Thursday, 3 March 2016

ಪ್ರೀತಿಗೊಂದಿಷ್ಟು ಸಮಯ ಬೇಕಾಲ್ಲವಾ..!?



ಇಬ್ಬರ ಕಣ್ಣೋಟಗಳು ಆಗಾಗ್ಗೆ ಭೇಟಿಯಾಗುತ್ತಲೇ ಇರ್ತವೆ. ಉಹುಂ... ಮಾತಿಲ್ಲ ಕತೆಯಿಲ್ಲ! ಈಗೆಲ್ಲವೂ ಬಂದ್. ಮಾತು ಮಾತು ಮಾತು.. ಮಾತಿನಲ್ಲೇ ಮುಳುಗಿರುತ್ತಿದ್ದ ಮನಗಳಿಗೀಗ ಕಾಲ ಮಿತಿ ಇಲ್ಲದ ವನವಾಸದ ಸಮಯ. ತೀರಾ ಅನಿವಾರ್ಯ ಬಿದ್ದರೆ, ಔಪಚಾರಿಕ ಮಾತುಕತೆಯಷ್ಟೇ. ಕುಶಲೋಪರಿ ವಿಚಾರಿಸುವ ಧಾವಂತ ಇಬ್ಬರಿಗೂ ಇದೆ. ಆದರೆ, ಬಾಯ್ಬಿಟ್ಟು ಕೇಳುವ ಅನಿವಾರ್ಯತೆ ಇಬ್ಬರಿಗೂ ಒಂದೆಳೆಯೂ ಇದ್ದಂತಿಲ್ಲ. ಹೇಗಿದ್ದವರು ಹೇಗಾಗಿಬಿಟ್ಟರು ಎಂಬುದು ಅವರನ್ನೇ ಗಮನಿಸುತ್ತಿದ್ದ ಅದೆಷ್ಟೋ ಕಣ್ಣುಗಳ ಕುತೂಹಲ! ಆ ಕುತೂಹಲದ ತೆರೆ-ಮರೆಯಲ್ಲೂ ಅವರಿಬ್ಬರ ನಡುವೆ ಮಾತೇ ಆಡದಂತಹ ಯಾವ ಘಟನೆ ಸಂಭವಿಸಿತೆಂಬುದಕ್ಕೆ ಅವರಿಬ್ಬರ ಹೊರತಾಗಿ ಬೇರಾರಿಗೂ ಅದರ ಸುಳಿವಿಲ್ಲ. ಯಾವ ಕಾರಣಕ್ಕೂ ಅದರ ಗಂಧ-ಗಾಳಿಯೂ ಬಿಟ್ಟುಕೊಡಬಾರದು ಎಂಬ ಪಟ್ಟು ಇಬ್ಬರಿಗೂ ಇದ್ದಂತಿದೆ. ಅದಂತೂ ಹೊರ ಜಗತ್ತಿಗೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಯಾಕಿಷ್ಟು ಹಟ? ಯಾರನ್ನು ಮೆಚ್ಚಿಸಲು ಈ ಪರಿ ಮೌನ ಕಾದಾಟ?
ಪ್ರೀತಿಸುವ ಮನಗಳು ಇದ್ದಕ್ಕಿದ್ದ ಹಾಗೇ ಈ ಪರಿ ಬದಲಾಗುವುದೇಕೆ? ತಿಂಗಳ ಹಿಂದಷ್ಟೇ ಭೇಟಿಯಾದಾಗ ಇಬ್ಬರ ಮಾತುಗಳು, ಅವರ ನಡವಳಿಕೆಗಳು ಸಾರಿ ಸಾರಿ ಹೇಳಿದ್ದವು. ಇಬ್ಬರ ಬಳಿಯೂ ಮತ್ತೊಬ್ಬರ ಬಗ್ಗೆ ಗೇಲಿ ಮಾತಿಲ್ಲ, ಹಾಗಂತ ಸಮಾಧಾನದ ನಿಟ್ಟುಸಿರೂ ಇಲ್ಲ. ಕಾರಣ ಕೆದಕುವ ಗೋಜಿಗೆ ನಾನೂ ಹೋಗ್ಲಿಲ್ಲ. ಭೇಟಿಯಾದ ದಿನದಂದೇ ಮಧ್ಯರಾತ್ರಿ ಆಕೆ ಫೆÇೀನಲ್ಲಿ ಮಾತಿಗೆ ಸಿಕ್ಕಿದ್ದಳು. ಹುಡುಗಿ ಕೊಂಚ ಹೆಚ್ಚೇ ಎನಿಸುವಷ್ಟು ಭಾವುಕಳಾಗಿದ್ದಳು, ಆಗ ಹೇಳಿಬಿಟ್ಟಳು ಸಮಸ್ಯೆಯ ಗುಟ್ಟನ್ನ. ಅವನು ಮಾತು ಮಾತಿಗೂ ನಾವು ತುಂಬ ಅವಸರ ಪಡ್ತಿದ್ದೀವಿ ಅಂತನ್ನಿಸ್ತಿದೆ. ಒಂದೆರಡು ವರ್ಷ ಕಾಯೋಣ ಅಂದಿದ್ದ. ನಾನು ಚಕಾರವೆತ್ತದೆ ನಿಂತ ನಿಲುವಲ್ಲೇ ಒಪ್ಪಿಗೆ ಕೊಟ್ಟಿದ್ದೆ. ಪದೇ ಪದೆ ಮೆಸೇಜ್ ಮಾಡ್ಬೇಡ ಅಂದ ಅದನ್ನೂ ಬಂದ್ ಮಾಡ್ದೆ. ಕೊನೆಗೆ, ನಿನ್ನ ಮಾತುಗಳು ನನ್ನ ತುಂಬಾ ಡಿಸ್ಟರ್ಬ್ ಮಾಡ್ತಿದೆ ಕೆಲಸದಲ್ಲಿ ನಿಗಾ ಇಡಲು ಆಗ್ತಿಲ್ಲ ಅಂದ ನಾನು ಮಾತಾಡುವುದನ್ನೇ ನಿಲ್ಲಿಸಿ ಬಿಟ್ಟೆ. ಈಗ ನೋಡು ಅವನ ಪಾಡಿಗೆ ಅವನು, ನನ್ನ ಪಾಡಿಗೆ ನಾನು ಅಷ್ಟೇ! ಪ್ರೀತಿ ಉಳಿದಿದೆ ಎಂಬುದಕ್ಕೆ ಯಾವ ಕುರುಹೂ ಇಲ್ಲ..!
**
ಆಕೆ ಬಿ.ಎ ಅಂತಿಮ ವರ್ಷದ ವಿದ್ಯಾರ್ಥಿ. ಓದನ್ನು ಮುಂದುವರೆಸಬೇಕು ಎಂಬ ಅದಮ್ಯ ಆಸೆ ಅವಳಿಗೆ. ಆದರೆ ಮನೆಯಲ್ಲಿ ತಂದೆ-ತಾಯಿಗೆ ಎದೆಯೆತ್ತರಕ್ಕೆ ಬೆಳೆದ ಮಗಳನ್ನು ಮದುವೆ ಮಾಡಿ ತಮ್ಮ ಜವಾಬ್ದಾರಿ ಇಳಿಸಿಕೊಳ್ಳುವ ಇರಾದೆ . ಆಗಲೇ ಕೂಡಿಬಂದಿತ್ತು ಶ್ರೀಮಂತ ಮನೆಯ ಸಂಬಂಧ. ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದು ಹಾಲು ಅನ್ನ ಅಂದ ಹಾಗಾಯ್ತು ಆಗಿನ ಪರಿಸ್ಥಿತಿ. ಹಿಂದೂ ಮುಂದು ಯೋಚಿಸದೆಯೇ ದೊಡ್ಡ ಜನ ಅಂತ್ಹೇಳಿ, ಮದುವೆ ಮಾಡಿ ಮುಗಿಸಿಯೇಬಿಟ್ಟರು. ಆದರೆ, ತಮ್ಮ ಕರ್ತವ್ಯ ಮುಗಿಯಿತೆಂದು ನೆಮ್ಮದಿಯ ನಿಟ್ಟುಸಿರು ಬಿಡುವ ಮುಂಚೆಯೇ ಆಕೆ ತವರಿಗೆ ವಾಪಾಸಾಗಿದ್ದಾಳೆ ಅದು 2ತಿಂಗಳ ಬಸಿರನ್ನೊತ್ತುಕೊಂಡು. ಇಬ್ಬರು ತಮಗೆ ತಾವು ಏನೆಂದೂ ಅರ್ಥ ಮಾಡಿಕೊಳ್ಳುವ ಮುಂಚೆಯೇ ಇಬ್ಬರಿಗೂ ತಮ್ಮ ಅಭಿರುಚಿಗಳು ಹಿಡಿಸಿಲ್ಲ, ಆದ ಸಣ್ಣ ಪುಟ್ಟ ಮನಸ್ತಾಪಗಳಿಗೆ ದೊಡ್ಡ ರಾದ್ದಾಂತ ಮಾಡಿ ಊರು-ಕೇರಿ ಒಂದಾಗುವ ಹಾಗೇ ಜಗಳಗಳು ನಡೆದುಹೋಗಿ ಇಬ್ಬರೂ ದೂಷಿಸಿಕೊಂಡು ಬೇರಾಗಿದ್ದಾರೆ. ಆಕೆ ತವರು ಮನೆ ಹಾದಿ ಹಿಡಿದರೆ, ಆತ  ಇನ್ನೊಂದು ಸಂಬಂಧಕ್ಕೆ ಕೈಚಾಚಿದ್ದಾನೆ.
ಆದರೆ ಗಂಡ ಹೆಂಡತಿಯ ನಡುವೆ ಮನಸ್ಸಿನ ಯಾವ ಭಾವಗಳು ಹಂಚಿಕೆಯಾಗಿಲ್ಲ. ದೇಹ ಒಂದಾಗಿದ್ದಕ್ಕೆ ಅವಳ ಬಸಿರು ಸಾಕ್ಷಿ ಹೇಳಿದ್ದರೆ, ಅವಳು ಆ ಪರಿ ಮನಕೆಡಿಸಿಕೊಂಡು ಹೊರಟು ಬಂದಿದ್ದಕ್ಕೆ ಮನಸ್ಸುಗಳು ಒಂದಾಗಲಿಲ್ಲ ಎಂಬ ಕುರುಹು ಗೋಚರವಾಗಿದೆ.   ಇತ್ತ ಇವಳ ಓದಿನ ಕನಸು ಅಲ್ಲೆ ಮಕಾಡೆ ಮಲಗಿಬಿಟ್ಟಿದೆ. ಇಲ್ಲ ಸಲ್ಲದ ಕಾರಣಗಳಿಗೆಲ್ಲಾ ಮುಖ ಸರಿಸುವಷ್ಟು ಮುನಿಸು. ಕೇವಲ ಎರಡೇ ತಿಂಗಳಿಗೆ ಇಬ್ಬರೂ ಹೇಳಿಕೊಳ್ಳಲಾರದಷ್ಟು ದೂರಾಗಿಬಿಟ್ಟಿದ್ದಾರೆ.
ಏನನ್ನೋ ಸಾಧಿಸ್ಬೇಕು ಅನ್ನುವ ಅದಮ್ಯ ಕನಸುಗಳನ್ನು ಹೊತ್ತ ಇಂದಿನ ಪ್ರೇಮಿಗಳು ತಮಗೆ ತಾವು ಸಮಯ ಕೊಟ್ಟುಕೊಳ್ಳುವುದಕ್ಕೆ ಆಸ್ಥೆ ವಹಿಸುವುದೇ ಇಲ್ಲ. ಪ್ರೀತಿಗೆ ಭದ್ರಬುನಾದಿಯಾಗಬೇಕಾದ  ಆ ಅಮೂಲ್ಯ `ಮಾತುಗಳು' ಕಾಲಹರಣ ಎನಿಸಿಬಿಡುವಷ್ಟು ಸಪ್ಪೆ ಸಪ್ಪೆಯಾಗಿಬಿಡುತ್ತದೆ.  ಅದೇ ಕಾರಣಕ್ಕಾಗಿಯೇ ಅವನೊಂದಿಗೆ ಇವಳು, ಇವಳೊಂದಿಗೆ ಅವನು ಅದೆಷ್ಟೋ ಭಾವಾಭಿರಾಗಗಳು ಹುಟ್ಟುತ್ತಲೇ, ಮನಬಿಚ್ಚಿ ಹೇಳಿಕೊಳ್ಳದೇ ಅಸುನೀಗಿರುತ್ತವೆ. ಅದೆಷ್ಟೋ ಕನಸುಗಳ ಹುಟ್ಟಿಗೆ ಪ್ರೇರಣೆಯಾಗಬೇಕಿದ್ದ ಮಧುರ ಬಾಂಧವ್ಯ ಚಿಗುರುವ ಹಾದಿಯಲ್ಲೇ ಜೀವ ತೆತ್ತಿರುತ್ತದೆ!
ಇಬ್ಬರ ಮಧ್ಯ ಇರಬೇಕಾದ ಮಧುರ ಮಾತುಗಳು ಸಮಯದ ಅಭಾವಕ್ಕೆ ಸಿಲುಕಿ ಕುಬ್ಜಗೊಂಡಿದೆ. ಸಣ್ಣ ಪುಟ್ಟ ವಾಗ್ವಾದಗಳೇ ದೊಡ್ಡದಾಗಿ ಕಾಣುತ್ತವೆ. ಇಷ್ಟಕ್ಕೆ  ಬೇಸತ್ತ ಮನಗಳು ಬೇರಾಗಲೊಂದು ಕಾರಣ ಹುಡುಕಿಕೊಳ್ಳುವುದರಲ್ಲಿ ಆಶ್ಚರ್ಯವೇನಿಲ್ಲ. ಆದರೂ ಬದುಕಲ್ಲಿ ಹೀಗೆ ಬಂದು ವಿರಮಿಸುವ ಪ್ರೇಮಗಳು, ಇಂತಹದ್ದೊಂದು ಬೇಸರದ ಅಧ್ಯಾಯಕ್ಕೆ ನಾಂದಿ ಹಾಡಿದ್ದಲ್ಲದೇ, ಜೀವಮಾನವಿಡೀ ಪ್ರೀತಿಯೆಂದರೆ ಸಾಕು ಅಸಮಾಧಾನದ ಬಳಲಿಕೆಗಳು ಮನಸ್ಸಿನ ಸ್ಮೃತಿಪಟದಲ್ಲಿ ಬಂದು ಮರೆಯಾಗುವ ಪರಿ ನೆನೆದರೇನೇ ಬದುಕಲ್ಲೇನಿದೆ ಎನಿಸುವಷ್ಟು ಜಿಗುಪ್ಸೆ ಉಂಟುಮಾಡುವುದಿಲ್ಲವಾ? ನಮಗಾಗಿ ಅಲ್ಲದಿದ್ದರೂ ಬೇಕಿದ್ದ ಪ್ರೀತಿಗಾಗಿಯಾದರೂ ಒಂದಿಷ್ಟು ಸಮಯ ಕೊಡುವುದು ನಮ್ಮನ್ನಿಷ್ಟ ಪಡುವ ಮನಸ್ಸುಗಳ, ಸಂಬಂಧಗಳ ಆರೋಗ್ಯಕ್ಕೆ ಒಳ್ಳೆಯದು ಅಲ್ಲವಾ..?

- ಭಾಚಿ 




Friday, 12 February 2016

ಅವನಿಲ್ಲದ ಹೊತ್ತು... ಕಳೆಯೋದು ಹೇಗೆ ಗೊತ್ತಾ??



ಇನ್ನೇನು ಪ್ರೇಮಿಗಳ ದಿನ ಬಂದೇ ಬಿಡ್ತು. ಕಳೆದ ವರ್ಷ ಇದೇ ಸಮಯಕ್ಕೆ ಪ್ರೇಮಿಯಾಗಿದ್ದವನು, ಇಂದು ಗಂಡನಾಗಿಬಿಟ್ಟಿದ್ದಾನೆ. ಪ್ರೇಮಿಯಿಂದ ಗಂಡನಾಗಿ ಬಡ್ತಿ ಪಡೆದ ಹೆಚ್ಚುಗಾರಿಕೆ ಅವನದಾದರೆ, ಇನ್ನು ಜೀವಮಾನವಿಡೀ ಸಂಸಾರದ ಜವಾಬ್ದಾರಿ ಹೊರುವ ಕಾಯಕ ಅವಳ ಹೆಗಲಿಗೆ. ಮದುವೆ ಕಾರ್ಯಗಳೆಲ್ಲವೂ ಈಗಷ್ಟೇ ಮುಗಿದಿವೆ. ಸ್ವರ್ಗಕ್ಕೆ ಮೂರೇ ಗೇಣು ಆ ಪ್ರಣಯ ಪಕ್ಷಿಗಳಿಗೆ. ಆದರೆ ಆಗಲೇ ಬೇರೊಂದು ದೇಶಕ್ಕೆ ಹೋಗಲು ಕಚೇರಿಯಿಂದ ಆದೇಶವಾಗಿ ಬಿಟ್ಟಿದೆ ಅವನಿಗೆ. ಬಿಟ್ಟು ಹೊರಡಲೇಬೇಕು, ಕೆಲವೇ ತಿಂಗಳುಗಳ ತರಬೇತಿಗಾಗಿ. ಅವನಿಗೋ ಆ ಮುದ್ದು ಮೊಗದ ಸಂಗಾತಿಯನ್ನು ಬಿಟ್ಟು ಹೊರಡಲು ಮನಸ್ಸಿಲ್ಲ.
ಈಕೆಗೆ ಅವನಿಲ್ಲದ ದಿನಗಳನ್ನು ಕಳೆಯೋದಾದರೂ ಹೇಗೆ ಅನ್ನೋ ಯಾತನೆ. ಆದರೆ, ಇದು ಜೀವನಪರ್ಯಂತ ಅಲ್ಲದೇ ಹೋದರೂ ಆಗಷ್ಟೇ ಮದುವೆಯಾದ ದಂಪತಿ ನಡುವೆ ನಿರ್ಮಾಣವಾಗುವ ಈ ವೇದನೆ ನಿಜಕ್ಕೂ ಹೇಳಿಕೊಳ್ಳಲಾರದಂಥದ್ದು.
ಪ್ರೀತಿಸಿ ಮದುವೆಯಾಗಿದ್ದರಂತೂ ಮುಗಿದೇಹೋಯ್ತು. ಅವನೊಟ್ಟಿಗಿನ ಮಧುರ ಬಾಂಧವ್ಯ ಎತ್ತಲೂ ಮನ ಹೊರಳದಂತೆ ಮಾಡಿಬಿಡುತ್ತದೆ. ಆದರೆ, ಹೋಗಲೇಬೇಕಾದ ಅನಿವಾರ್ಯ ಅವನಿಗೆ. ಒಲ್ಲದ ಮನಸ್ಸಿನಿಂದಲೇ ಹೊರಡಿಸುವ ಕಾರ್ಯ ಇವಳಿಗೆ. ವೈಯಕ್ತಿಕ ಹಾಗೂ ವೃತ್ತಿಬದುಕನ್ನು ಸಮರ್ಥವಾಗಿ ನಿಭಾಯಿಸುವ ಹೊಣೆಗಾರಿಕೆ ಅವಳ ಹೆಗಲೇರುತ್ತದೆ. ಅಷ್ಟೇ ಧಾವಂತದಲ್ಲಿ ಹೊರಡಿಸುವ ಮನಸ್ಸು ಮಾಡಿಯೇ ಬಿಡುತ್ತಾಳಾಕೆ. ಆದರೆ, ಇದೇ ವಿಷಯವಾಗಿ ಕೆಲಸಕ್ಕೆ ಬೈ ಬೈ ಹೇಳುವ ಮನಸ್ಸು ಅವನದ್ದು. ಆಕೆಗಿಂತ ಬೇರ್ಯಾವುದೂ ಹೆಚ್ಚಲ್ಲ ಅವನಿಗೆ ಆ ಸಮಯಕ್ಕೆ..! ಆದರೆ, ತಾನೀಗ ಒಂಟಿಯಲ್ಲ. ಅವಳನ್ನು ತುಂಬ ಚೆನ್ನಾಗಿ ನೋಡಿಕೊಳ್ಳಬೇಕು. ಹಾಗಂತ ಅವಳಿಗೆ ಪ್ರಾಮಿಸ್ ಮಾಡಿದ್ದೀನಿ. ಅದನ್ನ ಚಾಚೂತಪ್ಪದೆ ಪಾಲಿಸ್ತೀನಿ ಕೂಡ ಅಂಥ ತನ್ನೊಳಗೆ ಶಪಥ ಮಾಡಿಕೊಂಡು, ಹೊರಡಲು ರೆಡಿಯಾಗಿ ಬಿಡುತ್ತಾನವನು. ದಾಂಪತ್ಯದ ಹೊಸ್ತಿಲನ್ನು ಆಗತಾನೇ ತುಳಿದಿರುವ ದಂಪತಿಗೆ ಹೀಗೆ ದೂರವಾಗುವ ಸಂದರ್ಭ ಒದಗಿದರೆ ಅವರ ಪರಿಸ್ಥಿತಿ ಏನಾಗಬೇಡ? ಅವನೇನೋ ಹೊಸ ದೇಶ, ಹೊಸ ಪರಿಸರ, ಹೊಸ ಕೆಲಸಗಳಲ್ಲಿ ಮುಳುಗಿ ಹೋಗಬಹುದು. ಆದರೆ ಅವನಿಲ್ಲದ ದಿನಗಳನ್ನು ಅವಳು ಕಳೆಯುವುದಾದರೂ ಹೇಗೆ?
ಹೀಗೆ ಮಾಡಿ
* ಅವನ ಫೆÇೀಟೋ, ಅವನನ್ನು ನೆನಪಿಸುವ ವಸ್ತುಗಳನ್ನು ಜೋಪಾನವಾಗಿಡಿ. ಅದನ್ನು ಸಾಧ್ಯವಾದಷ್ಟೂ ನಿಮ್ಮ ಹತ್ತಿರದಲ್ಲಿಯೇ ಇಟ್ಟುಕೊಳ್ಳಿ. ಅವುಗಳಲ್ಲೇ ಅವನ ಬಿಂಬ ಕಾಣಿ.
* ಅವನ ಬಾಲ್ಯದ ಫೆÇೀಟೋಗಳನ್ನು ಒಂದೆಡೆ ಶೇಖರಿಸಿ ಫೈಲ್ ಮಾಡಿಡಿ, (ಅದರಲ್ಲೂ ಬಾಲ್ಯದ ಭಾವಚಿತ್ರಗಳಾಗಿದ್ದರೆ ಉತ್ತಮ). ಅದರಲ್ಲಿ ನಿಮ್ಮ ಮಗುವಿನ ಪ್ರತಿರೂಪ ಕಾಣಿ. ಮೈನವಿರೇಳಿಸುವ ಪುಳಕವದು!
* ಮತ್ತೆ ಮತ್ತೆ ಅವನನ್ನು ನೆನಪಿಸುವ, ಅವನಿಗೆ ಆಪ್ತವಾದ ಘಟನೆಗಳನ್ನು ನೆನೆಯುತ್ತಿರಿ. ಜಸ್ಟ್ ಚಿಲ್ ಮಾಡುತ್ತ ಆ ಕ್ಷಣವನ್ನು ಎಂಜಾಯ್ ಮಾಡಿ.
* ಅವನ ಗಿಫ್ಟ್‍ಗಳನ್ನು ಜೋಪಾನ ಮಾಡಿ. ಅವನು ವಾಪಸ್ ಬರುವ ಹೊತ್ತಿಗೆ ಅವನ ಅಭಿರುಚಿಗೆ ತಕ್ಕಂತೆ ನಿಮ್ಮ ಮನೋಭಾವ, ಡ್ರೆಸ್ಸಿಂಗ್ ಸೆನ್ಸ್, ನಡವಳಿಕೆಗಳನ್ನು ಬದಲಾಯಿಸಿಕೊಳ್ಳಿ. ಆತ ಮತ್ತೆ ನಿಮ್ಮನ್ನು ನೋಡುವಷ್ಟರಲ್ಲಿ ಸರ್‍ಪ್ರೈಸ್ ನೀಡಿ. ಅವನ ಮೊಗದ ಆ ಸಂತೋಷವನ್ನು ಮಿಸ್ ಮಾಡಿಕೊಳ್ಳಬೇಡಿ.
* ಅಡುಗೆಯಿಂದ ಸಂಗಾತಿಯನ್ನು ಖುಷಿಪಡಿಸುವುದು ಸಾಮಾನ್ಯ ವಿಷಯವಲ್ಲ. ಆದರೆ, ನಿಜಕ್ಕೂ ಬಾಯಿರುಚಿಯಿಂದ ಅವನನ್ನು ಮತ್ತಷ್ಟು ಒಲಿಸಿಕೊಳ್ಳಬಹುದು. ಅದು ಶಾಶ್ವತವಾಗಿಯೂ ಉಳಿಯುವಂತಹುದು. ಹಾಗಾಗಿಯೇ ಒಳ್ಳೊಳ್ಳೆಯ ಅಡುಗೆ ತಿಂಡಿ-ತಿನಿಸುಗಳನ್ನು ಮಾಡುವುದನ್ನು ಕಲಿಯಿರಿ. ಅವನಿಲ್ಲದ ಘಳಿಗೆಯನ್ನು ಅವನಿಗಾಗಿಯೇ ಮೀಸಲಿಡಿ.
* ನಿತ್ಯ ಅವನ ಯಾವ್ಯಾವ ಚೇಷ್ಟೆ, ವರ್ತನೆ ಅತಿಯಾಗಿ ನೆನಪಾಯಿತು ಎಂಬುದನ್ನು ನೋಟ್ ಮಾಡಿಡಿ. ಸಾಕಷ್ಟು ಖುಷಿ ಕೊಟ್ಟ ನೆನಪುಗಳನ್ನು ಡೈರಿಯಲ್ಲಿ ಬರೆದಿಡಿ.
* ಅವನೊಟ್ಟಿಗೆ ಓಡಾಡಿದ ಸ್ಥಳಗಳಿಗೆ ಆಗಿಂದಾಗ್ಗೆ ಭೇಟಿ ನೀಡುತ್ತಲಿರಿ. ಅವನ ಸಂಬಂಧಿಕರು, ಗೆಳೆಯರು ಅವನ ಬಗೆಗೆ ಆಡುವ ಒಳ್ಳೆಯ ಮಾತುಗಳನ್ನು ಆಲಿಸಿ. ಒಳಗೊಳಗೆ ಹೆಮ್ಮೆ ಪಡಿ. ಸಂಗಾತಿಯೆಂದರೆ ಸುಮ್ಮನೆ ಅಲ್ಲ, ಅವನ ಖ್ಯಾತಿ ಎಲ್ಲೆಲ್ಲೂ ಹಬ್ಬಿದೆ ಎಂಬ ಭಾವ ನಿಮ್ಮನ್ನು ಆವರಿಸಲಿ.
* ಅವನಿಗಾಗಿ ಒಂದಷ್ಟು ಕಿರು ಕವನಗಳನ್ನು ಬರೆಯಲು ಪ್ರಯತ್ನಿಸಿ. ಸಾಧ್ಯವಾದರೆ, ಪ್ರೇಮಪೂರಿತವಾಗಿ ಒಂದು ಸುದೀರ್ಘ ಲವ್ ಲೆಟರ್ ಬರೆಯಿರಿ. ಭಾವಗಳು ಪೂರ್ಣವಾಗಿ ವ್ಯಕ್ತವಾಗುವಷ್ಟು ಅಲ್ಲದೆ ಹೋದರೂ ಪರವಾಗಿಲ್ಲ. ಅನಿಸಿದ್ದನ್ನೆಲ್ಲ, ಅವನಿಗೆ ಹೇಳಲು ಮಿಸ್ ಮಾಡಿಕೊಂಡದ್ದನೆಲ್ಲ ಒಂದೆಡೆ ಬರೆದಿಡಿ. ಅವುಗಳಿಗೆ ಕಾವ್ಯದ ರೂಪ ತರಲು ಸಾಧ್ಯವಾ? ಟ್ರೈ ಮಾಡಿ.
* ಇಬ್ಬರಿಗೂ ಇಷ್ಟವಾಗುವ ಮತ್ತು ಇಷ್ಟವಾಗದಿರುವ ಬಣ್ಣ, ಹವ್ಯಾಸ, ದೇಹದ ಹಾವಭಾವ, ತಿಂಡಿ, ದಿರಿಸು, ಯಾವಾಗಲೂ ಕಾಮನ್ ಆಗಿ ಥ್ರಿಲ್‍ಗೊಳಿಸುವ ವಿಷಯಗಳ ಬಗ್ಗೆ ಒಂದು ಪಟ್ಟಿ ಮಾಡಿಡಿ. ಇಬ್ಬರಿಗೂ ಅದೆಷ್ಟು ಸಮನಾದ ಅಭಿರುಚಿಯಿದೆ ಎಂಬುದು ಅರಿವಿಗೆ ಬರುತ್ತದೆ.
* ಅವನನ್ನು ಮಿಸ್ ಮಾಡಿಕೊಂಡ ಕ್ಷಣಗಳ ಬಗ್ಗೆಯೂ ಬರೆಯುವ ಅಭ್ಯಾಸವಿಟ್ಟುಕೊಳ್ಳಿ. ಇನ್ಯಾವತ್ತೋ ಅವನೊಟ್ಟಿಗೆ ಕುಳಿತು ಆ ಕ್ಷಣಗಳನ್ನು ವಿವರಿಸುವ ಸನ್ನಿವೇಶ ಒದಗಬಹುದು. ಯಾವತ್ತಿಗೂ ಅದು ಮುದವಾದ ಅನುಭೂತಿ ಕೊಡುವುದು ಸುಳ್ಳಲ್ಲ.
* ಅವನು ಮೊದಲ ಬಾರಿ ನಿಮ್ಮನ್ನು ಭೇಟಿಯಾದ ಶರ್ಟ್ ಇದ್ದರೆ, ನೀವೇ ಅದನ್ನು ತೊಟ್ಟು ಒಮ್ಮೆ ಕನ್ನಡಿಯಲ್ಲಿ ನಿಮ್ಮ ಪ್ರತಿಬಿಂಬ ನೋಡಿಕೊಳ್ಳಿ. ಸುಮ್ಮನೆ ಅವನನ್ನು ಮನದಲ್ಲಿ ನೆನೆಯಿರಿ. ಆ ಖುಷಿ ಇದೆಯಲ್ಲ, ಜಸ್ಟ್ ಫೀಲ್ ದಟ್!
ಇಷ್ಟು ಮಾಡಿ ನೋಡಿ. ಹೊಸ ಸಂವತ್ಸರ, ಹೊಸ ಮನ್ವಂತರ ಶುರುವಾಗುತ್ತದೆ ಇನಿಯನ ಆಗಮನದ ಹೊತ್ತಿಗಾಗಲೇ.. ಇನಿಯನೊಂದಿಗೆ ಕಳೆವ ಹೊತ್ತು ಇz್ದÉೀ ಇದೆ.. ಅವನಿಲ್ಲದ ಆ ಹೊತ್ತನ್ನು ಜಸ್ಟ್ ಫೀಲ್ ಮಾಡುತ್ತಿರಿ. ಮೇಲೆ ಹೇಳಿರುವ ಎಲ್ಲ ಕಿವಿಮಾತುಗಳನ್ನು ಒಮ್ಮೆ ಪಾಲಿಸಿ. ಯುಗಗಳು ಕ್ಷಣಗಳಾಗಿ ಕಳೆದಿರುತ್ತವೆ. ಆಗ ಹೇಳಬಹುದು,
ನೀನು ನನ್ನ ಅಗಲಿ ಹೊರಡುವ
ಮುನ್ನ ಕಾಡಿದ
ಬೇಸರದ ಭಾವ ಈಗಿಲ್ಲ ಬಿಡು
ಎದೆ ಕಂಪಿಸಲು ಶುರುವಿಟ್ಟಿದ್ದು
ಕಳೆದುಹೋದ
ಆ ನಿನ್ನ ಕಳ್ಳನಗೆಗೆ, ಮಾದಕ ಸ್ಪರ್ಶಕ್ಕೆ...


- ಭಾಚಿ

Thursday, 28 January 2016

ಪಶ್ಚಾತ್ತಾಪದ ನಿಟ್ಟುಸಿರು ಅವನಿಗೆ ಮಾತ್ರನಾ?

ಬಿ ಪ್ರಾಕ್ಟಿಕಲ್ ಅನ್ನೋ ಹುಡುಗಿ. ನಾಳೆಯ ಬಗ್ಗೆ ಚಿಂತಿಸಿ ಗುಣಿಸಿ, ಭಾಗಿಸಿ, ಲೆಕ್ಕಾಚಾರ ಹಾಕಿಯೇ ಮುಂದಿಡಿಯಿಡುವ ಹುಡುಗ. ಇಬ್ಬರಿಗೂ ಎತ್ತಣದಿಂತ್ತೆಣ ಸಾಮೀಪ್ಯ. ಆದರೂ ಅದಮ್ಯವಾಗಿ ಪ್ರೀತಿಸಿದ್ರು, ದೂರನೂ ಆಗ್ಬಿಟ್ರು. ಅಯ್ಯೋ, ಹೀಗದೆಲ್ಲಾ ಕಾಮನ್ ಆಗ್ಬಿಟ್ಟಿದೆ ಬಿಡಿ. ಇವತ್ತು ಇವರ ಜತೇಲಿದ್ದವರು ನಾಳೆ ಇನ್ನೊಬ್ಬರ ಜತೆ ಗುರುತಿಸ್ಕೋತಾರೆ ಅನ್ನುವವರ ಮಧ್ಯೆ, ಕಳೆದ ಎರಡು ವರ್ಷಗಳಿಂದಲೂ ಇಬ್ಬರು ಖಾಸಾ ಒಂಟಿಯಾಗಿಯೇ ಉಳಿದಿದ್ದಾರೆ. ಪರಸ್ಪರರಿಬ್ಬರೂ ವಿರುದ್ಧ ದಿಕ್ಕುಗಳು ಅನ್ನೋದೆನೋ ನಿಜ. ಆದರೆ ಅಷ್ಟು ಗಾಢವಾಗಿ ಹಗಲು ರಾತ್ರಿಗಳ ಪರಿವೆಯೇ ಇಲ್ಲದೆ ಪ್ರೀತಿಸಿದ್ದವರು ಹೀಗ್ಯಾಕಾದ್ರೂ? ಅವರೇನು ಟೀನೇಜ್ ಲವರ್ಸ್ ಅಲ್ಲ. ಪ್ರೀತಿ ಹುಟ್ಟಿದ್ದು, ಕಾಲೇಜಿನಲ್ಲೋ, ಕೆಲಸ ಮಾಡುವ ಸ್ಥಳದಲ್ಲೋ ಅಲ್ಲ. ಇಬ್ಬರು ಪ್ರಬುದ್ಧರು, ಜವಾಬ್ದಾರಿಗಳ ಮೂಟೆಯನ್ನು ಹೆಗಲ ಮೇಲಿರಿಸಿಕೊಂಡೇ ಸಾಂಗತ್ಯಕ್ಕೆ ಕೈ ಚಾಚಿ ನಿಂತವರು. ಪರಸ್ಪರರಿಬ್ಬರಿಗೂ ತಮ್ಮ ಅಭಿರುಚಿ, ನಿರ್ಧಾರಗಳ ಬಗ್ಗೆ ಗೌರವವಿದ್ದೆ ಪ್ರೀತಿಗೆ ಅನುಮತಿ ನೀಡಿದ್ದರು. ಆದರೂ, ಇದ್ದಕ್ಕಿದ್ದ ಹಾಗೇ ಒಂದು ದಿನ ಇಬ್ಬರೂ ಪರಿಚಯವೇ ಇಲ್ಲದವರಂತೆ ಉಳಿದುಬಿಟ್ಟರು. ಬೇರಾಗಿದ್ದು ಒಂದೇ ಮಾತಿಗೆ. ಯಾವುದೋ ಕ್ಷುಲ್ಲಕ ಕಾರಣಕ್ಕೆ ಅವಳದಲ್ಲದ ತಪ್ಪಿಗೆ ಆತ ನೀನು ನನಗೆ ಸಿಗಬಾರದಿತ್ತು. ಅಂದು ನೀನು ನನಗೆ ಸಿಗದೇ ಇದ್ದಿದ್ದರೇ ನನ್ನ ಬದುಕಿನಲ್ಲಿ ಹೀಗೆಲ್ಲಾ ಆಗ್ತಾ ಇರಲಿಲ್ಲ ಎಂದಿದ್ದ. ಅಷ್ಟೇ! ಅವನೆಡೆಗಿನ ಪ್ರೀತಿ ತೊರೆದು, ಆಕೆ ಶಾಶ್ವತ ಮೌನಕ್ಕೆ ಶರಣಾಗಿದ್ದಳು.
ಅವಳೇನು ಅಂತ ಮಾಡಬಾರದ ತಪ್ಪನ್ನೇನೂ ಮಾಡಿರಲಿಲ್ಲ. ಇಬ್ಬರೂ ತಮ್ಮ ಪಾಡಿಗೆ ತಾವು ಅವರವರ ಕೆಲಸಗಳಲ್ಲಿ ಮುಳುಗಿದ್ದರೂ, ಸಿಗುವ ಅಲ್ಪ ಘಳಿಗೆಯಲ್ಲಿ ಅವನ ಸಾಮೀಪ್ಯ, ಒಡನಾಟ ಬಯಸಿದ್ದಳು. ಎಲ್ಲವನ್ನು, ಎಲ್ಲರನ್ನು ತೊರೆದು ಬದುಕುತ್ತಿರುವಾಕೆ. ಬದುಕು ಆಕೆಗೆ ಪ್ರಾಕ್ಟಿಕಲ್ ಆಗಿರುವುದನ್ನ ರಕ್ತಗತವಾಗಿಯೇ ಕಲಿಸಿದೆ ಎನ್ನುವಷ್ಟರ ಮಟ್ಟಿಗೆ ಹೊರಜಗತ್ತಿಗೆ ಪ್ರಾಕ್ಟಿಕಲ್ ಹೌದು. ಆದರೆ, ಒಳಮನಸ್ಸೊಂದು ಭಾವನೆಗಳ ತುಡಿತಕ್ಕೆ ಅವನ ಸಾಂಗತ್ಯ ಯಾವಾಗಲೂ ಅಲ್ಲದಿದ್ದರೂ, ಸಮಯ ಸಿಕ್ಕಾಗಲೆಲ್ಲಾ ಬೇಡುತ್ತಲೇ ಇತ್ತು. ಆದರೆ, ಆತನಿಗೆ ಯಾವುದರಲ್ಲೂ ಆಸಕ್ತಿಯಿಲ್ಲ. ಅರ್ಥಾತ್ ಅವಳ ಮೇಲೂ...! ಮಾತೆತ್ತಿದರೆ ನೀನಂದು ನನಗೆ ಸಿಗಬಾರದಿತ್ತು. ಬದುಕಲ್ಲಿ ನೀ ಬಂದು ಅದೇನೆಲ್ಲಾ ಆಗಿ ಹೋಯ್ತು ಅನ್ನುವ ಮಂತ್ರ ಪಠಣ ಮಾಡುತ್ತಿರುತ್ತಾನೆ.


**
ಒಂದು ವರ್ಷದ ಹಿಂದಿನ ಮಾತು. ಆ ಹುಡುಗ-ಹುಡುಗಿ ನಾವಿಬ್ರೂ ಪಕ್ಕ ದೋಸ್ತ್‍ಗಳು ಅಂತ ಹೇಳ್ಕೊಂಡೇ ಓಡಾಡ್ಕೋಡಿಂದ್ರು. ಆದರೆ, ಇಬ್ಬರು ಪ್ರೀತಿಸ್ತಿದ್ದಾರೆ ಅಂಥ ಜಗತ್ತಿಗೆ ಗೊತ್ತಿತ್ತು. ಅದು ಅಕ್ಷರಶಃ ನಿಜವೂ ಆಗಿತ್ತು. ಒಂದಿನ ಇಬ್ರೂ ರಿಜಿಸ್ಟ್ರಾರ್ ಮದುವೆ ಆದ್ರೂ ಅಂತ ಕೇಳ್ಪಟ್ಟೆ. ಅದಾದ ಸರಿಸುಮಾರು 5-6 ತಿಂಗಳಾಗಿತ್ತೇನೋ ಆಗಲೇ ಡಿವೋರ್ಸ್‍ಗಾಗಿ ಆ ಹುಡುಗ ಓಡಾಡ್ತಿದ್ದಾನೆ ಅನ್ನೋ ವಿಷಯ ಗೊತ್ತಾಯ್ತು. ಅಷ್ಟೆಲ್ಲಾ ಗಾಢವಾಗಿ ಪ್ರೀತ್ಸಿ, ಪರಸ್ಪರರಿಬ್ಬರು ಅಭಿರುಚಿಗಳ ಬಗ್ಗೆ ಅರ್ಥ ಮಾಡಿಕೊಂಡು ಮದುವೆ ಆಗಿ ಯಾಕಿಗಾದ್ರೂ ಅಂದ್ರೆ, ಮನೆಯವರು ಅವಳಿಗಿಂತ ಚೆಂದದ, ಶ್ರೀಮಂತ ಮನೆಯ ಹುಡುಗಿಯನ್ನು ಮದುವೆ ಮಾಡೋಕೆ ನಿಶ್ಚಯಿಸಿದ್ದರಂತೆ. ಆ ಕಡೆ ಮನವೊಲಿದು, ಈಕೆಗೆ ನೀನು ಸಿಗದೇ ಹೋಗಿದ್ರೆ, ನಾನು ಆ ಹುಡುಗೀನಾ ಮದ್ವೆ ಆಗಿ ಲೈಫ್ ಸೆಟ್ಲ್ ಮಾಡ್ಕೊತ್ತಿದ್ದೆ ಅಂತಾ ಇದ್ದನಂತೆ. ಅಷ್ಟಕ್ಕೆ ರೋಸಿ ಹೋಗಿ ಡಿವೋರ್ಸ್‍ಗೆ ಸಮ್ಮತಿಸಿದ್ದಾಳೆ. ಆಕೆ ಮನೆಯಲ್ಲಿಯೂ ಯಾವುದಕ್ಕೂ ಕಡಿಮೆಯಿರಲಿಲ್ಲ. ಒಪ್ಪಿದ್ದರೆ ಅವನಿಗಿಂತ ಚೆಂದದ ಹುಡುಗನ್ನ ನೋಡಿ ಮದ್ವೆ ಮಾಡ್ತಿದ್ದ್ರು. ಆದ್ರೆ ಆಕೆ ಯಾವತ್ತಿಗೂ ಆ ಬಗ್ಗೆ ಅಪ್ಪಿತಪ್ಪಿಯೂ ಸೊಲ್ಲೆತ್ತದವಳಲ್ಲ. ಮನೆಯವರ ವಿರೋಧದ ನಡುವೆಯೂ ಮದುವೆ ಆಗಿ ಬಂದಿದ್ದೀವಿ. ಇಬ್ಬರೂ ಚೆನ್ನಾಗಿ ಬದುಕಿ ತೋರಿಸೋಣ ಎನ್ನುವ ಉವಾಚ ಅವಳದು. ಅವನು   ಈಗ ಅವಳ ಯಾವ ಮಾತು ಕೇಳೋಕು ಅವನು ಕಿವುಡನಾಗಿಬಿಟ್ಟಿದ್ದಾನೆ. ಇತ್ತ ಕಡೆ ತವರು ಮನೆಯಿಂದಲೂ ಆಕೆ ನಿಷ್ಠುರವಾಗಿದ್ದಾಳೆ. ಆದರೆ ಇದ್ಯಾವುದರ ಗೊಡವೆಗೂ ತಲೆ ಕೆಡಿಸಿಕೊಳ್ಳದೇ ಅವಳನ್ನು ಧಿಕ್ಕರಿಸಿ ಬದುಕಲು ಅವನು ಸಕಲ ಸನ್ನದ್ಧನಾಗಿದ್ದಾನೆ.
ಯಾಕೆ ಹೀಗೆ ಗಂಡಿಗೆ ಸಿಗುವ ಕಾರಣಗಳು, ಹೆಣ್ಣಿಗೆ ಸಿಗುವುದಿಲ್ಲವಾ? ಪ್ರೀತಿಯ ಹೊಸತರಲ್ಲಿ ಅವಳ ಎಲ್ಲ ಚಲನ ವಲನಗಳೂ ಚೆಂದವೆನ್ನುತ್ತಿದ್ದ ಆತನಿಗೆ ಏನಾಗಿದೆ ಈಗ. ಅವಳು ದಕ್ಕುವ ಮುನ್ನ ಮೌನಕ್ಕೂ, ಪಿಸು ಮಾತಿಗೂ ದನಿಯಾಗಿ ನಿಲ್ಲುತ್ತಿದ್ದ ಅವನು ಅದೆಲ್ಲಿ ಮಾಯವಾಗಿಬಿಟ್ಟ. ಎಲ್ಲ ಸುಖ ಸೌಲಭ್ಯಗಳು ಬೇಕು ಎನ್ನುವವ ಅವಳನ್ನು ಪ್ರೀತಿಯಲ್ಲಿ ಯಾಕಾದರೂ ಕೆಡವಿಕೊಳ್ಳಬೇಕಿತ್ತು. ಮದುವೆಯಾಗಬೇಕಿತ್ತು. ಎಲ್ಲ ಆದ ಮೇಲೆ ಹೀಗೆ ಪಶ್ಚಾತ್ತಾಪದ ನಿಟ್ಟುಸಿರು ಬಿಟ್ಟು ಜೀವಮಾನವಿಡೀ ಅವಳನ್ನು ಕಣ್ಣೀರಿನಲ್ಲಿ ಕೈತೊಳೆಸಲು ಅಣಿಗೊಳಿಸಬೇಕಿತ್ತು. ಅಷ್ಟಕ್ಕೂ ಪಶ್ಚಾತ್ತಾಪದ ನಿಟ್ಟುಸಿರು ಅವನಿಗೆ ಮಾತ್ರನಾ?
 ಪ್ರೀತಿಸಿದೆ ಅನ್ನೋ ಒಂದೇ ಕಾರಣಕ್ಕೆ ಎಲ್ಲವನ್ನು ಅನುಸರಿಸಿ ಹೋದ ಅವಳಿಗೆ, ತಾನು ಅಂದಿದ್ದಕ್ಕೆಲ್ಲಾ ತಲೆತಗ್ಗಿಸಿ ಬಾಳ್ವೆ ನಡೆಸಬೇಕು   ಎಂಬ ಕಟ್ಟಳೆ ಹೇರೋದು ಅದೆಷ್ಟು ಸರಿ? ಅವನ ಚುಚ್ಚು ಮಾತುಗಳಿಗೆ ಕಿವಿಗೊಡುತ್ತಾ ಅವನೊಟ್ಟಿಗೆ ಹೆಜ್ಜೆ ಹಾಕಬೇಕು ಎನ್ನುವುದು ಯಾವ ನ್ಯಾಯ? ಇಷ್ಟಕ್ಕೂ ಬಂಧ ಬಿಡಿಸಿಕೊಳ್ಳಲೇಬೇಕು ಅಂತ ಅವಳಿಗೂ ಅನಿಸಿದ್ದರೆ ಹೇಳೋಕೆ ನೆಪಗಳಿಗೇನೂ ಬರವಿತ್ತಾ. ಹೇಳುತ್ತಾ ಹೋದರೆ ಪ್ರತಿ ಗುಕ್ಕಿಗೂ ಒಂದು ಸಕಾರಣ ಹುಡುಕಬಹುದಿತ್ತು. ಅವನು ಧಿಕ್ಕರಿಸುತ್ತಾನಲ್ಲ ಎನ್ನುವ ಅವಸರಕ್ಕೆ ಆಕೆಯೂ ಸ್ವಾಭಿಮಾನವನ್ನು ಮುಂದಿಟ್ಟುಕೊಂಡು ಸಂಬಂಧ ಕಡಿದುಕೊಳ್ಳಲು ಮುಂದಾಗಿದ್ದಳಷ್ಟೇ. ಈಗಲೂ ಅವಳು ಅವನಿಷ್ಟಕ್ಕೆ ಸಿಕ್ಕ ಗಾಳ. ಅವನ ಒಪ್ಪಿಗೆ ಅಂತಿಮ ಠಸ್ಸೆ. ಅವನಿಷ್ಟಕ್ಕೆ ಅವಳು ಸರಿ ಎಂದು ತಲೆಯಾಡಿಸಿದ್ದಾಳೆ. ಆದರೂ ಅವಳ ಮನಸ್ಸಿನ ಮಾರ್ದನಿ ಗುಂಯ್‍ಗುಡುತ್ತಲೇ ಇದೆ. ನೆಪ ಮಾತ್ರಕಷ್ಟೆ ನಿನ್ನ ನೆನಪು ಹೌದು ಒಪ್ಪಿಕೊಳ್ಳುತ್ತೇನೆ. ಈಗಲೂ ಮರೆವನ್ನ ನಾನು ಅದಮ್ಯವಾಗಿ ಪ್ರೀತಿಸುತ್ತೇನೆ.

- ಭಾಚಿ 




Thursday, 7 January 2016

ಬದುಕು ಹರಿವ ನದಿಯಂತೆ.....



ಮೊನ್ನೆಯಷ್ಟೇ ಗೆಳತಿಯೊಬ್ಬಳು ದಾರಿಯಲ್ಲಿ ಸಿಕ್ಕಿದ್ಲು. ತೀರಾ ಪರಿಚಯದ ಮುಖವೇನೂ ಅನಿಸಲಿಲ್ಲ. ಆದರೂ ಅದೇನೋ ಕುತೂಹಲ! ಎಲ್ಲಿಯೋ ನೋಡಿಂದಾಗಿದೇಯಲ್ಲಾ.. ನೋಡಿ ಸುಮಾರು ಹತ್ತು ವರ್ಷಗಳ ಮೇಲೆ ಆಗಿತ್ತು. ನೋಟಗಳು ಎದುರು ಬದುರು ಪುನಃ ಪುನಃ ದಿಟ್ಟಿಸಿದಾಗಲೇ ಅರಿವಿಗೇ ಬಂದದ್ದು. ಅವಳು ನನ್ನ ಪ್ರೈಮರಿ ಶಾಲೆಯ ಸಹಪಾಠಿ ಅಂಥ. ನಾನು ಮಾತನಾಡಿಸಲು ಮುಂದಾಗುವ ಹೊತ್ತಿಗೆ ಆಕೆಯೇ ಬಂದು ಮಾತನಾಡಿಸಿದಳು. ಹಾಯ್ ಹೇಗಿದಿಯಾ.. ನಾನು!
ನನಗೂ ಆಕೆಯ ಹೆಸರೇನೂ ನೆನಪಿರಲಿಲ್ಲ. ಮುಖಚರ್ಯೆ ಸ್ವಲ್ಪ ಪರಿಚಿತವೆನಿಸಿತ್ತಷ್ಟೇ. ಆಕೆ ಮಾತ್ರ ನನ್ನ ಹೆಸರು ನೆನಪಿಟ್ಟುಕೊಂಡಿದ್ದಳು. ಆದರೆ, ನಾನು ಹೆಸರಿನೊಂದಿಗೆ ಈಗ ಮುಂದುವರಿದ ಭಾಗವನ್ನು ಹೇಳಿ ಪರಿಚಯ ಮಾಡಿಕೊಂಡೆ. ಎಷ್ಟೆಲ್ಲಾ ಬದಲಾವಣೆ ತಂದಿಟ್ಟಿತ್ತು ಬದುಕು. ಬೌದ್ಧಿಕವಾಗಿ, ಆರ್ಥಿಕವಾಗಿ ಇಬ್ಬರೂ ತಂತಮ್ಮ ವ್ಯಾಪ್ತಿಯ ಇತಿ ಮಿತಿಯಲ್ಲಿ ಬೆಳೆದಿದ್ವಿ. ಆದರೂ, ಆ ಕ್ಷಣಕ್ಕೆ ಕೊಂಚ ಸ್ಟೇಟಸ್‍ಗಳ ಮಟ್ಟಿಗೆ ಮಾತು ಆರಂಭವಾದರೂ, ತದ ನಂತರದಲ್ಲಿ ಮಾತುಗಳು ಹೊರಳಿದ್ದು ನಮ್ಮ ಬಾಲ್ಯದೆಡೆಗೆ.. ನಮ್ಮ ಬಾಲ್ಯದ ದಿನಗಳ ಕಡೆಗೆ.. ಫಾರ್ಮಲಿಟಿ ಹೆಚ್ಚಿನ ಹೊತ್ತು ವರ್ಕ್‍ಔಟ್ ಆಗಲ್ಲ ಅನ್ನೋದಕ್ಕೆ ಇದೂ ಕೂಡ ಒಂದು ಉದಾಹರಣೆಯೇನೋ ದೇಹ ಅದೆಷ್ಟೇ ಬೆಳೆದಿದ್ದರೂ, ಮನಸ್ಸು ಗೆಳೆಯರ ಬಳಗಕ್ಕೆ ಸೇರಿಬಿಟ್ಟಾಗ ಮಗುವಂತೇ ಆಗಿಬಿಡುತ್ತೆ. ಅಲ್ಲಾಗಿದ್ದೂ ಅದೇ!
 ನಾವು ಓದಿದ್ದು, ಒಂದು ಖಾಸಗಿ ಶಾಲೆಯಲ್ಲಿ. ಪ್ರೈಮರಿ ಶಾಲೆಯ ಅವಧಿಯಲ್ಲಿ ಮಾಡಿದ್ದ ಕುಚೇಷ್ಟೆಗಳು, ಆಚರಣೆಗಳ ಕುರಿತಾಗಿ ಒಂದಿಷ್ಟು ಮಾತಿಗಿಳಿದೆವು. ನಾನು ಅದರ ನೆನಪಿನಲ್ಲೊಂದು ಹದಿನೈದು ವರ್ಷಗಳ ಹಿಂದಿನ ಗತಕಾಲದ ವೈಭವವನ್ನು ಮನದಲ್ಲಿಯೇ ಬಯೋಸ್ಕೋಪು ಹಾಕಿ ಓಡಿಸಲಾರಂಭಿಸಿದ್ದೆ. ಏನೇನೆಲ್ಲಾ ಇತ್ತು ಆ ದಿನಗಳಲ್ಲಿ. ಹಾಗಂದುಕೊಂಡರೆ ಏನೀರಲಿಲ್ಲ ಆ ಬದುಕಲ್ಲಿ. ಗೆಳೆಯರೊಟ್ಟಿಗೆ ಇರುತ್ತಿದ್ದ ಅಷ್ಟೂ ವರ್ಷಗಳು ಹೊಸ ವರ್ಷದ ದಿನದಷ್ಟೇ ಕಳೆಗಟ್ಟಿರುತ್ತಿದ್ದವು. ದಿನಾ ಒಂದಿಲ್ಲೊಂದು ನೆಪದಲ್ಲಿ ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ಸಿಹಿ ತಿಂಡಿ. ಅದೂ ಟೀಚರ್ ಕ್ಲಾಸಲ್ಲಿರುವಾಗ್ಲೇ ಕದ್ದು ತಿನ್ನುತ್ತಿದ್ದ ಮಜಾ. ಮಧ್ಯಾಹ್ನದ ಊಟದ ಹೊತ್ತಿಗೆ ಸಿಹಿ ತಂದವರಿಗೆ ಕಾಯುತ್ತಿದ್ದ ಖಾಲಿ ಡಬ್ಬಿ. ಆಗ ತಿಂದ ಅಷ್ಟೂ ಜನರ ಇಂತಿಷ್ಟು ಊಟದ ಪಾಲು. ಎಲ್ಲಾ ತಿಂದು ಭೂರಿ ಭೂಜನ ಸವಿದ ತೃಪ್ತಿ ಅವರಿಗಾದರೆ, ಸಿಹಿ ತಿಂದ ಖುಷಿ ನಮ್ಮದು. ಈ ಚೇಷ್ಟೆಗಳಿಗೆ ಒಂದು ಕಾಲಾವಧಿಯಲ್ಲಿ ದಿನವೂ ಸಿಹಿತಿಂಡಿ. ಮನೆಯಲ್ಲಿ ಸಾಕೆನಿಸುವಷ್ಟು ತಿಂದು, ಅದರ ಪರ್ಯಾಯವಾಗಿ ಎಲ್ಲರ ಮನೆಯ ಮಧ್ಯಾಹ್ನದ ತಿಂಡಿ ಸವಿಯಲು ಬಾಕ್ಸ್ ತರುತ್ತಿದ್ದದ್ದು ಒಂದು ಹವ್ಯಾಸವೇ ಆಗಿಹೋಯ್ತು.  ಸ್ಕೂಲ್‍ನಲ್ಲಿ ಪ್ರತಿ ವರ್ಷವೂ ಆಚರಿಸುತ್ತಿದ್ದ ಹಿರಿಯ ವಿದ್ಯಾರ್ಥಿಗಳ ಬೀಳ್ಕೊಡುಗೆಗೆ ಆಯೋಜಿಸುತ್ತಿದ್ದ ಸರಸ್ವತಿ ಪೂಜೆ, ಶಾಲಾ ವಾರ್ಷಿಕೋತ್ಸವ ಮಾತ್ರವೇ ಅನುದಿನಕ್ಕೂ ನಮ್ಮಲ್ಲಿ ಹೊಸ ಉತ್ಸಾಹ, ಹುಮ್ಮಸ್ಸು ತರುತ್ತಿತ್ತು. ಮಾತ್ರವಲ್ಲ, ಬರುವ ವರ್ಷಕ್ಕೆ ನಾವು ಸೀನಿಯರ್‍ಗಳಾಗಿರ್ತೇವೆ ಎನ್ನುವ ಭಾವನೆಯೇ ಇನ್ನಿಲ್ಲದ ಬದುಕಿನೋತ್ಸಾಹವನ್ನು ಇಮ್ಮಡಿ ಮಾಡುತ್ತಿತ್ತು. ಅದಕ್ಕಾಗಿ ಒಂದಷ್ಟು ತಯಾರಿ ಮಾಡಿಕೊಳ್ಳಲು, ಟೀಚರ್ಸ್‍ಗಳ ನೆಚ್ಚಿನ ವಿದ್ಯಾರ್ಥಿ ಎನಿಸಿಕೊಳ್ಳಲು ನಾ ಮುಂದು ತಾ ಮುಂದು ಅಂಥ ಇನ್ನಿಲ್ಲದ  ಸಾಹಸಗಳಿಗೆ ಕೈಹಾಕುವುದು ನಮ್ಮ ವರ್ಷದ ರೆಸಲ್ಯೂಷನ್‍ಗಳಾಗಿರುತ್ತಿದ್ದವು. ಹೊಸ ವರ್ಷಾಚರಣೆಯ ಗುಂಗು ಅಚಾನಕ್ಕಾಗೂ ನಮ್ಮ ಗಮನಕ್ಕೆ ಸಿಗುತ್ತಿರಲಿಲ್ಲ. ತೀರಾ ಹೈಸ್ಕೂಲಿನ ಮಟ್ಟಿಗೆ ಬಂದಾಗ ಹ್ಯಾಪಿ ನ್ಯೂಇಯರ್ ಅನ್ನುತ್ತಿದ್ದದ್ದು ಬಿಟ್ಟರೇ, ಹೊಸ ವರ್ಷಕ್ಕೊಂದು ರೆಸಲ್ಯೂಷನ್ ಮಾಡ್ಕೊಬೇಕು. ಅದನ್ನ ಚಾಚುತಪ್ಪದ ಹಾಗೇ ಶಿರಸಾ ಪಾಲಿಸಬೇಕು ಎಂಬ ಯಾವ  ತತ್ವವೂ ನಮಗೆ ಗೊತ್ತಿರಲಿಲ್ಲ. ಎಳೆ ವಯಸ್ಸಿನ ಮುಗ್ಧತೆ ಅಂದ್ರೆ ಅದೇ ಅಲ್ವಾ? ಸ್ಕೂಲಿನ ಅವಧಿ ಇದ್ದಷ್ಟು ನಾವೂ ಹ್ಯಾಪಿ ಹ್ಯಾಪಿಯೇ... ಶಾಲಾ ಅವಧಿಯಲ್ಲೇನಾದ್ರೂ ಅಚಾನಕ್ಕಾಗಿ ರಜೆ ಕೊಟ್ರೆ ಇನ್ನೂ ಹ್ಯಾಪಿಯೇ.. ಯಾಕಂದ್ರೆ ಗೆಳೆಯರೊಟ್ಟಿಗೆ ಮೈದಾನದಲ್ಲೋ, ಮತ್ತೆಲ್ಲೋ ಆಟವಾಡಿ ನಾವು ಮನೆಗೆ  ಹೋಗುತ್ತಿದ್ದದ್ದು ಮಾಮೂಲಿ ಸಮಯಕ್ಕೆ. ಅಷ್ಟೂ ಹೊತ್ತು ಯಾರ ಅಡ್ಡಿಯಿಲ್ಲದೇ ದೇಹ ದಣಿಯವಷ್ಟು ಆಟದಲ್ಲಿ ತೊಡಗಿರುತ್ತಿದ್ವಿ. ಮನಸ್ಸು ಮಾತ್ರ ಇನ್ನಷ್ಟು ಆಟದ ಹುಮ್ಮಸ್ಸಿನಲ್ಲಿಯೇ ಇರುತ್ತಿತ್ತು. ಮತ್ತೊಂದು ರಜೆಗೆ ಕಾಯುತ್ತಿತ್ತು!
ಅಲ್ಲಿಗೆ ಮಾತು ಒಂದು ತಹಬದಿಗೆ ಬಂದು ನಿಂತಿತು. ಹೊಸ ವರ್ಷಾಚರಣೆ ಹೇಗ್ ಮಾಡ್ದೆ ಅಂತ ಆಕೆ ಕೇಳುತ್ತಲೇ, ನಾನು, ನನ್ನ ಹಸ್ಬೆಂಡ್ ಗೋವಾಗೋಗಿದ್ವಿ. ಫನ್ ಆಗಿತ್ತು, ಗ್ರಾಂಡ್ ಪಾರ್ಟಿ ಮಾಡಿದ್ವಿ ಅದೂ ಇದೂ ಅಂತ ಹೇಳುತ್ತಾ ಹೊರಟಳು. ಆದರೆ ಮಾರನೇ ದಿನವೇ ಇಬ್ಬರಿಗೂ ಯಾವುದೋ ವಿಷಯಕ್ಕೆ ಮನಸ್ತಾಪ ಆಗಿ ಮಾತುಕತೆ ಬಂದ್ ಆಗಿದೆ. ನಾನು ಅಮ್ಮನ ಮನೆಗೆ ಬಂದಿದ್ದೆ. ಈ ತಿಂಗಳು ಪೀರಿಯಡ್ಸ್ ಬೇರೆ ಆಗಿಲ್ಲ. ಅದ್ಕೆ ಚೆಕ್ ಅಪ್ ಮಾಡಿಸೋಣ ಅಂತ ಬಂದೆ. ಹಾಗೇನಾದ್ರೂ ಪಾಸಿಟೀವ್ ಇದ್ರೆ ತೆಗೆಸಿಬಿಡೋಣ ಅಂತ ಅಂದ್ಲು.
ಎಲಾ ಇವಳಾ! ಏನಾಶ್ಚರ್ಯ ಬೆರಳೆಣಿಕೆಯಷ್ಟೇ ದಿನದ ಹಿಂದೆ ಗಂಡನೊಟ್ಟಿಗೆ ನ್ಯೂಇಯರ್ ಸೆಲೆಬ್ರೇಷನ್ ಮಾಡಿದ ಖುಷಿಯಲ್ಲಿರಬೇಕಾದವಳು ಹೀಗೆಲ್ಲಾ ಮಾತಾಡುತ್ತಿದ್ದಾಳಲ್ಲ ಅಂತ. ಮನಸ್ತಾಪಕ್ಕೆ ಕಾರಣ ಕೇಳ್ಬೇಕು ಎನಿಸಿದರೂ, ಹಾಗೆಲ್ಲಾ ಕೇಳೋದು ತೀರಾ ಬಾಲಿಶತನವೆನಿಸಿತು. ಆದರೂ ಕೊಂಚ ಅನುಭವದ ಪರಿಧಿಯಲ್ಲಿ ಇದರಿಂದ ಭವಿಷ್ಯದಲ್ಲಾಗುವ ತೊಂದರೆಗಳ ಕುರಿತು ನನಗೆ ತಿಳಿದ ಮಟ್ಟಿಗೆ ಕನ್‍ವಿನ್ಸ್ ಮಾಡೋಕೆ ಟ್ರೈ ಮಾಡ್ದೆ. ಊಹೂ! ಆಕೆ ಕೇಳುವ ಪರಿಸ್ಥಿತಿಯಲ್ಲೇ ಇಲ್ಲ. ತಾನು ಮಾಡುತ್ತಿರುವುದೇ ಸರಿ ಎನ್ನುವ ಊವಾಚ ಮೊದಲೇ ಆಕೆ ಹಾಕಿಕೊಂಡಾಗಿದೆ. ನಾನಾದರೂ ಎಷ್ಟರವಳು. ಬಾಲ್ಯದ ಗೆಳತಿಯಾದರೂ ಕೆಲ ನಿಮಿಷಗಳ ಹಿಂದಷ್ಟೇ ಸಿಕ್ಕವಳು! ಮುಂದೆ ಸಿಗುತ್ತೇವೋ ಇಲ್ಲವೋ ಯಾವ ಗ್ಯಾರೆಂಟಿಯೂ ಇಲ್ಲದವಳು. ಆದರೂ, ನ್ಯೂಇಯರ್ ಸೆಲೆಬ್ರೇಷನ್ ದಿನದ ಬಗ್ಗೆ ಹೇಳುವಾಗಿನ ಅವಳ ಮುಖದ ನಗು, ಆನಂತರದ ವಿಷಯಗಳನ್ನು ಹಂಚಿಕೊಳ್ಳುವಾಗ ಇರಲಿಲ್ಲ. ಆ ಸಮಯಕ್ಕೆ ಮಾಡಿದ ಖರ್ಚು, ಮೋಜು, ಮಸ್ತಿ ಕೇವಲ ನೆನಪಿಗಷ್ಟೇ ಸೀಮಿತವಾಗಿ, ಉಳಿದ ನೋವುಗಳು ಬದುಕಿನ ಪರ್ಯಂತ ತನ್ನ ಅಧಿಪತ್ಯ ಸಾಧಿಸುವುದಾದರೆ! ವರ್ಷಾಚರಣೆಗೆ ಎಲ್ಲಿಯ ಅರ್ಥ?! ಆಗಲೇ ಥಟ್ಟನೆ ಹೊಳೆದದ್ದು, ಈ ವರ್ಷ ತಾನು ನ್ಯೂಇಯರ್ ವಿಷ್ ಹೇಳೋಕು ಕೇಳೋಕು ಮಧ್ಯರಾತ್ರಿ ಎಚ್ಚರದಲ್ಲಿರಲಿಲ್ಲ. ಕಾರಣ, ನಾನೂ ಕೂಡ ಯಾವುದೋ ಕ್ಷುಲ್ಲಕ ಕಾರಣದಿಂದ ಬೇಸತ್ತು, ಯಾವುದರ ಚಿಂತೆಯಿಲ್ಲದೇ, ಮಗನೊಟ್ಟಿಗೆ ಗಡದ್ದು ನಿದ್ದೆಗೆ ಜಾರಿಬಿಟ್ಟಿದ್ದೆ ಎಂಬುದು ನೆನಪಾಯ್ತು. ನೂತನ ವರ್ಷ ಆಚರಿಸಿದೇವೋ ಇಲ್ಲವೋ ಮುಖ್ಯವಲ್ಲ. ಅದು ಗತಿಸಿದ ಸಂಗತಿ. ಬದುಕಿನ ಆಚರಣೆ ಸಕಾಲದಲ್ಲಿ ಮಾಡದಿದ್ದರೆ ನಮ್ಮಂತಹ ನಿರುತ್ಸಾಹಿಗಳು ಬೇರೊಬ್ಬರಿರಲ್ಲ ಎಂಬುದರ e್ಞÁನೋದಯ ಅಂದು ಕಾಫಿ ಡೇನಲ್ಲಿ  ನನಗಾಯ್ತು.....

- ಭಾಚಿ

Monday, 21 December 2015

ತಿರಸ್ಕಾರಕ್ಕೂ ಪ್ರತಿಕ್ರಿಯೆ ಬೇಕಾ...?

ಅಂದ್ಯಾಕೋ ಮನೆ ಸಂಪೂರ್ಣ ನಿಶ್ಯಬ್ದವಾಗಿತ್ತು... ಮನಸ್ಸು ಕೂಡ! ಏನೂ ಮಾಡ್ಬೇಕು ಅಂತ ಅನಿಸಲಿಲ್ಲ. ಹಾಗಾಗಿಯೇ ಬಹಳ ದಿನಗಳ ನಂತರ ಟಿವಿ ಮುಂದೆ ಕೂತೆ. ‘ಅಮ್ಮಾ... ಚಿಂಟು, ಪೋಗೋ ಹಾಕು’ ಅನ್ನೋಕೆ ಮಗರಾಯ ಮನೆಯಲ್ಲಿರಲಿಲ್ಲ. ಸಂಜೆಯಾಗಿದ್ದರಿಂದ ಹೊರಹೋಗುವ ಮನಸ್ಸಾಗಲಿಲ್ಲ. ಟಿವಿ ಆನ್-ಆ- ಉಸಾಬರಿ ವಹಿಸಿದ್ದ ನಮ್ಮನೆಯ ಖುಷಿಯ ಉಪಸ್ಥಿತಿ ಕಾಡುತ್ತಲೇ ಇತ್ತು. ಅಂತೂ ಅದೆಷ್ಟೋ ದಿನಗಳ ತರುವಾಯ ನಾನಾಗಿಯೇ ಟಿವಿ ಆನ್ ಮಾಡಿದೆ. ಟಿವಿಯನ್ನೇನೋ ಆನ್ ಮಾಡಿದೆ. ಆದರೆ ಯಾವ ಅಡಿಕ್ಷನ್‌ಗೂ ಒಳಗಾಗದ ನಾನು ಏನು ನೋಡೋದು? ನ್ಯೂಸ್...? ಸೀರಿಯಲ್? ಸಿನಿಮಾ...? ಗೊಂದಲಕ್ಕೆ ಬಿದ್ದು ಅದೆಷ್ಟೇ ಚಾನೆಲ್ ಬದಲಾಯಿಸಿದರೂ ಮನಸ್ಸು ಯಾವುದನ್ನು ನೋಡುವುದಕ್ಕೂ ಒಪ್ಪಲಿಲ್ಲ. ಕೊನೆಗೂ ಹದಿನೈದು ನಿಮಿಷ ಶತಾಯಗತಾಯ ಸರ್ಕಸ್ ನಡೆಸಿದ ಬಳಿಕ ಅದ್ಯಾರೋ ಯಾರಿಗೋ ಕಪಾಳಕ್ಕೆ ಹೊಡೆಯುವ ದೃಶ್ಯ ಕಣ್ಣಿಗೆ ಬಿತ್ತು ಅಷ್ಟೇ. ಅಚಾನಕ್ಕಾಗಿ ಬೆರಳು ಚಾನೆಲ್ ಬದಲಾಯಿಸುವುದನ್ನು ಸಂಪೂರ್ಣ ಬಂದ್ ಮಾಡಿತು. ಹೊಡೆದದ್ದು ಹೀರೋ, ಹೊಡೆಸಿಕೊಂಡದ್ದು ಮಾತ್ರ ಹೀರೋಯಿನ್ ಅಲ್ಲ. ಮತ್ಯಾರು? ಅವಳು ಗರ್ಲ್ - ಫ್ರೆಂಡಾ..! ಅಲ್ಲ. ಮತ್ಯಾರು ಎಂಬ ಕುತೂಹಲದಲ್ಲೇ ಇಡೀ ಸಿನಿಮಾ ನೋಡುವ ಹಾಗಾಯ್ತು. ಅದು ದೊಡ್ಡ ಬ್ಯಾನರ್‌ನ ಅಡಿಯಲ್ಲಿ ಬಂದ ಹೊಸ ನಾಯಕನ ಹೊಸ ಸಿನಿಮಾ. ಸಿನಿಮಾ ಯೂಥ್ ಓರಿಯೆಂಟೆಡ್ ಅನಿಸಿದರೂ, ಈಗಿನ ಯುವಮನಸ್ಸುಗಳು ಭಾವನೆಗಳೊಟ್ಟಿಗೆ ಹೇಗೆಲ್ಲ ಯೋಚಿಸುತ್ತವೆ ಎಂಬುದರ ವಿವರಣೆ ಅಲ್ಲಿ ಅನಾವರಣಗೊಂಡಿತ್ತು. ನಾಯಕ ಸಿಕ್ಕಾಪಟ್ಟೆ ದಿಲ್ದಾರ್ ಹುಡುಗ. ಎಲ್ಲವನ್ನೂ ಪಾಸಿಟಿವ್ ಆಗಿ ತಗೊಂಡು ನಿಭಾಯಿಸುವ ಕ್ಯಾರೆಕ್ಟರ್. ಅಲ್ಲದೆ ಗಿಟಾರಿಸ್ಟ್. ಮ್ಯೂಸಿಕ್‌ನಲ್ಲೇ ಮಂತ್ರಮುಗ್ಧರನ್ನಾಗಿಸಿ, ಅವನೊಂದಿಗಿದ್ದ ಯಾರಿಗೂ ಬೋರ್ ಅನಿಸುವುದಕ್ಕೆ ಬಿಡದೆ ಇರುವಂಥವನು.ಸಂಗೀತಸ್ಪರ್ಧೆಗಾಗಿ ಗೋವಾಕ್ಕೆ ಹೋಗುತ್ತಿದ್ದಾಗ ನಾಯಕನಿಗೆ ಪರಿಚಯವಾದ ಹುಡುಗಿ ಆಕೆ. ಅವಳಿಗೂ ಈ ಮೊದಲೇ ಒಬ್ಬ ಬಾಯ್-ಫ್ರೆಂಡ್ ಇರುತ್ತಾನೆ. ಅವಳ ಚೆಲ್ಲುಚೆಲ್ಲು ವರ್ತನೆ ಸಹಿಸದೆ ಬ್ರೇಕ್ ಅಪ್ ಆಗಿದ್ದ. ಅದಕ್ಕೆ ಅವಳು ವಿಷ ಕುಡಿದು ಸಾಯೋಕೆ ಹೋಗುತ್ತಾಳೆ. ಅದನ್ನು ನೋಡಿದ ನಾಯಕ ಮತ್ತವರ ಗ್ಯಾಂಗ್ ಅವಳಿಗೆ ಸಮಾಧಾನ ಹೇಳಿ, ಕರೆತಂದು ಅವನು ಮತ್ತೆ ಒಪ್ಪಿಕೊಳ್ಳುವ ಹಾಗೆ ಮಾಡ್ತೀವಿ ಅಂತ್ಹೇಳಿ, ‘ಬ್ರೇಕ್ ಅಪ್ ಪಾರ್ಟಿ’ ಪ್ಲಾನ್ ಮಾಡುತ್ತಾರೆ.
ಕೊನೆಗೆ ಅವರು ಅಂದುಕೊಂಡ ಹಾಗೆ ಅವಳ ಬಾಯ್-ಫ್ರೆಂಡ್‌ಗೆ eನೋದಯವಾಗಿ, ‘ನೀನಿಲ್ದೆ ನಾನಿರೋಲ್ಲ ಮತ್ತೆ ಒಂದಾಗೋಣ’ ಎನ್ನುತ್ತಾನೆ. ಆದರೆ ಅವಳು ‘ನೋ...’ ಅಂತ ಹೇಳಿ ಅಲ್ಲಿಂದ ಖುಷಿಯಿಂದಲೇ ಹೊರಟುಬಿಡುತ್ತಾಳೆ. ಅವಳ ಹಿಂದೆಯೇ ಹೋಗುವ ನಾಯಕ, ‘ನಾವು ಪ್ಲಾನ್ ಮಾಡಿದ್ದು ಇದಕ್ಕೆ ತಾನೆ? ಅವನು ಒಪ್ಪಿಕೊಂಡ ಮೇಲೂ ನೀನ್ಯಾಕೆ ಬೇಡ ಎಂದಿದ್ದು?’ ಅಂತ ಪ್ರಶ್ನಿಸ್ತಾನೆ. ಆದರೆ, ಆಕೆ ಕೊಡುವ ಉತ್ತರ, ‘ಯಾವತ್ತೂ ನನ್ನನ್ನು ಅವನು ಬೇಡ ಅನ್ಬಾರ್ದು. ಅದನ್ನ ನಾನ್ಹೇಳಿದ್ರೇನೆ, ನಾನು ಬ್ರೇಕ್ ಅಪ್ ಮಾಡಿಕೊಂಡ್ರೇನೆ ನನಗೆ ಖುಷಿ’ ಅಂದುಬಿಡ್ತಾಳೆ. ಅಷ್ಟಕ್ಕೇ ಅವನಿಗೆ ರೇಗಿಹೋಗಿ ಕಪಾಳಕ್ಕೆ ಬಾರಿಸುತ್ತಾನೆ. ಅದಾದ್ಮೇಲೆ ಕಥೆ ಏನೋ ಮುಂದುವರೀತು. ಆದ್ರೆ ನನ್ನ ಮನಸ್ಸು ಮಾತ್ರ ಅಲ್ಲೇ ಫ್ರೀಜ್ ಆಗಿಹೋಯ್ತು. ಇಷ್ಟಕ್ಕೂ ಮನಃಸ್ಥಿತಿಗಳು ಯಾಕೆ ಕ್ಷಣಕ್ಕೊಮ್ಮೆ ಬದಲಾಗುತ್ತವೆ? ಆಧುನಿಕ ಜೀವನವು, ಯಾರಿಲ್ಲದಿದ್ದರೂ ನಿರ್ದಿಷ್ಟ ಆದಾಯವಿದ್ದರೆ ಬದುಕು ನಡೆಸಬಹುದು ಎಂಬ ವಾತಾವರಣ ಸೃಷ್ಟಿಸಿರುವುದು ನಿಜ. ಆದರೆ, ಬಂಧಗಳಿಲ್ಲದೆ ಬದುಕು ಬರಿದು ಅನ್ನೊದೂ ಅಷ್ಟೇ ನಿಜ. ಎಲ್ಲ ಸಂಬಂಧಗಳು ಪ್ರತಿಷ್ಠೆಯ ಮೇಲಾಟದಲ್ಲೇ ಪ್ರಸ್ತುತವಾಗುತ್ತಿದ್ದರೆ ಯಾವ ಸಂಬಂಧ ಉಳಿದೀತು? ತಲೆಯಲ್ಲಿ ಅಚಾನಕ್ಕಾಗಿ ಇಂತಹದ್ದೊಂದು ಪ್ರಶ್ನೆ ಭುಗಿಲೆದ್ದಿತ್ತು.ವ್ಯವಹಾರಗಳಲ್ಲಿ ಅನಿರೀಕ್ಷಿತವಾಗಿ ಆಗುವ ಬದಲಾವಣೆಗಳಿಗೇನೋ ಕುಟುಂಬದ, ಸ್ನೇಹಿತರ ಬೆಂಬಲ, ಸಾಂತ್ವನ ಸಿಗುತ್ತದೆ. ಒಂದಿಷ್ಟು ಸ್ವಯಂ ಯೋಜನೆಗಳು ಅದನ್ನ ಸರಿದೂಗುವಂತೆ ಮಾಡಿಬಿಡುತ್ತವೆ. ಆದರೆ ಮನಸ್ಸಿನ ಸ್ಥಿಮಿತ ಇಲ್ಲದೆ, ಸ್ಪಷ್ಟತೆ ಇಲ್ಲದೆ ಟೈಂಪಾಸ್‌ಗೆ ನಾವಾಗಿಯೇ ಮಾಡಿಕೊಳ್ಳುವ ಪ್ರೀತಿ -ಪ್ರೇಮಗಳಂಥ ಸಂಬಂಧಗಳು ಮಾನಸಿಕ ಸ್ವಾಸ್ಥ್ಯವನ್ನು ಹೇಗೆ ಹದಗೆಡಿಸಬಲ್ಲದು ಎಂಬುದಕ್ಕೆ ಸಾಕ್ಷಿ ಈ ಸಿನಿಮಾ. ಎಲ್ಲದಕ್ಕೂ ಅನುಕೂಲ ಮಾಡಿಕೊಡುವ ಕುಟುಂಬ, ಯಾವುದಕ್ಕೂ ಪರದಾಡುವ ಸ್ಥಿತಿಯನ್ನು ತಂದೊಡ್ಡದು. ಅಂಥ ಸಂದರ್ಭಗಳಲ್ಲಿ ಉಂಟಾಗುವುದೇ ಇಂಥ ಟೈಂಪಾಸ್ ಪ್ರೀತಿ-ಪ್ರೇಮ. ಪ್ರೀತಿಸಿದರೆ ಪರಸ್ಪರ ಪ್ರೇಮ ನಿವೇದನೆಗೆ ಪೈಪೋಟಿ. ಕಳಚಿಬಿದ್ದರೆ ಅದರಲ್ಲೂ, ತಾನೇ ಮೊದಲು ಬ್ರೇಕ್ ಅಪ್ ಆಗ್ಬೇಕು, ತಾನೇ ಮೊದಲಾಗಬೇಕು ಎಂಬ ಸ್ಪರ್ಧೆ. ತಿರಸ್ಕಾರವೇ ಇಲ್ಲಿ ಬಹು ಮುಖ್ಯ ಎಂದಾದಮೇಲೆ ನಿಜಕ್ಕೂ ಈ ಮನಸ್ಸುಗಳು ಪ್ರೀತಿಸಿದ್ದವಾ? ಅಥವಾ ತನ್ನನ್ನು ಆರಾಧಿಸುವ ಮನಸ್ಸನ್ನು ತಾನೂ ಆರಾಧಿಸಬೇಕೆ ಎಂಬುದಕ್ಕಿಂತಲೂ, ತಾನೇ ಅವನನ್ನು ತಿರಸ್ಕರಿಸಿದರೆ ಹೇಗೆಂಬ ಪ್ರತಿಕ್ರಿಯೆಯೇ ಪ್ರೀತಿಯ ಮುಖವಾಡ ತೊಟ್ಟಿತ್ತಾ?! ಈ ಎಲ್ಲ ಗೊಂದಲಗಳಿಗೂ ಉತ್ತರ ಮಾತ್ರ ಸಿಗದೆ ಚಿತ್ರ ಮುಗಿದಿತ್ತು.ಕಥೆ ಚಿತ್ರದ್ದೇ ಆದರೂ, ಚಿತ್ರಿತವಾಗಿದ್ದು ನೈಜ ಘಟನೆಗಳೇ. ಈಗಿನ ಯುವ ಮನಸ್ಸುಗಳ ತುಡಿತ ಇಷ್ಟೇ. ಎಲ್ಲರೂ ತನ್ನತ್ತ ನೋಡುವ ಹಾಗೆ ತನ್ನನ್ನು ಅನಾವರಣ ಮಾಡಬೇಕು, ಎಲ್ಲರೂ ತನ್ನ ಪ್ರೀತಿಸ್ಬೇಕು ಅಂತ. ತಾನು ಮಾತ್ರ ಯಾರೊಬ್ಬರನ್ನೂ ಅದೇ ಬಗೆಯ ಮನಃಸ್ಥಿತಿಯಲ್ಲಿ ಪ್ರೀತಿಸಲು ಮುಂದಾಗೋದೇ ಇಲ್ಲ. ತಿರಸ್ಕಾರದಲ್ಲಿ ಮಾತ್ರ ಮನಸ್ಸು ಪ್ರತಿಕ್ರಿಯಿಸಲು ಮೊದಲು ಮಾಡುತ್ತದೆ ಎಂಬುದೇ ಬಹು ದೊಡ್ಡ ದುರಂತ. ಒಬ್ಬರನ್ನು ತಿರಸ್ಕರಿಸುವುದು ದೊಡ್ಡ ವಿಷಯ ಅಲ್ಲ. ಹುಟ್ಟುತ್ತಲೇ ಜತೆಗಂಟಿಕೊಂಡ ಸಂಬಂಧಗಳೋ, ನಾವಾಗಿಯೇ ಮಾಡಿಕೊಂಡ ಸಂಬಂಧಗಳೋ ಆದರೆ ಅವುಗಳನ್ನು ಉಳಿಸಿಕೊಳ್ಳುವಲ್ಲೇ ಇರುವುದು ನಿಜವಾದ ಗೆಲುವು... ಅಲ್ವಾ? 

-  ಭಾಚಿ 


Thursday, 10 December 2015

ನಾನು ಯಾರು?




ವಿಶ್ವದ ರಂಗಸ್ಥಳದ ಮೇಲೆ ಹುಸಿಕಾಳಗ ಶುರುವಾಗಿದೆ
ಯುದ್ಧದಲ್ಲಿ ಎಲ್ಲರು ಜಟ್ಟಿಗಳೇ, ಫೈಲ್ವಾನರೇ, ಮಹಾನ್‍ಮಲ್ಲರೇ,
ವೀಕ್ಷಣೆಗೆ ಕುಳಿತ ನಾನಲ್ಲಿ ನಿರವಿಸಲು ಹೋದರೆ 
ಎಲ್ಲರೂ ಪ್ರಶ್ನಿಸುತ್ತಿದ್ದಾರೆ ನೀನು ಯಾರು?

ಹೆಸರ ಹೇಳಿ ಪರಿಚಯಿಸಿಕೊಂಡೆ ಅವರ್ಯಾರಿಗೂ ನಾನು ಗೊತ್ತಿಲ್ಲ
ಅರೆಕ್ಷಣ ಪೆಚ್ಚಾಗಿ, ಕಾಳಗದಲ್ಲಿ ತಗುಲಿಹಾಕಿದ್ದ ನಿಲುಗನ್ನಡಿಯ ಮುಂದೆ ನಿಂತು
ನನ್ನೇ ನಾನು ಕೇಳಿಕೊಂಡೆ ನನ್ನ ಹೆಸರೇ ಗೊತ್ತಿರದ ಇವರ ಮುಂದೆ
ನಾನ್ಯಾರೆಂದು ಹೇಳಲಿ? ಹೌದು, ನಾನು ಯಾರು?
ಅಪ್ಪ-ಅಮ್ಮನ ಮಗಳ, ಗಂಡನಾ ಹೆಂಡತಿಯಾ? ಅತ್ತೆಯ ಸೊಸೆಯಾ?
ಆ ಮಗುವಿನ ತಾಯಿಯಾ? ಬೆನ್ನಿಗೆ ಬಿದ್ದವರ ಸಹೋದರಿಯಾ?
ಆ ಭಾವುಕರ ನಡುವಿನ ಗೆಳತಿಯಾ? ಇಲ್ಲ ಕಾರಣ ಹೇಳದೇ
ಬಿಟ್ಟು ಹೋದ ಆ ಹಳೇ ಪ್ರಿಯಕರನ ಮನದನ್ನೆಯ? 
ಇಷ್ಟಕ್ಕೂ ನಾನೇನೆಂದು ಉತ್ತರಿಸಲಿ ಬದುಕಿನ ಅಷ್ಟು ಪಾತ್ರಗಳಲ್ಲಿ 
ನಾನ್ಯಾರೆಂಬುದನ್ನ ಇವರಿಗೆ ವಿವರಿಸಿ ಹೇಳಿಲಿ,
ಹಾಗಾದರೆ, ನಿಜಕ್ಕೂ ನಾನು ಯಾರು?

ಕಾಳಗ ತನ್ನ ಪಾಡಿಗೆ ತಾನು ಮುಂದುವರಿದೇ ಇತ್ತು ನನ್ನನ್ನು ಬದಿಗೊತ್ತಿಸಿ
ನಾನು ನೋಡುತ್ತಲೇ ನಿಂತೆ. ಸಹಜ ರೀತಿಯಲ್ಲೇ
ಅಲ್ಲೆಲ್ಲರೂ ಗೆಲ್ಲುವ ಉತ್ಸಾಹಿಗಳೇ, ಎಲ್ಲರೂ ಶಕ್ತಿವಂತರೇ
ವಿಜಯ ಸಾಧಿಸುವ ಹಪಹಪಿಕೆಯಲ್ಲಿ ನೋಡನೋಡುತ್ತಲೇ ಯುದ್ಧಕ್ಕೆ ನಿಂತ ಜಟ್ಟಿಗಳು
ಮಾತು ಮಾತಲ್ಲೇ ನಿರ್ವಾಣರಾಗುತ್ತಾ ನಿಂತರು.
ಬದುಕು ಅವರನ್ನು ತಂದು ನನ್ನ ಪಕ್ಕಕ್ಕೆ ನಿಲ್ಲಿಸಿತ್ತು
ಇನ್ನೊಂದಷ್ಟು ಮಂದಿ ಶೂನ್ಯಭಾವ ಹೊತ್ತು ಬದಿಗೆ ಸರಿದರು
ಮತ್ತೊಂದಷ್ಟು ಮಂದಿ ಕೆಸರೆರಚಿಕೊಂಡು ತಮ್ಮ ಸಾಮರ್ಥ್ಯ ಮರೆತು
ತಮ್ಮ ಮುಂದೆ ತಾವೇ ಬೆತ್ತಲಾದರು.
ಮಗದೊಂದಿಷ್ಟು ಮಂದಿ ಪ್ರಶ್ನಿಸುತ್ತಲೇ ಜೀವ ತೆತ್ತರು
ಒಂದಷ್ಟು ಮಂದಿ ಹೆಸರೇ ಇಲ್ಲದಂತೆ ನಿರ್ನಾಮವಾಗಿ ಹೋದರು
ಆದರೇ ನಾನು ಅಲ್ಲಿಯೇ ಉಳಿದಿz್ದÉೀ...
ಪ್ರಶ್ನೆ ನನ್ನನ್ನು ಕಾಡುತ್ತಲೇ ಇತ್ತು. ನಾನು ಯಾರು?

ಅಷ್ಟುಕ್ಕೂ ಕಾಳಗದಲ್ಲಿ ಗೆದ್ದವರಿಗೆ ಬದುಕು ಸಿಗುವುದರಲ್ಲಿತ್ತು
ಆದರೆ ಸೋತ ಎಲ್ಲರನ್ನು ನೋಡಿ ಬದುಕು ಮೈಕೊಡವಿ ನಿಂತಿತ್ತು
ಯಾರ ಕೈಗೂ ದಕ್ಕದೇ `ಬದುಕು' ಅಗ್ರಸ್ಥಾನದಲ್ಲಿ ಮೆರೆಯುತ್ತಿತ್ತು
ಬದುಕು ನಿಜಕ್ಕೂ ಬೀಗುತ್ತಿತ್ತು. ಮಹಾನ್ ಮಹಾನ್ ಮಲ್ಲರ  ಕೈಗೆ ಸಿಗದೇ,
ಪೆಚ್ಚು ಮೋರೆ ಹೊತ್ತ ನಾನು ಅಸಹಾಯಕಳತೆಯಿಂದ ಬದುಕ ಮುಂದೆ 
ನಿಂತು ಪ್ರಶ್ನಿಸಿದೆ. ನೀನಾದರೂ ಹೇಳು ನಾನು ಯಾರು?

ಅಸ್ತಿತ್ವವೇ ಇರದ ನಿನ್ನನ್ನು ಹರಾಜಿಗಿಡುತ್ತೇನೆ. ಆಗಲಾದರೂ ವಾರಸುದಾರ ಸಿಕ್ಕಾನು
ಆಗ ನೀನು ಯಾರೆಂದು ಎಲ್ಲರಿಗೂ ತಿಳಿಯುತ್ತದೆ ಎಂದಿತು ಬದುಕು
ಅದಕ್ಕೆ ನಾನು ಒಪ್ಪಿದೆ. ಹರಾಜು ನಡೆಯಿತು. ಅಲ್ಲೂ ನನಗೆ ನಿರಾಸೆ ಕಾದಿತ್ತು
ಕೊಳ್ಳಲು ಬಂದವರದ್ದು ಅದೇ ಪ್ರಶ್ನೆ ನೀನು ಯಾರು?

ಬದುಕು ನನ್ನ ಮೇಲೆ ನಿರುತ್ಸಾಹ ತೋರಿ ಮಾರ್ಗ ಬದಲಾಯಿಸಿ ತನ್ನ ಪಾಡಿಗೆ
ತಾನು ಕಾಳಗ ಮುಗಿಸಿ ತೆರಳಿತು, ನನ್ನ ಪ್ರಶ್ನೆಗೆ ಉತ್ತರಿಸಲಾಗಿದೆ,
ಅಲ್ಲಿದ್ದವರಿಗೆ ನಿರ್ವಿವಾದವಾಗಿ ಉಸುರಬೇಕಿದ್ದ ನಾನೂ ಅಲ್ಲಿಂದ ಹೊರಟೆ 
ಬದುಕಿನೊಂದಿಗೆ ಬದುಕ ಸಾಗಿಸುತ್ತಾ...
ಈಗೆಲ್ಲರ ಬಾಯಿಯೂ ಮುಚ್ಚಿದೆ ನೀನು ಯಾರು ಎಂಬ ಪ್ರಶ್ನೆ ಬಾರದೇ
ಕಾರಣ ನನಗೇ ನಾನಾರೆಂಬ ಪ್ರಶ್ನೆ ಬೇಡ, ಯಾರೆನೆನ್ನುತ್ತಾರೆನ್ನುವ ಗೌಜಲು ಬೇಡ
ನಾನೊಬ್ಬಳು ಸಾಮಾನ್ಯ ಸ್ತ್ರೀ ಅಷ್ಟೆ....!


-ಭಾಚಿ 

Tuesday, 1 December 2015

ಕತೆ ಕಟ್ಟುವವರಿಗೆ ದಂತಕಥೆಯಾಗುವಳೇ `ಅವಳು'..!?



ಕತೆ ಕಟ್ಟುವವನಿಗೆ ಅವಳಾದರೇನು? ಅವನಾದರೇನು? `ಅವಳ' ಹಿಂದೆ ಬಿದ್ದರಷ್ಟೇ ತನ್ನ ಬೇಳೆ ಉತ್ಕøಷ್ಟವಾಗಿ ಬೇಯುವುದು ಎಂಬ ಮನಃಸ್ಥಿತಿಯುಳ್ಳ ಕತೆಗಾರನಿಗೆ ಆಹಾರವಾಗಿದ್ದು ನಿಜಕ್ಕೂ `ಅವಳ' ಸವಕಲು ಕತೆ. ಅವನೊಬ್ಬ ಹವ್ಯಾಸಿ ಕತೆಗಾರ. ಕತೆ ಕಟ್ಟುವುದರಲ್ಲಿ ನಿಸ್ಸೀಮ. ಅದು ನೋವಿನ ಸಂಗತಿಯಾಗಲೀ, ನಲಿವಿನ ವಿಷಯವಾಗಲೀ, ಓದುಗ ಹೆಚ್ಚಾಗಿ ಮರುಗುವುದು ಕೊಂಚ ಭಾವಾವೇಶದ ಸಂಗತಿಗಳಿಗೆ ಎಂಬ ಸತ್ಯ ಅರಿತು ಆತ ಹೇಳಲು ಮುಂದಾಗಿದ್ದು ಅವಳ ವ್ಯಥೆಯ ಕತೆಯನ್ನು. ಅವನಿಗೆ ಸದಾ ಕೊರಗಿನಲ್ಲಿರುವ, ಹೆಣ್ಮಕ್ಕಳ ಕತೆಯೇ ಬಲು ಇಷ್ಟ. ಮಾತ್ರವಲ್ಲ, ಅದನ್ನೇ ಓದುಗರಿಗೆ ವಿಶಿಷ್ಟ ರೆಸಿಪಿಯಲ್ಲಿ ಉಣಬಡಿಸುವುದೆಂದರೆ ಇನ್ನೂ ಇಷ್ಟ.
ಹೇಳಿಕೊಳ್ಳುವಷ್ಟು ತೀರಾ ಹಳೆಯ ಪರಿಚಯವೇನಲ್ಲ. ಅವಳು ಫೇಸ್‍ಬುಕ್‍ನಲ್ಲಿ ಅಪ್‍ಡೇಟï ಮಾಡುತ್ತಿದ್ದ ಎಲ್ಲ ಸ್ಟೇಟಸ್‍ಗಳಿಗೆ ಲೈಕು, ಕಮೆಂಟï ಮಾಡುವ ಮೂಲಕ ಪರಿಚಯವಾದನಾತ. ಕೇವಲ 40 ದಿನಗಳ ಒಡನಾಟದಲ್ಲಿದ್ದ ಅವರು ಅಪರಿಚಿತರಾದರೂ ಪರಿಚಯದಂತಿದ್ದರು. ಆತನಕವೂ ಇಬ್ಬರ ಪೆÇ್ರಫೈಲïಗಳು ಒಬ್ಬರಿಗೊಬ್ಬರಿಗೆ ಮೂರು ವರ್ಷಗಳಿಂದ ತೋರಿಕೆಯಲ್ಲಿದ್ದವಷ್ಟೆ.
ಆಕೆಯೂ ಬರಹಗಾರ್ತಿಯೇ. ಹಾಗಾಗಿಯೇ, ಬರವಣಿಗೆಯ ವಸ್ತು-ವಿಷಯಗಳು ಇಬ್ಬರ ವ್ಯಕ್ತಿತ್ವಕ್ಕೆ ಪ್ರಸ್ತುತಪಡಿಸುವ ರೀತಿಗಳಿಗೆ ಹೋಲಿಕೆಯ ಆಜುಬಾಜಿನಲ್ಲೇ ಇರುತ್ತಿದ್ದವು.  ಯೋಚನೆಯ ವ್ಯಾಪ್ತಿಯೇ ಅಂಥದ್ದಲ್ಲವಾ..!? ಸಿಕ್ಕಾಗ ಪ್ರೇಮದ ರಸಾನುಭಾವ, ಪರಿಪರಿಯಾಗಿ ಉಣಬಡಿಸುವ ಉಮೇದು, ಕೈತಪ್ಪಿದಾಗ ವಿರಹ ಯಾತನೆ, ಸಿಗದೆಯೇ ಹೋದಾಗ ನಿರಾಸೆ, ಭಾವಾವೇಶ, ಕೊನೆಗೆ ತನ್ನನ್ನೇ ತಾನು ಸಂತೈಸಿಕೊಳ್ಳುವ ಪರಿ, ಕಡೆಯದಾಗಿ ಎಡವಿ ಕಲಿತದ್ದಕ್ಕೆ ಅಲ್ಲಿನ ಹಿಂಬಾಲಿಗರಿಗೊಂದಿಷ್ಟು ಪಾಠ ಪ್ರವಚನಗಳು, ಬಿಟ್ಟಿ ಸಲಹೆಗಳು!
ಅಲ್ಲದೇ, ಕಳೆದ ಮೂರು ವರ್ಷಗಳಿಂದ ಆಕೆಯ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ್ದನ್ನು ಆಕೆ ಆತನಕವೂ ಗಮನಿಸಿಯೇ ಇರಲಿಲ್ಲ. ಆಗಿದ್ದೂ ಒಂದೇ ಭೇಟಿ. ಅದು ಖಾಸಗಿ ಕಾರ್ಯಕ್ರಮದಲ್ಲಿ. ಅಷ್ಟಕ್ಕೆ ಆತ ಆಕೆಯ ಖಾಸಗಿ ಬದುಕಿನ ಕುರಿತು ಕೆದಕುವುದರಲ್ಲಿ ಮಗ್ನನಾಗಿಬಿಟ್ಟಿದ್ದ. ಅವಳೂ ಕೂಡ ಒಂದಷ್ಟು ಹೇಳಬೇಕು ಎನಿಸಿದ್ದರೂ ಯಾರನ್ನೂ ನಂಬದಂತೆ ತಲುಪಿದ್ದ ಅವಳ ಮನಸ್ಥಿತಿ ಕೊಂಚ ಹಿಂದೇಟು ಹಾಕಿಯೇ ಇತ್ತು. ಆದರೂ ಅವನು ಬಿಡಲಿಲ್ಲ. ದಿನದಿಂದ ದಿನಕ್ಕೆ ಕೊಂಚ ಹೆಚ್ಚಿಗೆಯೇ ಕೇರ್ ಮಾಡುವವನಂತೆ ಮಾತು ಮಾತಿಗೂ ಮೆಸೇಜï ಮಾಡುತ್ತಾ ನಾನೂ ಕೌನ್ಸೆಲಿಂಗï ಮಾಡುತ್ತಿದ್ದವನು. ನೀವೇನೋ ಪ್ರಾಬ್ಲಂನಲ್ಲಿ ಇದ್ಹಂಗೆ ಕಾಣುತ್ತೆ. ಅದಕ್ಕೊಂದು ಪರಿಹಾರ ಹುಡುಕೋಣ. ಈ ವಯಸ್ಸಲ್ಲಿ ಹೀಗೆ ಕೊರಗಿ ಕೂರುವ ಅವಶ್ಯವಾದರೂ ಏನು? ಎಂಬ ಸಾಂತ್ವನವಿಟ್ಟಿದ್ದನು. ವಿಧಿಯು ಅದೇ ಹೊತ್ತಿಗೆ ಕುಟುಂಬದಲ್ಲಿ ಕೊಂಚ ಅತಿ ಎನಿಸಿದ ಸನ್ನಿವೇಶಗಳನ್ನು ಸೃಷ್ಟಿಸಿತ್ತು. ಆಗವಳಿಗೆ ತತïP್ಷÀಣಕ್ಕೆ ನೆನಪಾಗಿದ್ದು ಅವನೇ! ಕೊಂಚ ಸಮಸ್ಯೆಯಲ್ಲಿz್ದÉೀನೆ ನಿಮಗ್ಯಾರಾದ್ರೂ ಲಾಯರ್ ಗೊತ್ತಿz್ದÁರಾ? ಕೇಳಿದಳು. ಆಗಲೇ ಅವಳ ಸಂಸಾರದ ಗುಟ್ಟು ವ್ಯಾದಿ ರಟ್ಟಾಗಿದ್ದು.. ಲಾಯರ್  ಸಂಪರ್ಕಿಸಲು ಮಧ್ಯವರ್ತಿಯಾಗಿ ಎಲ್ಲ ಅಪïಡೇಟïಗಳನ್ನು ಫೆÇೀನ್, ಮೆಸೇಜï ಮೂಲಕ ಕೇಳುತ್ತಲೇ ಇದ್ದ. ಹೀಗಾಗಿಯೇ ಅವಳ ಸಂಸಾರದ ಒಡಕಿನ ಸಂಗತಿಗಳು ಅವನ ಕಿವಿಗೆ ಬಿದ್ದಿತ್ತು ಅಷ್ಟೇ..! ಆದರೆ ಮಾಡಿದ ಆ ಸಣ್ಣ ಉಪಕಾರವೂ ಫೇಸïಬುಕïಲ್ಲಿ ಸ್ಟೇಟಸï ಹಾಕುವ ಮೂಲಕ ಊರಿಗೆ¯್ಲÁ ಟಾಂ ಟಾಂ ಮಾಡಿದಾಗಲೇ ಅವಳು ಒಂದಷ್ಟು ಎಚ್ಚರಿಕೆಗೊಂಡಳು. ಈತನಿಗೆ ಇದೊಂದು ಖಯಾಲಿ ಅನಿಸುತ್ತೆ. ಖಾಸಗಿ ವಿಷಯಗಳೆ¯್ಲÁ ಹೀಗೆ ಬೀದಿಯಲ್ಲಿ ಬಿದ್ದರೆ, ತನ್ನ ಗತಿಯೇನು? ಎಂಬ ಚಿಂತೆ ಕಾಡಿತ್ತು. ಅಷ್ಟೇ..! ಅಲ್ಲಿಗೆ ಅವನ ಸಂಪರ್ಕ ಕಡಿದುಕೊಂಡಿದ್ದಳು. ಯಾವ ಕಾಲï, ಮೆಸೇಜïಗೂ ಪ್ರತಿಕ್ರಿಯೆ ನೀಡುವುದನ್ನ ಸಂಪೂರ್ಣ ಬಂದï ಮಾಡಿದ್ದಳು.
ಆಗೆಲ್ಲಾ ಹೇಳಿಕೊಳ್ಳುವ ಉಮೇದುಗಾರಿಕೆ ಆಕೆಗೇನೂ ಇರಲಿಲ್ಲ. ತೀರಾ ಕೇರಿಂಗ್ ಅನಿಸಿದಾಗಲೇ  ಆಗೆಲ್ಲಾ ಚೀಪಾಗಿ ವರ್ತಿಸಲಿಕ್ಕಿಲ್ಲ ಎಂದು ಆಲೋಚಿಸಿದ್ದಳು. ಎಷ್ಟಾದರೂ ಅವಳೊಬ್ಬಳು ಯಕಶ್ಚಿತ್ ಮಾನವ ಹುಳು. ಹೇಳಿಕೊಂಡಿದ್ದ ಮಾತ್ರಕ್ಕೆ ಎಲ್ಲವನ್ನೂ ಬಟಾಬಯಲಿನಲ್ಲಿ ಹರಾಜಾಕಿಕೊಂಡು ಕೂರುವ ಮನಸ್ಥಿತಿ ಅವಳಿಗಿದ್ದಿದಿರಲಿಲ್ಲ. ಬದುಕು ಸಾಗಿಸುವುದೇನೂ ಆ ವಿದ್ಯಾವಂತೆಗೆ ಕಷ್ಟವಾಗಿರಲಿಲ್ಲ. ಅಪ್ಪ-ಅಮ್ಮನಿಗೆ ಒಬ್ಬಳೇ ಮಗಳು. ಅವರು ದುಡಿದಿದ್ದೆಲ್ಲಾ ಯಾರಿಗೆ ಕೊಡಬೇಕಿತ್ತು. ಆಗಿದ್ದರೂ ಅವಳು ತನ್ನ ಸ್ವಂತ ಸಂಪಾದನೆಯಲ್ಲಿಯೇ ಬದುಕು ಕಟ್ಟಿಕೊಳ್ಳಬೇಕೆಂಬ ಹಂಬಲದವಳು. ಅದನ್ನು ಮಾಡುತ್ತಿದ್ದಳು  ಕೂಡ. ಆದರೆ ಹೀಗೆಲ್ಲಾ ಚೀಪ್ ಪಬ್ಲಿಸಿಟಿಗೆ ಒಳಗಾಗುವುದು ಅವಳಿಗೆ ಕಿಂಚಿತ್ತೂ ಇಷ್ಟವಿರಲಿಲ್ಲ. ಕನಿಕರಕ್ಕೆ ಒಳಗಾದ ಬದುಕು ಯಾವತ್ತೂ ಮೇಲೆ ಬರಲು ಸಾಧ್ಯವಿಲ್ಲ. ಅದೊಂದು ಸಮಯಕ್ಕೆ ಎಲ್ಲರ ಕನಿಕರ, ಕಾಳಜಿ ಆಕೆ ಗಿಟ್ಟಿಸಿಕೊಳ್ಳಬಹುದು. ಆದರೆ ಆನಂತರ...!? ಹಾಗಾಗಿಯೇ ಯಾವುದನ್ನೂ ಬಿಟ್ಟುಗೊಡದೇ ಕೊಂಚ ಅತಿ ಅನಿಸುವ ರೀತಿಯಲ್ಲೇ ಮೊಂಡಾಗಿ ಬೆಂಡಾಗಿ ಬದುಕು ನಡೆಸುತ್ತಿದ್ದಳು.
 ಅಸಹನೆ ಅವನಿಗೆ ಅಲ್ಲಿಯೇ ಎಡೆಮುರಿ ಕಟ್ಟಿತ್ತು. ಅದೆಷ್ಟೋ ದಿನಗಳ ತರುವಾಯ ಅವಳಿಗೆ ಮತ್ತೆ ಮೆಸೇಜï ಬಂತು. ಆ ವೇಳೆಗಾಗಲೇ ಅವಳು ಎಲ್ಲ ಮರೆತೇಬಿಟ್ಟಿದ್ದಳು. ಸಹಜವಾಗಿಯೇ ಮತ್ತೆ ಸೌಜನ್ಯದ ಮಾತು, ಅದಕ್ಕೆ ಇವಳ ಸೌಜನ್ಯಪೂರಿತ ಪ್ರತಿಕ್ರಿಯೆ. ಕಾರಣ `ಅವಳು' ಬದಲಾಗಿದ್ದಳು. ಬದುಕು ಸುಧಾರಿಸಿತ್ತು. ನಂತರದ ಕೆಲವೇ ದಿನಗಳಲ್ಲಿ ಮತ್ತೆರಡು ಬಾರಿ ಫೆÇೀನ್‍ನಲ್ಲಿ ಅವನ ಮಿಸ್ಡ್‍ಕಾಲï ಇತ್ತು. ಇವಳು ಗಮನಿಸಿಯೂ ಮಾತನಾಡುವಂಥz್ದÉೀನಿದೆ  ಎಂದುಕೊಂಡು ಸುಮ್ಮನಾಗಿದ್ದಳು. ಆದರೆ, ಎದೆಯಲ್ಲಿ ಅವಳ ಮೇಲೆ ಅದ್ಯಾವಾಗ ಕತ್ತಿ ಮಸೆಯಲೂ ಮುಂದಾದನೋ ಏನೋ ಇವಳ ಗಮನಕ್ಕೇ ಬರಲೇ ಇಲ್ಲ. ಸಿಕ್ಕ ಸಿಕ್ಕವರ ಬಳಿ ಅವಳ ಬಗ್ಗೆ ಇಲ್ಲ ಸಲ್ಲದ್ದನ್ನ ಹೇಳಿದ್ದ. ಅದು ಇವಳ ಕಿವಿಗೂ ಬಿತ್ತು. ಹವ್ಯಾಸಿ ಬರಹಗಾರನಿಗೆ ಕೊಂಚ ಪಾಪ್ಯುಲಾರಿಟಿಯೂ ಇತ್ತು. ಹೇಳಿದ್ದನ್ನ ಕೇಳಿದವರು ಸುಳ್ಳು ಎಂದು ಪರಿಭಾವಿಸುವಂತಿರಲಿಲ್ಲ. ಅವಳ ಬದುಕ ಅಷ್ಟೂ ಸುಧಾರಣೆಗೆ ತಾನೇ ವಾರಸುದಾರ ಎಂಬ ಫೆÇೀಸ್ ಕೊಡಲು ಶುರು ಮಾಡಿದ. (ಪಾಪ! ಅವಳ ಆ ಪರಿಯ ಬದಲಾವಣೆಗೆ ಕಾರಣಕರ್ತನಾಗಿದ್ದ ಮನುಷ್ಯ ಮಾತ್ರ ದೂರದಿಂದಲೇ ಅವಳ ಏಳ್ಗೆ ನೋಡಿ, ಕಾಲ ಕಾಲಕ್ಕೂ ಅವಳ ಕ್ಷೇಮ ವಿಚಾರಿಸುತ್ತಾ, ಕೆಲವು ಸಂದರ್ಭಗಳಲ್ಲಿ ಸಾಂತ್ವನ ಹೇಳುತ್ತಾ, ಒಂದಿಷ್ಟು ಹುರಿದುಂಬಿಸುತ್ತಾ ತನ್ನ ಸಹಾಯ ಏನೂ ಅಲ್ಲ, ನಿಮಗೆ ಪ್ರತಿಭೆ ಇದೆ ಅದನ್ನ ಸದ್ವಿನಿಯೋಗಿಸಿಕೊಳ್ಳಿ ಯಾರ ಮಾತಿಗೂ ತಲೆಕೆಡಿಸಿಕೊಳ್ಳುವುದು ಬೇಡ ಎಂಬ ತೂಕದ ಮಾತನ್ನು ಆಡಿ ಮನುಷ್ಯತ್ವಕ್ಕೆ ತೂಕವಾಗಿ ನಿಂತಿದ್ದರು) ಆದರೂ ಆಕೆ ಪ್ರತಿಕ್ರಿಯೆ ನೀಡದೇ ಸುಮ್ಮನಿದ್ದಳು. ಕಾಲ ಅವಳನ್ನ ಆ ಪರಿ ಮೌನವಾಗಿರುವಂತೆ ಮಾಡಿಟ್ಟಿತ್ತು. ಆರ್ಥಿಕ ಮುಗ್ಗಟ್ಟು, ಮಗು-ಮನೆಯ ಜವಾಬ್ದಾರಿ, ಒಂದರೆಕ್ಷಣ ತೆಗೆದುಕೊಂಡ ಸಣ್ಣ ನಿರ್ಧಾರಕ್ಕೆ ಇಡೀ ಬದುಕನ್ನೇ ಓರೆಗೆ ಹಚ್ಚಿ, ಅದನ್ನು ಸಾಧಿಸಲೋಸುಗ ಇಲ್ಲಸಲ್ಲದನ್ನು ಮೈಮೇಲೆಳೆದುಕೊಂಡು ವ್ಯರ್ಥಗೊಳಿಸಿದ್ದ ಸಮಯ ನೆನೆದು, ಆಗಾಗ ಅವಳು ಮರುಕ ಪಡುತ್ತಲೇ ಇದ್ದಳು. ಇದೇ ಉz್ದÉೀಶಗಳು ಅವಳನ್ನು ಬೇರ್ಯಾವುದಕ್ಕೂ ಯೋಚನೆ ಮಾಡಲಿಕ್ಕೂ ಆಸ್ಪದ ನೀಡಲಿಲ್ಲ. ಮನುಷ್ಯ ಹೆಸರಿಂದ ಮಾತ್ರ ದೊಡ್ಡವನು. ಆದರೆ ಅವನಲ್ಲಿ ಸಾಮಾನ್ಯ ಮನುಷ್ಯನಿಗಿರುವಂತಹ ಗುಣವೂ ಇಲ್ಲ ಎಂದು ಪಾಠ ಕಲಿತು ತಟಸ್ಥ ನಿಲುವು ತಳೆದಿದ್ದಳು. ಇಂತಹ ಹಾವು-ಚೇಳಿನಂತಹ ಕಚ್ಚಾಟದ ವಿಷಯಗಳಲ್ಲೇ ಅತೀವ ಖುಷಿ ಪಟ್ಟುಕೊಂಡಿದ್ದ ಆತ ತನ್ನ ಪಾಪ್ಯುಲಾರಿಟಿಯನ್ನ ಈ ಮೂಲಕವೇ ಹೆಚ್ಚಿಸಿಕೊಂಡಿದ್ದ ಆತ ಅವಳ ಮೌನ ನಿಲುವು ಸುಮ್ಮನಿರಲುಗೊಡಲಿಲ್ಲ. ಎಷ್ಟಾದರೂ ಕತೆಗಾರನಲ್ಲವೇ..! ಹೇಳಿ ಕೇಳಿ ಕೊಂಚ ಭಾವವೇಶದಿಂದ ಒಂದಷ್ಟು ಫಾಲೋವರ್ಸïಗಳನ್ನು ಹೊಂದಿದ್ದ ವ್ಯಕ್ತಿತ್ವದವನು. ಬಿಟ್ಟಾನೆಯೇ... ಹೇಗಾದರೂ ಮಾಡಿ ಅವಳ ಮೌನ ಮುರಿಯಬೇಕೆಂಬ ಪಣ ತೊಟ್ಟುಬಿಟ್ಟನೇನೋ ಅವಳ ಬದುಕಿನ ಒಂದು ಸತ್ಯದ ಎಳೆಗೆ ಸಾವಿರ ಸುಳ್ಳಿನ ಎಳೆ  ಪೆÇೀಣಿಸಿ ಕತೆ ಕಟ್ಟಿಯೇ ಬಿಟ್ಟನು ನೋಡಿ, ಅದನ್ನು ಫೇಸïಬುಕïನಲ್ಲೂ ಹಾಕಿಬಿಟ್ಟ..! ಅದಕ್ಕೆ ಹೇಳಿಕೊಳ್ಳುವಂತಹ ಪ್ರತಿಕ್ರಿಯೆಗಳೇನೂ ಬರಲಿಲ್ಲ. ಅಲ್ಲದೇ, ಅವನ ಓದುಗ ವರ್ಗ ಕೂಡ ಸಣ್ಣಗೆ ಗದರಿತ್ತು.  ಅಂತಹ ಅಸಹಾಯಕ ಹೆಣ್ಣುಮಗಳ ಬಗ್ಗೆ ಹೀಗೆ¯್ಲÁ ಬರೆಯುವುದು ಯಾವ ಕೃತಾರ್ಥಕ್ಕಾಗಿ ಒಂದಷ್ಟು ಸ್ಫೂರ್ತಿ ತುಂಬುವ ಕತೆ ಬರೆಯಿರಿ.. ಹಾಗೇ ನೋಡಿದರೆ ಅವಳ ಬದುಕು ಅವಳಂತೆ ನೆಲೆತಪ್ಪಿದ ಹೆಣ್ಣುಮಕ್ಕಳಿಗೆ ಒಂದು ಮಾದರಿಯೇ ಸರಿ ಎಂದುಬಿಟ್ಟವು. ಅಲ್ಲಿಗೇ ಆತನೇನೋ ನಿರೀಕ್ಷಿಸಿದಷ್ಟು ಪ್ರತಿಕ್ರಿಯೆ ಬಾರದೇ ತನ್ನ ಮನದ ವಿಷವನ್ನ ಹೊರಹಾಕಿ ಮತ್ತೊಬ್ಬ ಅಸಹಾಯಕ ಹೆಣ್ಣುಮಗಳ ಕತೆ ಬರೆಯುವಲ್ಲಿ ಮಗ್ನನಾಗಿಬಿಟ್ಟ... ತನ್ನ ವಾರದ ಸಂಪಾದನೆಗೆ `ಅವಳ'ಂತಹ ಕಟ್ಟುಕತೆಗಳೂ ಬರೆಯುವ ತೆವಲು ಮುಂದುವರಿದೇ ಇತ್ತು..
ಇತ್ತ ಇವಳದೂ.....
ಅವಳ ಬಗ್ಗೆ ಗೊತ್ತಿದ್ದವರೊಬ್ಬರು ಫೆÇೀನ್ ಮಾಡಿ ಅವರ ಲೇಖನ ನೋಡಿದ್ರಾ ಎಂದಾಗ್ಲೇ ಅವಳು ಸಣ್ಣಗೆ ಬೆವರಿದ್ದಳು.  ಆದರೆ ಓದಿದ ತರುವಾಯ ಹಿಂದೊಂದು ದಿನ `ನಿನ್ನಂಥವಳಿಗೆ ಹೀಗಾಗಬಾರದಿತ್ತು' ಎಂದ ಮರುಗಿದ್ದ ಮನುಷ್ಯ ಇವನೇನಾ ಎಂದುಕೊಂಡಳು. ಆದರೆ ಅವನಿಗೆ ಹೇಳಿದ್ದ ಮಾತೇ ಮರೆತಿತ್ತು. ಕತೆಯಲ್ಲಿ ಹೇಳಿದ ಹಾಗೇ ಆರ್ಥಿಕ ಮುಗ್ಗಟ್ಟು, ಬದುಕುವ ಸ್ಥಿತಿ-ಗತಿಗಳ ಸಂಪೂರ್ಣ ವಿವರ ಇವನಿಗೆ ನೀಡಿ ಅವಳಿಗೇನೂ ಆಗಬೇಕಿರಲಿಲ್ಲ. ಅಷ್ಟಕ್ಕೂ ಅವಳು ಸಿರಿವಂತ ಮನೆಯ ಸೊಸೆ.. ಗಂಡನೊಂದಿಗೆ ಸಂಬಂಧ ಹಳಸಿದ್ದರೂ, ಕುಟುಂಬದಲ್ಲಿ ಸೈ ಎನಿಸಿಕೊಂಡಿದ್ದಾಕೆ. ಮಾತ್ರವಲ್ಲ, ಅಪ್ಪ-ಅಮ್ಮನ ಒಬ್ಬಳೇ ಮುದ್ದಿನ ಮಗಳು.. ಹೆಚ್ಚಾಗಿ ಜವಾಬ್ದಾರಿಯುತ `ತಾಯಿ'ಯಾಗಿದ್ದಳು. ಕ್ಷುಲ್ಲಕ ಬದುಕು ಮಾಡುವವಳಾಗಿದ್ದರೆ ಭೂತಕಾಲವನ್ನೆಲ್ಲ ಮರೆತು ಮುಂದೆ ಆಗುವುದರ ಬಗ್ಗೆ ಚಿಂತಿಸಿ `ಹಿಂದೆಗಿಂತಲೂ ಭವಿಷ್ಯದ ದಿನಗಳು ಅದ್ಭುತವಾಗಿರುತ್ತವೆ ಹಾಗೂ ಆ ಅದ್ಭುತವನ್ನು ನಾನೇ ಸೃಷ್ಟಿಸಿಕೊಳ್ಳುತ್ತೇನೆ' ಎನ್ನುವ ಕನಸನ್ನು ಎದೆಯಲ್ಲಿ ಬಿತ್ತಿಕೊಳ್ಳುವ ಅವಶ್ಯಕತೆ ಅವಳಿಗೆ ಬಹುಶಃ ಬೇಕಿದ್ದಿರಲಿಲ್ಲವೇನೋ. ಬದುಕು ಆ ಮಟ್ಟಿಗೆ ಅವಳಿಗೆ ಮನೆಪಾಠ ಮಾಡಿಟ್ಟಿತ್ತು. ಮೈಕೊಡವಿ ನಿಲ್ಲಲೂ ಅಣಿಗೊಳಿಸಿತ್ತು. ಅವಳ ಬದುಕಿನ ಪಾಠಗಳೇ ಅವಳಿಗೆ ನಾಳೆಯ ಬಗ್ಗೆ ಭರವಸೆ ಹುಟ್ಟಿಸಿತ್ತು. ಅದಕ್ಕಾಗಿಯೇ ಕಾಲದ ಉತ್ತರಕ್ಕೆ ಅವಳು ಕಾದು ನಿಂತುಬಿಟ್ಟಳು. ಇತ್ತ ಅವಳ ಬದುಕ ಸೂP್ಷÀ್ಮಗಳೆಲ್ಲ ಅವನಿಗೆ ಮುಂದೊಂದು ದಿನ ಮನವರಿಕೆಯಾಗುತ್ತದಾ! ಕತೆ ಕಟ್ಟುವವನಿಗೆ `ಅವಳು' ದಂತಕಥೆಯಾಗಿ ನಿಲ್ಲುತ್ತಾಳಾ...!? ಎಲ್ಲದಕ್ಕೂ ಕಾಲವೂ ಒಂದಿಷ್ಟು ಸಮಯ ಬೇಡಿ ಮಗುಮ್ಮಾಗಿ ನಿಂತಿತ್ತು.


-ಭಾಚಿ