Saturday 28 February 2015

ಜೀವನ ಕ್ಷಣ ಕ್ಷಣಕ್ಕೂ ಪಾಠ ಕಲಿಸುತ್ತೆ.. ಆದ್ರೆ ನಾವು ಅದನ್ನ ಸರಿಯಾಗಿ ಅರಿಯೋದಿಲ್ಲ ಅಷ್ಟೇ. ತಿಳಿದೇ ಮುಂದೇ ಹೋಗಿ ಎಡವಿ ಬೀಳೋದೇ ಜಾಸ್ತಿ. ಬಿದ್ದ ಮೇಲೂ ಗಮನಕ್ಕೆ ಬರ್ದಿದ್ರೆ ನಮ್ಮಂತಹ ಮುಠ್ಠಾಳರು ಮತ್ತೊಬ್ಬರು ಇರೋದಿಲ್ಲ. ಕೆಲವು ಬಾರಿಯಂತೂ ನಮ್ಮದಲ್ಲದ ತಪ್ಪಿಗೆ ನಾವು ನಮ್ಮನ್ನೇ ತಕ್ಕಡಿಯಲ್ಲಿ ಹಾಕಿ ತೂಗೋ ಹಾಗೇ ಮಾಡೋ ಮಂದಿ, ನಾವು ಬಿದ್ರೆ ನಗಾಡ್ತೆ ಇರೋಲ್ಲ. ಆಳಿಗೊಂದು ಕಲ್ಲು ಅನ್ನೋ ಹಂಗೆ ಸಿಕ್ಕ ಸಿಕ್ಕವರೆಲ್ಲಾ ಜಾಡ್ಸೋ ಕಾರ್ಯ ಚೆನ್ನಾಗಿಯೇ ಮಾಡ್ತಾರೆ.. ಅದ್ಕೆಲ್ಲಾ ಕೇರ್‌ ಮಾಡೋ ಜೀವ ಅಲ್ಲ ಇದು.. ಕೆಲವರು ಬಿಡಿ ಬಿದ್ರೂ ಮೀಸೆ ಮಣ್ಣಾಗ್ಲಿಲ್ಲ ಅನ್ನೋ ಕೆಟಾಗರಿಗೇ ಸೇರ್ದವ್ರು.
ಅಂತಹದ್ದೇ ಮೊಂಡುತನ ನನ್ನಲ್ಲೂ ಇದೆ. ಇಲ್ಲಂತ ಅಲ್ಲ. ಆದ್ರೆ, ಯಾರೇ ಆಗ್ಲಿ ಎದುರಿಗೇ ನಿಲ್ಲೋರ್‌ ಜೊತೆ ಗುದ್ದಾಡಿ ಗೆಲ್ಬೋದು.. ಬೆನ್ನ ಹಿಂದೆ ನಿಂತು ಅಪಪ್ರಚಾರ ಮಾಡ್ತಾ ಓಡಾಡೋರಿಗೆ ನಿಜಕ್ಕೂ ನಾವು ಏನೂ ಮಾಡ್ಲಿಕ್ಕಾಗಲ್ಲ. ಅಷ್ಟಕ್ಕೂ ನಮ್ಮ ಬಗ್ಗೆ ಅದ್ಯಾಕೇ ಅವ್ರಿಗೇ ಅಷ್ಟೆಲ್ಲಾ Concern ಗೊತ್ತಿಲ್ಲ. ಆದ್ರೂ, ಒಂಥರಾ ಖುಷಿ ನನ್ನಂತವರಿಗೆ.. ಯಾಕೆಂದ್ರೆ, ನಮ್ಮ ಪ್ರತಿ ಚಲನ-ವಲನಗಳನ್ನೂ ಸೂಕ್ಷ್ಮವಾಗಿ ತಿಳಿಯೋ ಅವರು ಅವರಿಗೆ ಗೊತ್ತಿಲ್ಲದಂಗೆ ನಮ್ಮ ಪರ್ಸನಲ್‌ ಪಿಎಗಳಾಗಿ ಬಿಟ್ಟಿರ್ತಾರೆ.(ಸಂಬಳ ಗಿಂಬಳ ಎರಡೂ ಇಲ್ದಂಗೆ) ಇರ್ಲಿ ಬಿಡಿ ಅವ್ರ ಖುಷಿ.. ಅನುಭವಿಸ್ಕೋಳ್ಳಿ.. ನಮ್ ಗತ್ತು ಏನೂ ಕಮ್ಮಿ ಆಗಲ್ಲ. ಹಾಗಂತ ದುರಹಂಕಾರದ ಮಾತಲ್ಲ ಕಂಡ್ರಿ. ಸ್ವಾಭಿಮಾನದ ಮಾತು ಹೆಮ್ಮೆಯಿಂದ್ಲೇ ಹೇಳ್ಬೇಕು ಅನ್ಸತ್ತೆ
ಮೂರನೇ ವ್ಯಕ್ತಿಗಳು ಹುಟ್ಟಿಕೊಂಡಾಗ್ಲೆ ನಮ್ ಬೆಲೆ ಏನೂ ಅಂತ ನಮಿಗ್‌ ತಿಳಿಯೋದು. ಅದ್ರೆ ಅದ್ನ ಕಂಡು ಕೊರಗೋ ಮನಸ್ಥಿತಿ ಇಲ್ಲದಿದ್ರೆ ಎಲ್ಲವೂ ಸೌಖ್ಯ,.. ಎಲ್ಲವೂ ಕ್ಷೇಮ.. ಸೂಕ್ಷ್ಮ ಮನಸ್ಸಿನವ್ರು ಏನಾದ್ರೂ ಆಗ್ಬಿಟ್ರೆ ಕಥೆ ಮುಗೀತು. ಅಲ್ಲಿ ಒಂದು ಪುಟ್ಟ ಜೀವ ತನ್ನ ಹಂಗನ್ನೇ ತೊರೆಯೋ ಮಟ್ಟಿಗೆ ಅಲ್ಲಿ ಪರಿಸ್ತಿತಿ ಕೈಮೀರಿಬಿಡುತ್ತೆ. ಅವರ ಮಾತುಗಳು ಆ ಮಟ್ಟಕ್ಕೆ ಇರ್ತವೆ.
ಏನೋ ನಾವೊಂಚುರು ಮೊಂಡು ಬಿದ್ದಿರೋದ್ಕೆ ಹೆಂಗೋ ಮ್ಯಾನೇಜ್‌ ಆಗ್ತಿದೆ ಜೀವ..

ನೀತಿ: ಎಲ್ರೂ ಎಲ್ಲಾ ಕಾಲದಲ್ಲೂ ಒಂದೇ ತರ ಇರೋಲ್ಲ.. ಬಿಟ್ಬಿಡಿ ಬದುಕ್ಕೊಳ್ಳಿ.. ನಿಮ್ಹನ್ನ ಏನೂ ಅವ್ರು ಕಿತ್ಕೋಳ್ಳಲ್ಲ.. ಯಾಕಂದ್ರೆ ನಿಮ್ಮಂತ ಬುದ್ದಿ ಅವರಿಗಿಲ್ಲ ಅದಂತೂ ದಿಟ!

Friday 6 February 2015

ಪತ್ರಿಕೋದ್ಯಮಕ್ಕೂ ಬರುವ ಮುನ್ನ ಒಂದು ಅದಮ್ಯ ಆಸೆಯನ್ನು ಮನದಲ್ಲಿ  ನೆಟ್ಟುಕೊಂಡೇ ಬಂದವಳು ನಾನು. ಆದರೆ ಆಗಿದ್ದೇ ಒಂದು, ಆಗ್ತಿರೋದೇ ಮತ್ತೊಂದು.. ಆದ್ರೂ ಒಬ್ಬ ಅಂಕಣಗಾರ್ತಿ ಆಗಬೇಕೆಂಬ ಚಿಗುರು ಇನ್ನೂ ಎಳಸಲ್ಲೇ ನೀರುಣ್ಣುತ್ತಿದೆ. ಇನ್ನೂ ಬಲಿಯುವ ಭರದಲ್ಲೇ ನನ್ನನ್ನು ನಾನು ಸಕ್ರಿಯವಾಗಿ ಪತ್ರಿಕೋದ್ಯಮದಲ್ಲಿ ಉಳಿಸಿಕೊಂಡಿದ್ದೇನೆ. ಅದಕ್ಕೇ ಕಾರಣವೂ ಇದೆ.. ಪತ್ರಿಕೋದ್ಯಮಕ್ಕೂ ಬರುವ ಮುಂಚೆ ಪ್ರತಾಪಸಿಂಹ, ವಿಶ್ವೇಶ್ವರ ಭಟ್, ಜಿ.ಎನ್.ಮೋಹನ್‌, ಪಿ.ತ್ಯಾಗರಾಜ್, ರಾಧಾಕೃಷ್ಣ ಭಡ್ತಿ, ಮಣಿಕಾಂತ್ ರಂತಹವರ ಅಂಕಣಗಳನ್ನು ಓದುತ್ತಾ ಬೆಳೆದವಳು ನಾನು. ಅವರ ಪ್ರಭಾವದಿಂದಲೇ ಈ ದಿನ ನಾನಿಲ್ಲಿ.. ಅವರ ಆಧಿಕ್ಯದಿಂದಲೇ ಸಾಕಷ್ಟು ಹುಚ್ಚಾಗಿದ್ದಿದೆ, ನಿದ್ದೆ ಬಿಟ್ಟು ಪ್ರತಾಪ್‌ಸಿಂಹ  ಪುಸ್ತಕಗಳನ್ನು ಓದಿದ್ದ ದಿನಗಳು ಇಂದು ‘ಆ ದಿನಗಳು’ ಅಂತ ಹೇಳೋ ನೆನಪುಗಳು.. ಈ ಹುಚ್ಚಾಟದಿಂದಲೇ ನನ್ನ ರಾಜಾವೇಶಕ್ಕೆ, ಆ ಆ್ಯಟಿಟ್ಯೂಡ್‌ ಮೈಂಡ್‌ನಿಂದ ಕೆಲ ಅನಾಹುತಗಳನ್ನು ಮಾಡಿದ್ದೂ ಉಂಟು. ಅದ್ಕೇ ಏನೋ ನನ್ ಕುಟುಂಬದಲ್ಲಿ ನಾನು ಪೇಪರ್ ಆಯೋಳು ಅಂತ್ಲೇ ಫೇಮಸ್ಸು. ಅದ್ಕೆ ಅಮ್ಮ ಹೀಗ್ಲೂ ಕಾಲೆಳಿತಿರ್ತಾಳೆ. ಆದ್ರೂ ಪೇಪರ್‌ ಆಯೋದ್ನ  ಬಿಡೋ ಮನಸ್ಸಿಲ್ದೇ ಬಿಟ್ಟೇ. (ಬಿಟ್ಟಿದ್ದು ಈಗ ಗತಿಸಿ ಹೋದ ಕಾಲ) ಆದ್ರೆ ಅದು ಮಾತ್ರ ನನ್ ಬಿಟ್ಟಿಲ್ಲ.. ಅದೂ ಕೂಡ ನನ್ ಸುತ್ಲೇ ಸುತ್ತಾತ್ತಾ ಇದೆ. ಭಾರ ಇಲ್ಲ ನೋಡಿ..!, ಎಲ್ಲಾ ಒಟ್ಟಾಗಿ ತೂಕ ಆಗಿ ಕೈಗೆ ಸೇರಿದ್‌ ಮೇಲೆ ಮತ್ತೆ ರಿಟರ್ನ್ಡ್ ಟು ಪೇಪರ್.. ಆದ್ರೆ  ಈಗ ಕ್ಯಾಮೆರಾಗಳ ಸುತ್ತಮುತ್ತ ನನ್ ವರ್ಕು. ಆದ್ರೆ, ಕ್ಯಾಮೆರಾ ಕಣ್ಣನ್ನ ನಾ ಇಣುಕಿಯೂ ನೋಡಿಲ್ಲ. ನೋಡೋ ಆಸೆ ಇಲ್ಲ ಅಂತಲ್ಲ. ಅದ್ಕೆ ತಕ್ಕ ಸಿದ್ಧತೆ ಬೇಕ್ರಿ, ಇಲ್ದಿದ್ರೆ ಮೂವರೊಳಗೆ ಒಬ್ಬಳಾಗಿ ಉಳಿದುಬಿಡ್ತೀನೇನೋ ಅನ್ನೋ ಭಯದಲ್ಲೇ ನಾನಿನ್ನೂ ದೂರನೇ ಇದೀನಿ. ಸಿಕ್ಕ ಎಲ್ಲಾ ಆಫರ್‌ಗಳನ್ನು ಕೆಲವೊಂದಿಷ್ಟು ಕಾರಣಗಳಿಗೆ ಬದಿಗೊತ್ತಿ ಕೂತಿದ್ದೇನೆ. ಕೂರೋದಕ್ಕೆ ಕೆಲವು ಸಕಾರ, ನಕಾರ ಕಾರಣಗಳು ಇಲ್ದೇ ಏನಿಲ್ಲ. ಏನೇ ಆಗಬೇಕಿದ್ರೂ ಒಳ್ಳೆಯದ್ದು, ಕೆಟ್ಟದ್ದು ಬೆನ್ನ ಹಿಂದಿಂದೆಯೇ ಒದ್ದುಕೊಂಡು ಬರುತ್ರೀ. ಅದಕ್ ನಾ ಕೂಡ ಹೊರತಾಗಿಲ್ಲ. ಆಗೋದು ಇಲ್ಲ ಬಿಡಿ.. ಆಗೋಕು ಮುಂಚೆ ಒಂದಿಷ್ಟು ಪೀಠಿಕೆ ಅಷ್ಟೇ ಇದು.. ಯಾಕೋ ಅಂದುಕೊಂಡದ್ದು ಆಗಬೇಕಂದ್ರೆ ಸಾಕಷ್ಟು ಗ್ರೌಂಡ್‌ವರ್ಕ್‌ ಮಾಡ್ಬೇಕು ಅನ್ನೋ ಹುಳು ತಲೆ ಹೊಕ್ಕಿದೆ. ಸದ್ಯಕ್ಕೆ ಅದೇ ತಲೆಬಿಸೀಲೇ ಮುಂದುವರಿದ ಭಾಗವನ್ನ ಮುಂದುವರಿಸೋದೋ, ನಿಲ್ಸೋದೋ  ಯೋಚ್ನೆಯಲ್ಲಿದ್ದೇನೆ.. ಆಗಿದ್ ಆಗ್ಲಿ ಈ ಹುಚ್ಚಾಟ ಇನ್ನೂ ಅದೆಷ್ಟ್ ದಿನವೋ ಕಾದು ನೋಡೋಣ.. ಹೇಳೋದ್‌ ಇನ್ನೂ ಮುಗೀಲಿಲ್ಲ... ಮನಸ್ಯಾಕೋ ಇಂದು ಭಾರವಾಗಯ್ತೇ ಏನೋ ಹೇಳ್ಬೇಕು ಅಂತ ಟೈಪಿಸೋಕ್ ಶುರು ಮಾಡ್ದೆ, ಆದ್ರೆ ಹೇಳ್ಬೇಕು ಅನ್ನೋದೇ ಮರೆತೋಯ್ತು ಅದ್ಕೆ ಬೇರೇನೋ ಹೇಳಿದೀನಿ ಅಡ್ಜೆಸ್ಟ್‌ ಮಾಡ್ಕಳಿ ಪ್ಲೀಸ್‌..