಿಂದಲೇ ನಿಮಗೆ ತಿಳಿಯಬಹುದು ನಾನು ಸಿಗುವ ಸಮಯವನ್ನು ಆದಷ್ಟು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಲು ಬಯಸುತ್ತೇನೆ. ಒಬ್ಬ ವ್ಯಾಪಾರದ ವ್ಯಕ್ತಿ ನಿಮ್ಮನ್ನು ಮದುವೆಯಾಗಲು ಬಯಸಿದರೆ ಅದು ಕೆಟ್ಟ ನಿರ್ಧಾರ. ಉತ್ತರ ತುಂಬಾ ಸರಳ. ಯಾವುದೇ ವ್ಯಾಪಾರದ ಮನಸ್ಥಿತಿಯುಳ್ಳ ವ್ಯಕ್ತಿಯು  ತನ್ನ ಹೂಡಿಕೆ ದಿನದಿಂದ ದಿನಕ್ಕೆ ವೃದ್ಧಿಯಾಗಬೇಕೆಂದು ಬಯಸುತ್ತಾನೆ. ನೀವು ಹೇಳುವುದು, ನಾನು ಅತಿ ಸೌಂದರ್ಯವತಿ. ಅದಕ್ಕಾಗಿ ನನ್ನನ್ನು ಮದುವೆಯಾಗಬೇಕು ಅಂತ. ಆದರೆ, ಅದೇ ನಿಮ್ಮ ಅತಿದೊಡ್ಡ ಸಮಸ್ಯೆ. ನಿಮ್ಮ ಸೌಂದರ್ಯ ದಿನಗಳೆದಂತೆಲ್ಲಾ ಮಸುಕಾಗುತ್ತಾ ಹೋಗುತ್ತೆ. ಅದು ಯಾವ ಕಾಲಕ್ಕೂ ವೃದ್ಧಿಯಾಗಲಾರದು. ಅರ್ಥಶಾಸ್ತ್ರದ ದೃಷ್ಟಿಕೋನದಿಂದ ನೋಡುವುದಾದರೆ, ಭೂಮಿ ಅಥವಾ ಇನ್ನಾವುದೇ ತೆರನಾದ ಆಸ್ತಿ ಎನಿಸುವುದರ ಮೇಲೆ ಹೂಡಿಕೆ ಮಾಡಿದರೆ 10 ವರ್ಷಗಳ ನಂತರ ಅದು ಕನಿಷ್ಠ ದುಪ್ಪಟ್ಟಂತೂ ಆಗಿರಲೇಬೇಕು. ಇದು ಅರ್ಥಶಾಸ್ತ್ರದ ಸಿಂಪಲ್ ಮೆಥಡ್. ಪ್ರತಿಯೊಬ್ಬ ಬಿಸಿನೆಸ್ ಮ್ಯಾನ್ ಕೂಡ ಯೋಚಿಸುವುದು ಇದನ್ನೇ. ಯಾವ ಹೂಡಿಕೆಯು ದುಪ್ಪಟ್ಟಾಗಬೇಕು, ನೂರುಪಟ್ಟಾಗಬೇಕೆಂದು. ಅದು ತಕ್ಷಣಕ್ಕೆ ಆಗದಿದ್ದರೂ, ಭವಿಷ್ಯದ ದೃಷ್ಟಿಯಿಂದಲಾದರೂ, ಮಾರಾಟ ಮಾಡಿದರೆ ಅದರಿಂದ ಆದಾಯ ವೃದ್ಧಿಯಾಗಬೇಕೆಂದು ಬಯಸುತ್ತಾರೆ. 100 ಕೋಟಿ ವಾರ್ಷಿಕ ಆದಾಯ ಇರುವವರ್ಯಾರು ಮೂರ್ಖರಲ್ಲ. ಅಂತಹವನೇ ಬೇಕೆಂದು ಕೂತರೆ ಅವನು ನಿಮ್ಮೊಂದಿಗೆ ಡೇಟಿಂಗ್ ಮಾಡಲು ಬಯಸಬಹುದು, ಮದುವೆಯಾಗಲು ಬಯಸುವುದಿಲ್ಲ.  ಸಮಯಕ್ಕೆ ಮೌಲ್ಯವಿತ್ತೇ ಅಷ್ಟೆಲ್ಲಾ ಗಳಿಸಲು ಅವರಿಗೆ ಸಾಧ್ಯವಾಗಿರುತ್ತೆ. ಅದರಿಂದ ಪ್ರತಿಯೊಂದರಲ್ಲೂ ಲಾಭವನ್ನು ನಿರೀಕ್ಷಿಸುವುದು ತಪ್ಪಲ್ಲ. ಯಾಕೆಂದರೆ ಅದು ಅವರು ಸಮಯಕ್ಕೆ ಕೊಡುವ ಪ್ರಾಶಸ್ತ್ಯ. ಹಾಗಾಗಿ ಅತಿ ಶ್ರೀಮಂತ ವ್ಯಕ್ತಿಯನ್ನು ಹುಡುಕುತ್ತಾ ನಿಮ್ಮ ಜೀವನದ ಅಮೂಲ್ಯ ಸಮಯವನ್ನು ಹಾಳುಮಾಡಲು ಬಿಡಬೇಡಿ. ಅದರ ಬದಲಾಗಿ ನೀವೇ ಆ ನೂರು ಕೋಟಿ ಸಂಪಾದಿಸಲು ಏನೆಲ್ಲಾ ಸಾಧ್ಯ ಎಂದು ಯೋಚಿಸಿ, ದುಡಿಯಲು ಶುರು ಮಾಡಿ. ಆಗ ಅದಕ್ಕೂ ಮೀರಿದ ಶ್ರೀಮಂತ ಹುಡುಗ ನಿಮ್ಮನ್ನು ಮದುವೆಯಾಗಲು ಬರುತ್ತಾನೆ. ಅದು ಕೂಡ ಆರ್ಥಿಕ ವೃದ್ಧಿಯz್ದÉೀ ಆದರೂ, ಎಲ್ಲವೂ ಒಳ್ಳೆಯದೇ ಆಗುತ್ತದೆ. ಯಾಕೆಂದರೆ ಅಲ್ಲಿ ನೀವು ಖಂಡಿತ ಅವನಿಗೆ ಸಮನಾಗಿರುತ್ತೀರಿ. ಎಲ್ಲವೂ ಶುಭವಾಗಲಿ..
ವ್ಹಾ... ಎಂಥಾ ತೀಕ್ಷ್ಣ ಪ್ರತಿಕ್ರಿಯೆ..! ಪ್ರತಿಯೊಬ್ಬ ಹೆಣ್ಣುಮಗಳು ಯೋಚಿಸಬೇಕಾದ ವಿಷಯವಿದು. ಈಗಿನ ಕಾಲದ ಯುವತಿಯರು ಒಂದಲ್ಲ ಒಂದು ರೀತಿಯಲ್ಲಿ  ಮುತ್ತುಗಳೇ. ಕಾಲಕ್ಕೆ ತಕ್ಕಂತೆ ಪ್ಯಾಷನ್, ಬೇಕೆನಿಸುವಷ್ಟು ವಿದ್ಯೆ, ಅದಕ್ಕೆ ತಕ್ಕುದಾದ ಕೆಲಸ, ಕೈ ತುಂಬಾ ಸಂಬಳ.. ತನಗೆ ಬೇಕೆನಿಸಿದ್ದನ್ನು ತಾನೇ ಗಳಿಸಿಕೊಳ್ಳುವ ಸದೃಢತೆ ಎಲ್ಲವೂ ಅವಳಿಗೆ ಲಭ್ಯ. ಆದರೆ, ಮದುವೆಯ ವಿಷಯ ಬಂದಾಗ ಮಾತ್ರ, ಆಕೆ ಸ್ವಲ್ಪ ವೀಕ್ ಆಗಿರೋಕೆ ಇಷ್ಟಪಡುತ್ತಾಳೆ. ತನಗಿಂತಲೂ ನೂರುಪಟ್ಟು  ಹೆಚ್ಚಿನವ ಸಿಗಬೇಕು ಎಂಬ ಯೋಚನೆಯ ಜಾಗಕ್ಕೆ ತಾನೇ ಅದನ್ನು ಸಂಪಾದಿಸಿಬಿಡಬಲ್ಲೆ ಎಂಬ ಭಾವ ಮೂಡಿಸಿಕೊಳ್ಳುವುದೇ ಇಲ್ಲ. ಹಾಗೆ ಯೋಚಿಸಿದ್ರೂ, ಅದು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಅದನ್ನೇ ಎಲ್ಲ ಹೆಣ್ಣುಮಕ್ಕಳು ಅಳವಡಿಸಿಕೊಂಡು ಬಿಟ್ಟರೆ, ಸಮಸ್ತ ಹೆಣ್ಣುಕುಲವೇ ಅಪರೂಪದ ಮುತ್ತುಗಳಾಗಿಬಿಡುತ್ತವೆ. ಪುರುಷನೊಂದಿಗೆ ಸಮಾನತೆ ಬೇಡುವ ನಾವುಗಳು ಕೂಡ ಹಾಗೇ ಯೋಚಿಸಿದ್ರೆ, ಸಮಾಜದಲ್ಲಿ ಸಮಾನತೆ ತನ್ನಿಂತಾನೇ ಮೂಡುವುದರಲ್ಲಿ ಆಶ್ಚರ್ಯವಿಲ್ಲ.

- ಭಾಗ್ಯಚಿಕ್ಕಣ್ಣ

Thursday 3 March 2016

ಪ್ರೀತಿಗೊಂದಿಷ್ಟು ಸಮಯ ಬೇಕಾಲ್ಲವಾ..!?



ಇಬ್ಬರ ಕಣ್ಣೋಟಗಳು ಆಗಾಗ್ಗೆ ಭೇಟಿಯಾಗುತ್ತಲೇ ಇರ್ತವೆ. ಉಹುಂ... ಮಾತಿಲ್ಲ ಕತೆಯಿಲ್ಲ! ಈಗೆಲ್ಲವೂ ಬಂದ್. ಮಾತು ಮಾತು ಮಾತು.. ಮಾತಿನಲ್ಲೇ ಮುಳುಗಿರುತ್ತಿದ್ದ ಮನಗಳಿಗೀಗ ಕಾಲ ಮಿತಿ ಇಲ್ಲದ ವನವಾಸದ ಸಮಯ. ತೀರಾ ಅನಿವಾರ್ಯ ಬಿದ್ದರೆ, ಔಪಚಾರಿಕ ಮಾತುಕತೆಯಷ್ಟೇ. ಕುಶಲೋಪರಿ ವಿಚಾರಿಸುವ ಧಾವಂತ ಇಬ್ಬರಿಗೂ ಇದೆ. ಆದರೆ, ಬಾಯ್ಬಿಟ್ಟು ಕೇಳುವ ಅನಿವಾರ್ಯತೆ ಇಬ್ಬರಿಗೂ ಒಂದೆಳೆಯೂ ಇದ್ದಂತಿಲ್ಲ. ಹೇಗಿದ್ದವರು ಹೇಗಾಗಿಬಿಟ್ಟರು ಎಂಬುದು ಅವರನ್ನೇ ಗಮನಿಸುತ್ತಿದ್ದ ಅದೆಷ್ಟೋ ಕಣ್ಣುಗಳ ಕುತೂಹಲ! ಆ ಕುತೂಹಲದ ತೆರೆ-ಮರೆಯಲ್ಲೂ ಅವರಿಬ್ಬರ ನಡುವೆ ಮಾತೇ ಆಡದಂತಹ ಯಾವ ಘಟನೆ ಸಂಭವಿಸಿತೆಂಬುದಕ್ಕೆ ಅವರಿಬ್ಬರ ಹೊರತಾಗಿ ಬೇರಾರಿಗೂ ಅದರ ಸುಳಿವಿಲ್ಲ. ಯಾವ ಕಾರಣಕ್ಕೂ ಅದರ ಗಂಧ-ಗಾಳಿಯೂ ಬಿಟ್ಟುಕೊಡಬಾರದು ಎಂಬ ಪಟ್ಟು ಇಬ್ಬರಿಗೂ ಇದ್ದಂತಿದೆ. ಅದಂತೂ ಹೊರ ಜಗತ್ತಿಗೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಯಾಕಿಷ್ಟು ಹಟ? ಯಾರನ್ನು ಮೆಚ್ಚಿಸಲು ಈ ಪರಿ ಮೌನ ಕಾದಾಟ?
ಪ್ರೀತಿಸುವ ಮನಗಳು ಇದ್ದಕ್ಕಿದ್ದ ಹಾಗೇ ಈ ಪರಿ ಬದಲಾಗುವುದೇಕೆ? ತಿಂಗಳ ಹಿಂದಷ್ಟೇ ಭೇಟಿಯಾದಾಗ ಇಬ್ಬರ ಮಾತುಗಳು, ಅವರ ನಡವಳಿಕೆಗಳು ಸಾರಿ ಸಾರಿ ಹೇಳಿದ್ದವು. ಇಬ್ಬರ ಬಳಿಯೂ ಮತ್ತೊಬ್ಬರ ಬಗ್ಗೆ ಗೇಲಿ ಮಾತಿಲ್ಲ, ಹಾಗಂತ ಸಮಾಧಾನದ ನಿಟ್ಟುಸಿರೂ ಇಲ್ಲ. ಕಾರಣ ಕೆದಕುವ ಗೋಜಿಗೆ ನಾನೂ ಹೋಗ್ಲಿಲ್ಲ. ಭೇಟಿಯಾದ ದಿನದಂದೇ ಮಧ್ಯರಾತ್ರಿ ಆಕೆ ಫೆÇೀನಲ್ಲಿ ಮಾತಿಗೆ ಸಿಕ್ಕಿದ್ದಳು. ಹುಡುಗಿ ಕೊಂಚ ಹೆಚ್ಚೇ ಎನಿಸುವಷ್ಟು ಭಾವುಕಳಾಗಿದ್ದಳು, ಆಗ ಹೇಳಿಬಿಟ್ಟಳು ಸಮಸ್ಯೆಯ ಗುಟ್ಟನ್ನ. ಅವನು ಮಾತು ಮಾತಿಗೂ ನಾವು ತುಂಬ ಅವಸರ ಪಡ್ತಿದ್ದೀವಿ ಅಂತನ್ನಿಸ್ತಿದೆ. ಒಂದೆರಡು ವರ್ಷ ಕಾಯೋಣ ಅಂದಿದ್ದ. ನಾನು ಚಕಾರವೆತ್ತದೆ ನಿಂತ ನಿಲುವಲ್ಲೇ ಒಪ್ಪಿಗೆ ಕೊಟ್ಟಿದ್ದೆ. ಪದೇ ಪದೆ ಮೆಸೇಜ್ ಮಾಡ್ಬೇಡ ಅಂದ ಅದನ್ನೂ ಬಂದ್ ಮಾಡ್ದೆ. ಕೊನೆಗೆ, ನಿನ್ನ ಮಾತುಗಳು ನನ್ನ ತುಂಬಾ ಡಿಸ್ಟರ್ಬ್ ಮಾಡ್ತಿದೆ ಕೆಲಸದಲ್ಲಿ ನಿಗಾ ಇಡಲು ಆಗ್ತಿಲ್ಲ ಅಂದ ನಾನು ಮಾತಾಡುವುದನ್ನೇ ನಿಲ್ಲಿಸಿ ಬಿಟ್ಟೆ. ಈಗ ನೋಡು ಅವನ ಪಾಡಿಗೆ ಅವನು, ನನ್ನ ಪಾಡಿಗೆ ನಾನು ಅಷ್ಟೇ! ಪ್ರೀತಿ ಉಳಿದಿದೆ ಎಂಬುದಕ್ಕೆ ಯಾವ ಕುರುಹೂ ಇಲ್ಲ..!
**
ಆಕೆ ಬಿ.ಎ ಅಂತಿಮ ವರ್ಷದ ವಿದ್ಯಾರ್ಥಿ. ಓದನ್ನು ಮುಂದುವರೆಸಬೇಕು ಎಂಬ ಅದಮ್ಯ ಆಸೆ ಅವಳಿಗೆ. ಆದರೆ ಮನೆಯಲ್ಲಿ ತಂದೆ-ತಾಯಿಗೆ ಎದೆಯೆತ್ತರಕ್ಕೆ ಬೆಳೆದ ಮಗಳನ್ನು ಮದುವೆ ಮಾಡಿ ತಮ್ಮ ಜವಾಬ್ದಾರಿ ಇಳಿಸಿಕೊಳ್ಳುವ ಇರಾದೆ . ಆಗಲೇ ಕೂಡಿಬಂದಿತ್ತು ಶ್ರೀಮಂತ ಮನೆಯ ಸಂಬಂಧ. ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದು ಹಾಲು ಅನ್ನ ಅಂದ ಹಾಗಾಯ್ತು ಆಗಿನ ಪರಿಸ್ಥಿತಿ. ಹಿಂದೂ ಮುಂದು ಯೋಚಿಸದೆಯೇ ದೊಡ್ಡ ಜನ ಅಂತ್ಹೇಳಿ, ಮದುವೆ ಮಾಡಿ ಮುಗಿಸಿಯೇಬಿಟ್ಟರು. ಆದರೆ, ತಮ್ಮ ಕರ್ತವ್ಯ ಮುಗಿಯಿತೆಂದು ನೆಮ್ಮದಿಯ ನಿಟ್ಟುಸಿರು ಬಿಡುವ ಮುಂಚೆಯೇ ಆಕೆ ತವರಿಗೆ ವಾಪಾಸಾಗಿದ್ದಾಳೆ ಅದು 2ತಿಂಗಳ ಬಸಿರನ್ನೊತ್ತುಕೊಂಡು. ಇಬ್ಬರು ತಮಗೆ ತಾವು ಏನೆಂದೂ ಅರ್ಥ ಮಾಡಿಕೊಳ್ಳುವ ಮುಂಚೆಯೇ ಇಬ್ಬರಿಗೂ ತಮ್ಮ ಅಭಿರುಚಿಗಳು ಹಿಡಿಸಿಲ್ಲ, ಆದ ಸಣ್ಣ ಪುಟ್ಟ ಮನಸ್ತಾಪಗಳಿಗೆ ದೊಡ್ಡ ರಾದ್ದಾಂತ ಮಾಡಿ ಊರು-ಕೇರಿ ಒಂದಾಗುವ ಹಾಗೇ ಜಗಳಗಳು ನಡೆದುಹೋಗಿ ಇಬ್ಬರೂ ದೂಷಿಸಿಕೊಂಡು ಬೇರಾಗಿದ್ದಾರೆ. ಆಕೆ ತವರು ಮನೆ ಹಾದಿ ಹಿಡಿದರೆ, ಆತ  ಇನ್ನೊಂದು ಸಂಬಂಧಕ್ಕೆ ಕೈಚಾಚಿದ್ದಾನೆ.
ಆದರೆ ಗಂಡ ಹೆಂಡತಿಯ ನಡುವೆ ಮನಸ್ಸಿನ ಯಾವ ಭಾವಗಳು ಹಂಚಿಕೆಯಾಗಿಲ್ಲ. ದೇಹ ಒಂದಾಗಿದ್ದಕ್ಕೆ ಅವಳ ಬಸಿರು ಸಾಕ್ಷಿ ಹೇಳಿದ್ದರೆ, ಅವಳು ಆ ಪರಿ ಮನಕೆಡಿಸಿಕೊಂಡು ಹೊರಟು ಬಂದಿದ್ದಕ್ಕೆ ಮನಸ್ಸುಗಳು ಒಂದಾಗಲಿಲ್ಲ ಎಂಬ ಕುರುಹು ಗೋಚರವಾಗಿದೆ.   ಇತ್ತ ಇವಳ ಓದಿನ ಕನಸು ಅಲ್ಲೆ ಮಕಾಡೆ ಮಲಗಿಬಿಟ್ಟಿದೆ. ಇಲ್ಲ ಸಲ್ಲದ ಕಾರಣಗಳಿಗೆಲ್ಲಾ ಮುಖ ಸರಿಸುವಷ್ಟು ಮುನಿಸು. ಕೇವಲ ಎರಡೇ ತಿಂಗಳಿಗೆ ಇಬ್ಬರೂ ಹೇಳಿಕೊಳ್ಳಲಾರದಷ್ಟು ದೂರಾಗಿಬಿಟ್ಟಿದ್ದಾರೆ.
ಏನನ್ನೋ ಸಾಧಿಸ್ಬೇಕು ಅನ್ನುವ ಅದಮ್ಯ ಕನಸುಗಳನ್ನು ಹೊತ್ತ ಇಂದಿನ ಪ್ರೇಮಿಗಳು ತಮಗೆ ತಾವು ಸಮಯ ಕೊಟ್ಟುಕೊಳ್ಳುವುದಕ್ಕೆ ಆಸ್ಥೆ ವಹಿಸುವುದೇ ಇಲ್ಲ. ಪ್ರೀತಿಗೆ ಭದ್ರಬುನಾದಿಯಾಗಬೇಕಾದ  ಆ ಅಮೂಲ್ಯ `ಮಾತುಗಳು' ಕಾಲಹರಣ ಎನಿಸಿಬಿಡುವಷ್ಟು ಸಪ್ಪೆ ಸಪ್ಪೆಯಾಗಿಬಿಡುತ್ತದೆ.  ಅದೇ ಕಾರಣಕ್ಕಾಗಿಯೇ ಅವನೊಂದಿಗೆ ಇವಳು, ಇವಳೊಂದಿಗೆ ಅವನು ಅದೆಷ್ಟೋ ಭಾವಾಭಿರಾಗಗಳು ಹುಟ್ಟುತ್ತಲೇ, ಮನಬಿಚ್ಚಿ ಹೇಳಿಕೊಳ್ಳದೇ ಅಸುನೀಗಿರುತ್ತವೆ. ಅದೆಷ್ಟೋ ಕನಸುಗಳ ಹುಟ್ಟಿಗೆ ಪ್ರೇರಣೆಯಾಗಬೇಕಿದ್ದ ಮಧುರ ಬಾಂಧವ್ಯ ಚಿಗುರುವ ಹಾದಿಯಲ್ಲೇ ಜೀವ ತೆತ್ತಿರುತ್ತದೆ!
ಇಬ್ಬರ ಮಧ್ಯ ಇರಬೇಕಾದ ಮಧುರ ಮಾತುಗಳು ಸಮಯದ ಅಭಾವಕ್ಕೆ ಸಿಲುಕಿ ಕುಬ್ಜಗೊಂಡಿದೆ. ಸಣ್ಣ ಪುಟ್ಟ ವಾಗ್ವಾದಗಳೇ ದೊಡ್ಡದಾಗಿ ಕಾಣುತ್ತವೆ. ಇಷ್ಟಕ್ಕೆ  ಬೇಸತ್ತ ಮನಗಳು ಬೇರಾಗಲೊಂದು ಕಾರಣ ಹುಡುಕಿಕೊಳ್ಳುವುದರಲ್ಲಿ ಆಶ್ಚರ್ಯವೇನಿಲ್ಲ. ಆದರೂ ಬದುಕಲ್ಲಿ ಹೀಗೆ ಬಂದು ವಿರಮಿಸುವ ಪ್ರೇಮಗಳು, ಇಂತಹದ್ದೊಂದು ಬೇಸರದ ಅಧ್ಯಾಯಕ್ಕೆ ನಾಂದಿ ಹಾಡಿದ್ದಲ್ಲದೇ, ಜೀವಮಾನವಿಡೀ ಪ್ರೀತಿಯೆಂದರೆ ಸಾಕು ಅಸಮಾಧಾನದ ಬಳಲಿಕೆಗಳು ಮನಸ್ಸಿನ ಸ್ಮೃತಿಪಟದಲ್ಲಿ ಬಂದು ಮರೆಯಾಗುವ ಪರಿ ನೆನೆದರೇನೇ ಬದುಕಲ್ಲೇನಿದೆ ಎನಿಸುವಷ್ಟು ಜಿಗುಪ್ಸೆ ಉಂಟುಮಾಡುವುದಿಲ್ಲವಾ? ನಮಗಾಗಿ ಅಲ್ಲದಿದ್ದರೂ ಬೇಕಿದ್ದ ಪ್ರೀತಿಗಾಗಿಯಾದರೂ ಒಂದಿಷ್ಟು ಸಮಯ ಕೊಡುವುದು ನಮ್ಮನ್ನಿಷ್ಟ ಪಡುವ ಮನಸ್ಸುಗಳ, ಸಂಬಂಧಗಳ ಆರೋಗ್ಯಕ್ಕೆ ಒಳ್ಳೆಯದು ಅಲ್ಲವಾ..?

- ಭಾಚಿ