Wednesday, 31 August 2016

ಸೋಲೇ ಗೆಲುವಾಗಿ ದಕ್ಕುವುದು ಅಂದ್ರೆ.....!



                ಜೀವನದಲ್ಲಿ ಪದೇಪದೆ ಫೇL ಆದವರು ಸೋಲಿನ ರುಚಿ, ಕಹಿ, ಸಿಹಿ ಎಲ್ಲವನ್ನೂ ಅರಿತಿರುತ್ತಾರೆ. ಸೋಲನ್ನು ದಕ್ಕಿಸಿಕೊಂಡು, ಅದರ ಅವಮಾನವನ್ನು ಸಹಿಸಿಕೊಂಡು ಪುನಃ ಮೊದಲಿನಂತಾಗಲು ಪ್ರಯತ್ನಿಸುತ್ತಾರೆ.......
 - ಮೊನ್ನೆ ಅದ್ಯಾಕೋ ಈ ಸಾಲುಗಳು ಬಹಳ ಕಾಡಿದವು.
ಆಗಷ್ಟೇ ಡಿಗ್ರಿ ಪರೀಕ್ಷೆಗಳು ಮುಗಿದಿದ್ದವು. ಇನ್ನೇನು ಮುಂದಿನ ಭವಿಷ್ಯದ ಬಗ್ಗೆ ನಿಖರವಾದ ಯೋಜನೆಗಳನ್ನು ಮಾಡಬೇಕೆಂದು ಎಂಟ್ಹತ್ತು ಗೆಳತಿಯರು ಒಂದೆಡೆ ಸೇರಿ ಒಂದೊಂದು ಮಾರ್ಗವಾಗಿ ಚರ್ಚೆಗಳನ್ನು ಅರಹುತ್ತಾ ಕುಳಿತಿದ್ದರೆ, ಸಂಧ್ಯಾ ತೀರಾ ಮಂಕಾಗಿ ಕಂಡಳು. ಯಾವುದಕ್ಕೂ ಪ್ರತಿಕ್ರಿಯಿಸದೆ ತನ್ನ ಪಾಡಿಗೆ ತಾನು ಏನನ್ನೋ ಯೋಚಿಸುತ್ತ, ಮಂಡಿಗೆ ತಲೆಯೂರಿ ಪ್ರಪಂಚದ ಪರಿವೆಯೇ ಇಲ್ಲದಂತೆ ಬೇರಾವುದೋ ಲೋಕಕ್ಕೆ ಜಿಗಿದಿದ್ದಳು. ಪರೀಕ್ಷೆಗಳು ಮುಗಿದಿದ್ದರಿಂದ ಕೆಲವರಿಗೆ ಮನೆಯ ಸಂಪೂರ್ಣ ಜವಾಬ್ದಾರಿ ಹೊರುವ ಅನಿವಾರ್ಯ, ಇನ್ನು ಕೆಲವರಿಗೆ ಮದುವೆ ಮಾಡಿಕೊಳ್ಳಲೇಬೇಕಾದ ಕರಾರಿಗೆ ಮೊಹರು ಬಿz್ದÁಗಿತ್ತು. ಒಬ್ಬರಿಗೆ ಒಂದೊಂದು ದಾರಿ ಕಡಿದು ಬಿದ್ದದ್ದು ಅಲ್ಲಿ ಸ್ಪಷ್ಟವಾಗಿದ್ದರೂ, ಇನ್ನೂ ಕೆಲವರಿಗೆ ಮುಂದೇನು ಮಾಡಬೇಕೆಂಬ ಯಾವುದೇ ಯೋಜನೆ ಯೋಚನೆಗಳಿರಲಿಲ್ಲ. ಅದರಲ್ಲಿ ಒಂದಷ್ಟು ಮಂದಿ ಅನುಕೂಲಸ್ಥರು ಇದ್ದರು. ಮತ್ತೂ ಕೆಲವರು ಏನೇನೂ ಇಲ್ಲದ ಅಸಹಾಯಕರು ತಮ್ಮ ಚಿಕ್ಕಪ್ಪ, ಅತ್ತೆ ಮನೆಯಲ್ಲಿದ್ದುಕೊಂಡು ಓದಿಕೊಂಡಿದ್ದವರು.

ಇಷ್ಟೆಲ್ಲ ಇರುವಾಗ ಸಂಧ್ಯಾಗೆ ಎಲ್ಲವೂ ಆರಾಮಿದೆ. ಅಪ್ಪನಿಗೆ ಸರ್ಕಾರಿ ನೌಕರಿ, ಅಮ್ಮ ಗೃಹಿಣಿ. ತನಗಿಂತಲೂ ಎಂಟು ವರ್ಷಕ್ಕೆ ಚಿಕ್ಕವನಾದ ತಮ್ಮ. ಈಕೆಯ ಕುಟುಂಬ ಅತ್ಯಂತ ಸುಖೀ ಎಂದೇ ಭಾವಿಸಿz್ದÉವು. ಹೀಗಿರುವಾಗ ಈಕೆಗೇನು ತಲೆನೋವು? ಅಂದುಕೊಳ್ಳುತ್ತಿರುವಾಗಲೇ ಅವಳ ಕಣ್ಗಳು ನೀರಿನಿಂದ ತುಂಬಿ ಜಿನುಗುತ್ತಿದ್ದವು. ಬಂದಾಗಿನಿಂದ ಅವಳತ್ತ ಅಷ್ಟಾಗಿ ಗಮನ ಕೊಡದೆ ಇದ್ದ ನಾವು ಈಗ ಏಕಾಏಕಿ ಅವಳ ಸದ್ಯದ ಪರಿಸ್ಥಿತಿಗೆ ಕಾರಣ ತಡಕಾಡಲೇಬೇಕಿತ್ತು. ಏನಾಯ್ತು ಎಂದು ಕೇಳಿದರೆ ಮಾತಿಲ್ಲ ಕತೆಯಿಲ್ಲ. ಕಣ್ಗಳು ಮಾತ್ರ ಮತ್ತದೇ ಧಾರಾಕಾರ ನೀರಿನಿಂದ ತುಂಬಿ ತುಳುಕುತ್ತಿವೆ. ಸದ್ಯ ಸಮಾಧಾನವಾಗಿ ಸಮಸ್ಯೆಯನ್ನು ಹೇಳಿಕೊಳ್ಳುವ ಪರಿವೆಯಲ್ಲಿ ಆಕೆಯೂ ಇಲ್ಲದ್ದರಿಂದ ನಾವೂ ಕೊಂಚ ಗಮನ ಬೇರೆ ಕಡೆ ಸರಿಸಲು ತ್ರಾಸಪಟ್ಟು ಸುಮ್ಮನಾದೆವು. ಒಂದು ವಾರದ ಬಳಿಕ ಎಲ್ಲರೂ ಮತ್ತದೇ ಸ್ಥಳಕ್ಕೆ ಸೇರುವುದು ಎಂಬ ಷರತ್ತು ಹಾಕಿ, ಎಲ್ಲರೂ ಅವರವರ ಮನೆಗೆ ಹೊರಟುಬಿಟ್ಟೆವು.
ನಾನು, ಮತ್ತೊಬ್ಬಳು ಗೆಳತಿ, ಸಂಧ್ಯಾ ಮೂವರ ಮನೆಯೂ ಒಂದೇ ಹಾದಿಯಲ್ಲಿದ್ದುದರಿಂದ ಅಂದು ನಡೆದೇ ಮನೆ ಮುಟ್ಟಲು ನಿರ್ಧರಿಸಿ ಅಲ್ಲಿಂದ ಕಾಲ್ಕಿತ್ತೆವು. ಜತೆಯಲ್ಲಿದ್ದ ಗೆಳತಿಯ ಮನೆ ಸಿಕ್ಕಿತು. ಸಂಧ್ಯಾ ಆ ಹೊತ್ತಿಗೆ ಕೊಂಚ ನಿರಮ್ಮಳವಾಗಿದ್ದಳು. ಇನ್ನೇನು ನಾಳೆಯಿಂದ ಕಾಲೇಜಿಲ್ಲ ಮತ್ತೆ ಈ ಹಾದಿಯಲ್ಲಿ ಬರುವುದು ಇನ್ನ್ಯಾವಾಗಲೋ ಅಂದುಕೊಂಡು ವೇಗದ ಹೆಜ್ಜೆ ನಿಧಾನದ ಗತಿಗೆ ಅರಿವಿಲ್ಲದೆಯೇ ಬಂದು ನಿಂತಿತ್ತು. ಇಬ್ಬರಲ್ಲೂ ಒಂಥರಾ ಬೇಸರದ ಭಾವ. ಹಾದಿಯ¯್ಲÉೀ ಒಂದು ಸಣ್ಣ ಪಾರ್ಕ್. ಇಬ್ಬರೂ ಅಲ್ಲಿ ಒಂದಷ್ಟು ಹೊತ್ತು ಕುಳಿತು ಹೊರಡೋಣ ಎಂದುಕೊಂಡು ಉದ್ಯಾನದ ಒಳಹೊಕ್ಕೆವು. ಆಗ ಭೋರ್ಗರೆಯಲು ಅನುವಾಯಿತು ಸಂಧ್ಯಾಳ ನೋವಿನ ಒಡಲು. ಯಾವುದೋ ಹುಡುಗನ ಗುಂಗಿಗೆ ಬಿದ್ದು, ಆಕೆ ಸಂಪೂರ್ಣ ಹೈರಾಣಾಗಿದ್ದಳು. ಇದೇ ಹುಚ್ಚಲ್ಲಿ ಪರೀಕ್ಷೆಗಳಿಗೆ ಏನೇನೂ ಸಿದ್ಧತೆ ನಡೆಸದೆ ಬರೆದು ಬಂದಿದ್ದಳು. ಅವಳಿಗೆ ಗೊತ್ತಿತ್ತು, ತಾನು ಪಾಸ್ ಆಗಲಾರೆನೆಂದು. ಇತ್ತ ಸಿಗದ ಹುಡುಗ. ಹಿಂದಿನ ಎಲ್ಲ ಅಂತಿಮ ಪರೀಕ್ಷೆಗಳಲ್ಲೂ ರ್ಯಾಂಕ್ ವಿದ್ಯಾರ್ಥಿ ಅಲ್ಲದಿದ್ದರೂ, ಫ¸್ಟï ಕ್ಲಾಸ್‍ಗೆ ಒಂದಂಕ ಕಡಿಮೆ ಇಲ್ಲದೆ ಪಡೆಯುತ್ತ ಬಂದಿದ್ದ ಆಕೆ ಮೊದಲ ಬಾರಿ ದಾರಿ ತಪ್ಪಿದ್ದಳು. ಅದು ಕೇವಲ ಒಬ್ಬ ಹುಡುಗನೆಡೆಗಿನ ಆಕರ್ಷಣೆಯ ನಿಮಿತ್ತ.
ವಿಷಯ ಹೇಳುತ್ತಾ ಆಕೆ ಕುಳಿತಿದ್ದರೆ ನನಗೇನು ಆಘಾತವಾಗಲಿಲ್ಲ. ನಾನು ಇಂತಹ ಪರಿಸ್ಥಿತಿಗಳನ್ನು ಎದುರಿಸಿಯಾಗಿತ್ತು. ಪಿಯುಸಿಯಲ್ಲಿ ಜೊತೆಗೆ ಬರುತ್ತಿದ್ದ ಪಕ್ಕದ ರಸ್ತೆಯ ಗೆಳತಿ ಯಾವುದೋ ಹುಡುಗನೊಟ್ಟಿಗೆ ಸದ್ದಿಲ್ಲದೆ ಕಾಲ್ಕಿತ್ತಾಗಲೇ ನಮ್ಮನೆಯಲ್ಲಿ ಭೂಕಂಪವಾಗಿತ್ತು. ಅವಳ್ಯಾರೋ ಮಾಡಿದ ತಪ್ಪಿಗೆ ನನ್ನನ್ನು ಬಲಿಕೊಡಲು ಮನೆಯಲ್ಲಿ ಹತಾರ ರೆಡಿ ಮಾಡಿಬಿಟ್ಟಿದ್ದರು. ಅಂತಹ ಸಂದಿಗ್ಧ ಪರಿಸ್ಥಿತಿಯನ್ನು ನಿಭಾಯಿಸಿ ಪದವಿಗೆ ಅರ್ಧ ವರ್ಷದ ನಂತರ ಅಡ್ಮಿಷನ್ ಆಗಿ ಪರೀಕ್ಷೆ ಎದುರಿಸಿ ಸೆಕೆಂಡ್ ಕ್ಲಾಸ್‍ನಲ್ಲಿ ಪಾಸ್ ಕೂಡ ಆಗಿz್ದÉ. ಯಾಕೋ ಇವಳ
ವಿಷಯ ದೊಡ್ಡದಾಗಿ ಕಾಡಲಿಲ್ಲ. ಆಕೆಯೇನೂ ಪ್ರೀತಿಗೆ ಬಿದ್ದಿರಲಿಲ್ಲ. ಆಕರ್ಷಣೆಗೇ ಅಷ್ಟು ಹೈರಾಣಾಗಿ ಹೋಗಿದ್ದಳು. ಅದು ವಯಸ್ಸಿನ ತಪ್ಪಷ್ಟೇ ಎಂದುಕೊಂಡು ತಕ್ಕಮಟ್ಟಿಗೆ ಗೊತ್ತಿರುವ ಬಗೆಯಲ್ಲಿ ತಿಳಿಹೇಳಿ ಆ P್ಷÀಣಕ್ಕೆ ಸಮಾಧಾನವನ್ನೇನೋ ಮಾಡಿ ಎದ್ದು ಬಂದಿz್ದÉ. ಆಕೆ ಎಣಿಕೆಯಂತೆಯೇ ಎಲ್ಲ ಪರೀಕ್ಷೆಗಳಲ್ಲೂ -ಲï ಆಗಿದ್ದಳು. ಆದರೆ, ಆ ಪರೀಕ್ಷೆ ಬರೆಯಲಿಕ್ಕೆ ಮತ್ತೆ ಒಂದು ವರ್ಷ ಕಾಯಬೇಕಾಯ್ತು.
ಬಿಡುವಿನ ಆ ಒಂದು ವರ್ಷ ಆಕೆ ಟೈಪಿಂಗ್, ಶಾರ್ಟ್ ಹ್ಯಾಂಡ್, ಕಂಪ್ಯೂಟರ್ ಕ್ಲಾಸ್, ಟೈಲರಿಂಗ್ ಕ್ಲಾಸ್ ಅಂತ ಬಿಜಿಯಾಗಿಬಿಟ್ಟಳು. ಅಲ್ಲದೆ, ಮತ್ತದೇ ವಿಷಯಗಳನ್ನು ಮನನ ಮಾಡಿದ್ದರ -ಲವಾಗಿ ಎಲ್ಲ ವಿಷಯಗಳಲ್ಲೂ ತೊಂಭತ್ತರಾಚೆಗೂ ಸ್ಕೋರï ಮಾಡಿದಳು. ಅವತ್ತು ನಾನಷ್ಟೇ ಅಲ್ಲ, ಇತರ ಗೆಳತಿಯರು ಕೂಡ ನಿಬ್ಬೆರಗಾಗಿ ಆಕೆಯತ್ತ ನೋಡಿz್ದÉವು. ಈಗ ಆಕೆಗೆ ಪದವಿ ನಿಮಿತ್ತದ ಒಂದು ಕೆಲಸವಲ್ಲ, ನಾನಾ ಆಯ್ಕೆಗಳು. ಬದುಕಿನ ಒಂದು ತಪ್ಪು, ಒಂದು ಸೋಲು, ಆಕೆಗೆ ಅದೆಷ್ಟು ಬಲ ತುಂಬಿತ್ತು ಎಂದರೆ ಮುಂದೆಂದೂ ಸೋಲಲೇಬಾರದು ಎಂಬಂತೆ ಮುಂದಕ್ಕಡಿಯಿಟ್ಟಿದ್ದಳು. ಆ ಸೋಲನ್ನು ಅವಳು ಅದೆಷ್ಟು ಸದ್ಬಳಕೆ ಮಾಡಿಕೊಂಡಿದ್ದಳು ಎಂದರೆ ಯಶಸ್ಸಿಗೆ ಇದೇ ಮೆಟ್ಟಿಲು ಎಂಬಂತೆ ಮೇಲೇರಿದ್ದಳು. ಎಷ್ಟೋ ಸಲ ಸೋಲಿಗಿಂತ, ಸೋಲಿನ ಹೊಡೆತಕ್ಕೆ ನರಳುವವರನ್ನು ನೋಡುವ ಹೊತ್ತ¯್ಲÉಲ್ಲ, ಸೋತು ಗೆದ್ದ ಸ್ಫೂರ್ತಿಯ ಸೆಲೆ ಸಂಧ್ಯಾ ನೆನಪಾಗುತ್ತಾಳೆ. ಅವಳು ಸೋಲನ್ನು ಗೆಲುವಾಗಿ ದಕ್ಕಿಸಿಕೊಂಡ ಪರಿಗೆ ನಿಜಕ್ಕೂ ತಲೆ ಬಾಗಲೇಬೇಕೆನಿಸುತ್ತದೆ.

- ಭಾಚಿ

Thursday, 5 May 2016

ಸಬಲ ಸ್ತ್ರೀ ಮದುವೆಯಲ್ಲೇಕೆ ಅಬಲೆಯಾಗ್ಬೇಕು?


ಅದು ಪ್ರತಿಷ್ಠಿತರೇ ನೆರೆದಿದ್ದ ಒಂದು ಸಂವಾದ ಕಾರ್ಯಕ್ರಮ. ಧರೆಗಿಳಿದ ರಂಬೆಯೇನೋ ಎನಿಸುವಷ್ಟು ಅಪರೂಪದ ಸುಂದರಿಯು ಪ್ರಶ್ನೆಗಳ ಮಳೆಗೈಯ್ಯುತ್ತಿದ್ದರೇ ಅಲ್ಲಿ ನೆರೆದಿದ್ದವರೆಲ್ಲ ಅವಳ ಅಂದವನ್ನು ಕಣ್ತುಂಬಿಕೊಳ್ಳುತ್ತಾ ಗಪ್‍ಚುಪ್ ಎನ್ನುವ ನಿಲುವಲ್ಲಿದ್ದುಬಿಟ್ಟಿದ್ದರು. ಇತ್ತ ಪ್ರಶ್ನೆಗೆ ಉತ್ತರಿಸಬೇಕಿದ್ದುದು ಪ್ರತಿಷ್ಠಿತ ಸಾವಿರಾರು ಕೋಟಿ ರೂ. ವಹಿವಾಟು ನಡೆಸುವ ದ ಬಿಗ್ ಬಿಸಿನೆಸ್‍ಮನ್ ರಿಲಯನ್ಸ್ ಇಂಡಸ್ಟ್ರಿ ಅಧ್ಯಕ್ಷ ಮುಖೇಶ್ ಅಂಬಾನಿ. ಆ ಚೆಲುವೆಯಿಂದ ಪ್ರಶ್ನೆಗಳು ಬಾಣಗಳಂತೆ ಬಂದು ನಾಟುತ್ತಿದ್ದರೆ, ಆತ ಮಾತ್ರ ಕೂಲ್ ಆಗಿಯೇ ಉತ್ತರಿಸುತ್ತಿದ್ದರು. ಅದು ಎಲ್ಲ ಏಳು-ಬೀಳುಗಳನ್ನು ಕಂಡು ದೈತ್ಯ ಎತ್ತರಕ್ಕೆ ಏರಿದವರ ಮುಖದಲ್ಲಿ ಮಾತ್ರವೇ ಕಾಣುವಂತಹ ಒಂದು ಕೂಲ್ ರಿಫ್ಲೆಕ್ಟು.
ಇಷ್ಟಕ್ಕೂ ಅವಳು ಹೇಳಿz್ದÉೀನು?  ಮುಖೇಶ್ ಅಂಬಾನಿ ಉತ್ತರಿಸಿz್ದÉೀನು ಕೇಳಿ ಅವರದೇ ಮಾತುಗಳಲ್ಲಿ ....
ನನಗೀಗ 25 ವರ್ಷ ವಯಸ್ಸು, ಸುಂದರವಾಗಿz್ದÉೀನೆ. ಹಾಗಂತ ಎಲ್ಲರೂ ಹೇಳ್ತಾರೆ. ಉತ್ತಮ ಜೀವನ ಶೈಲಿ, ಉತ್ತಮ ಅಭಿರುಚಿ ಹೊಂದಿz್ದÉೀನೆ. ಸಾಕೆನಿಸುವಷ್ಟು ಓದಿಕೊಂಡಿz್ದÉೀನೆ ಕೂಡ. ನಾನು ತುಂಬಾ ಶ್ರೀಮಂತ ವ್ಯಕ್ತಿಯನ್ನು ಮದುವೆಯಾಗಬೇಕೆಂದಿz್ದÉೀನೆ. ಅದು ಅಂತಿಂಥಾ ಸಿರಿವಂತನಲ್ಲ. 100ಕೋಟಿಗೂ ಹೆಚ್ಚು ಆದಾಯವುಳ್ಳ ಅತಿ ಶ್ರೀಮಂತ ವ್ಯಕ್ತಿಯನ್ನ..! ವಾರ್ಷಿಕವಾಗಿ  ಕೋಟಿ ಲೆಕ್ಕಾಚಾರದಲ್ಲಿ ಸಂಬಳ ತೆಗೆಯುವವರು ಈಗ ಮಧ್ಯಮವರ್ಗ ಎಂಬ ಲೆಕ್ಕದಲ್ಲೇ ಪರಿಗಣಿಸಲ್ಪಡುತ್ತಾರೆ. ನನ್ನ ನಿರೀಕ್ಷೆಗಳೇನೂ ಅಷ್ಟೊಂದು ಜಾಸ್ತಿಯೇನಿಲ್ಲ. 100ಕೋಟಿ ಅಥವಾ ಅದಕ್ಕಿಂತ ಮೇಲ್ಪಟ್ಟು ದುಡಿಮೆಯುಳ್ಳ ವ್ಯಕ್ತಿಯನ್ನ ಮದುವೆಯಾಗಬೇಕು ಎಂದು ಬಯಸಿz್ದÉೀನೆ. ಇಲ್ಲಿರುವವರಲ್ಲಿ ಯಾರಾದರೂ ಅಷ್ಟು ಆದಾಯ ಪಡೆಯುವವರು ಇದ್ದಾರೆಯೇ? ಇದ್ದರೆ ಮದುವೆಯಾಗಿರುವವರೇ ಹೆಚ್ಚಿದ್ದೀರಿ ಅನಿಸುತ್ತೆ. ಆದರೆ ನಾನು ನಿಮ್ಮಂತಹ  ಶ್ರೀಮಂತ ವ್ಯಕ್ತಿಯನ್ನು ಮದುವೆಯಾಗಬೇಕು ಎಂದು ಬಯಸಿz್ದÉೀನೆ. ಇತ್ತೀಚೆಗೆ ನನಗೆ ಮದುವೆಯಾಗಲು ಸಂಬಂಧ ಒಂದು ಬಂದಿತ್ತು. ಅಮೆರಿಕದ ನ್ಯೂಯಾರ್ಕ್‍ನಲ್ಲಿರುವ ಪ್ರತಿಷ್ಠಿತ ಮನೆತನದ ಹುಡುಗ. ಆದರೆ ಆತನಿಗೆ ವಾರ್ಷಿಕ 50ಕೋಟಿ ಆದಾಯವಿದೆ. ನಾನಾದಕ್ಕೆ ಇಲ್ಲಿ ನೆರೆದಿರುವ ಗಣ್ಯರನ್ನ ಕೇಳಬಯಸುವುದು ಯಾವ ಕ್ಷೇತ್ರದಲ್ಲಿ ಅತಿ ಶ್ರೀಮಂತ ಹುಡುಗ ಸಿಗುತ್ತಾನೆ? ಯಾವ ವಯಸ್ಸಿನ ಹುಡುಗರನ್ನು ನನ್ನಂತಹ ಹುಡುಗಿಯರು ಟಾರ್ಗೆಟ್ ಮಾಡಬಹುದು? ಬಹಳಷ್ಟು ಬಾರಿ ನೊಡೋಕೆ ಸುಮಾರಾಗಿದ್ದವರ ಹತ್ತಿರ ಹೆಚ್ಚು ದುಡ್ಡಿರುತ್ತೆ. ಹೆಚ್ಚಿಗೆ ದುಡ್ಡಿರುವವರು ನೋಡೋಕೆ ಸುಮಾರಾಗಿರ್ತಾರೆ ಅಥವಾ ಚೆನ್ನಾಗಿಯೇ ಇರೋದಿಲ್ಲ ಆದರೂ, ಅವರಿಗೆ ಸುಂದರವಾದ ಹೆಂಡತಿಯಿರುತ್ತಾಳೆ.
ನೀವು ಹೇಗೆ ನಿಮ್ಮ ಬಾಳಸಂಗಾತಿಯನ್ನು ಆಯ್ಕೆ ಮಾಡಿದಿರಿ? ಮತ್ತು ಏಕೆ?
ನನ್ನೆಲ್ಲ ಪ್ರಶ್ನೆಗಳಿಗೂ ಪ್ರಾಮಾಣಿಕವಾಗಿ ಉತ್ತರಿಸಿ. ಸದ್ಯ ನಾನು ಮದುವೆಯಾಗುವ ಆಕಾಂಕ್ಷೆ ಹೊಂದಿz್ದÉೀನೆ.
ಇತ್ತ ಮುಖೇಶ್ ಅಂಬಾನಿ ಕಡೆಯಿಂದ  ತಾತ್ವಿಕ ಪ್ರತಿಕ್ರಿಯೆ..
ನಿಮ್ಮ ಪ್ರಶ್ನೆಗಳು ಬಹಳ ಆಸಕ್ತಿಕರ ಎನಿಸಿದವು. ನಿಮ್ಮ ಹಾಗೆ ಇದೇ ಪ್ರಶ್ನೆಗಳು ಸಾಕಷ್ಟು ಹುಡುಗಿಯರ ತಲೆಯಲ್ಲಿ ಕೊರೆಯುತ್ತಿರುತ್ತವೆ. ನಾನೊಬ್ಬ ವೃತ್ತಿಪರ ಹೂಡಿಕೆದಾರನಾಗಿ ಇದಕ್ಕೆ  ಉತ್ತರಿಸಲು ಬಯಸುತ್ತೇನೆ. ಹೌದು, ನನ್ನ ವಾರ್ಷಿಕ ಆದಾಯ ನಿಮ್ಮ ಅವಶ್ಯಕತೆಗೂ ಮೀರಿದೆ 100 ಕೋಟಿಗೂ ಅಧಿಕ. ಇದರಿಂದಲೇ ನಿಮಗೆ ತಿಳಿಯಬಹುದು ನಾನು ಸಿಗುವ ಸಮಯವನ್ನು ಆದಷ್ಟು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಲು ಬಯಸುತ್ತೇನೆ. ಒಬ್ಬ ವ್ಯಾಪಾರದ ವ್ಯಕ್ತಿ ನಿಮ್ಮನ್ನು ಮದುವೆಯಾಗಲು ಬಯಸಿದರೆ ಅದು ಕೆಟ್ಟ ನಿರ್ಧಾರ. ಉತ್ತರ ತುಂಬಾ ಸರಳ. ಯಾವುದೇ ವ್ಯಾಪಾರದ ಮನಸ್ಥಿತಿಯುಳ್ಳ ವ್ಯಕ್ತಿಯು  ತನ್ನ ಹೂಡಿಕೆ ದಿನದಿಂದ ದಿನಕ್ಕೆ ವೃದ್ಧಿಯಾಗಬೇಕೆಂದು ಬಯಸುತ್ತಾನೆ. ನೀವು ಹೇಳುವುದು, ನಾನು ಅತಿ ಸೌಂದರ್ಯವತಿ. ಅದಕ್ಕಾಗಿ ನನ್ನನ್ನು ಮದುವೆಯಾಗಬೇಕು ಅಂತ. ಆದರೆ, ಅದೇ ನಿಮ್ಮ ಅತಿದೊಡ್ಡ ಸಮಸ್ಯೆ. ನಿಮ್ಮ ಸೌಂದರ್ಯ ದಿನಗಳೆದಂತೆಲ್ಲಾ ಮಸುಕಾಗುತ್ತಾ ಹೋಗುತ್ತೆ. ಅದು ಯಾವ ಕಾಲಕ್ಕೂ ವೃದ್ಧಿಯಾಗಲಾರದು. ಅರ್ಥಶಾಸ್ತ್ರದ ದೃಷ್ಟಿಕೋನದಿಂದ ನೋಡುವುದಾದರೆ, ಭೂಮಿ ಅಥವಾ ಇನ್ನಾವುದೇ ತೆರನಾದ ಆಸ್ತಿ ಎನಿಸುವುದರ ಮೇಲೆ ಹೂಡಿಕೆ ಮಾಡಿದರೆ 10 ವರ್ಷಗಳ ನಂತರ ಅದು ಕನಿಷ್ಠ ದುಪ್ಪಟ್ಟಂತೂ ಆಗಿರಲೇಬೇಕು. ಇದು ಅರ್ಥಶಾಸ್ತ್ರದ ಸಿಂಪಲ್ ಮೆಥಡ್. ಪ್ರತಿಯೊಬ್ಬ ಬಿಸಿನೆಸ್ ಮ್ಯಾನ್ ಕೂಡ ಯೋಚಿಸುವುದು ಇದನ್ನೇ. ಯಾವ ಹೂಡಿಕೆಯು ದುಪ್ಪಟ್ಟಾಗಬೇಕು, ನೂರುಪಟ್ಟಾಗಬೇಕೆಂದು. ಅದು ತಕ್ಷಣಕ್ಕೆ ಆಗದಿದ್ದರೂ, ಭವಿಷ್ಯದ ದೃಷ್ಟಿಯಿಂದಲಾದರೂ, ಮಾರಾಟ ಮಾಡಿದರೆ ಅದರಿಂದ ಆದಾಯ ವೃದ್ಧಿಯಾಗಬೇಕೆಂದು ಬಯಸುತ್ತಾರೆ. 100 ಕೋಟಿ ವಾರ್ಷಿಕ ಆದಾಯ ಇರುವವರ್ಯಾರು ಮೂರ್ಖರಲ್ಲ. ಅಂತಹವನೇ ಬೇಕೆಂದು ಕೂತರೆ ಅವನು ನಿಮ್ಮೊಂದಿಗೆ ಡೇಟಿಂಗ್ ಮಾಡಲು ಬಯಸಬಹುದು, ಮದುವೆಯಾಗಲು ಬಯಸುವುದಿಲ್ಲ.  ಸಮಯಕ್ಕೆ ಮೌಲ್ಯವಿತ್ತೇ ಅಷ್ಟೆಲ್ಲಾ ಗಳಿಸಲು ಅವರಿಗೆ ಸಾಧ್ಯವಾಗಿರುತ್ತೆ. ಅದರಿಂದ ಪ್ರತಿಯೊಂದರಲ್ಲೂ ಲಾಭವನ್ನು ನಿರೀಕ್ಷಿಸುವುದು ತಪ್ಪಲ್ಲ. ಯಾಕೆಂದರೆ ಅದು ಅವರು ಸಮಯಕ್ಕೆ ಕೊಡುವ ಪ್ರಾಶಸ್ತ್ಯ. ಹಾಗಾಗಿ ಅತಿ ಶ್ರೀಮಂತ ವ್ಯಕ್ತಿಯನ್ನು ಹುಡುಕುತ್ತಾ ನಿಮ್ಮ ಜೀವನದ ಅಮೂಲ್ಯ ಸಮಯವನ್ನು ಹಾಳುಮಾಡಲು ಬಿಡಬೇಡಿ. ಅದರ ಬದಲಾಗಿ ನೀವೇ ಆ ನೂರು ಕೋಟಿ ಸಂಪಾದಿಸಲು ಏನೆಲ್ಲಾ ಸಾಧ್ಯ ಎಂದು ಯೋಚಿಸಿ, ದುಡಿಯಲು ಶುರು ಮಾಡಿ. ಆಗ ಅದಕ್ಕೂ ಮೀರಿದ ಶ್ರೀಮಂತ ಹುಡುಗ ನಿಮ್ಮನ್ನು ಮದುವೆಯಾಗಲು ಬರುತ್ತಾನೆ. ಅದು ಕೂಡ ಆರ್ಥಿಕ ವೃದ್ಧಿಯz್ದÉೀ ಆದರೂ, ಎಲ್ಲವೂ ಒಳ್ಳೆಯದೇ ಆಗುತ್ತದೆ. ಯಾಕೆಂದರೆ ಅಲ್ಲಿ ನೀವು ಖಂಡಿತ ಅವನಿಗೆ ಸಮನಾಗಿರುತ್ತೀರಿ. ಎಲ್ಲವೂ ಶುಭವಾಗಲಿ..
ವ್ಹಾ... ಎಂಥಾ ತೀಕ್ಷ್ಣ ಪ್ರತಿಕ್ರಿಯೆ..! ಪ್ರತಿಯೊಬ್ಬ ಹೆಣ್ಣುಮಗಳು ಯೋಚಿಸಬೇಕಾದ ವಿಷಯವಿದು. ಈಗಿನ ಕಾಲದ ಯುವತಿಯರು ಒಂದಲ್ಲ ಒಂದು ರೀತಿಯಲ್ಲಿ  ಮುತ್ತುಗಳೇ. ಕಾಲಕ್ಕೆ ತಕ್ಕಂತೆ ಪ್ಯಾಷನ್, ಬೇಕೆನಿಸುವಷ್ಟು ವಿದ್ಯೆ, ಅದಕ್ಕೆ ತಕ್ಕುದಾದ ಕೆಲಸ, ಕೈ ತುಂಬಾ ಸಂಬಳ.. ತನಗೆ ಬೇಕೆನಿಸಿದ್ದನ್ನು ತಾನೇ ಗಳಿಸಿಕೊಳ್ಳುವ ಸದೃಢತೆ ಎಲ್ಲವೂ ಅವಳಿಗೆ ಲಭ್ಯ. ಆದರೆ, ಮದುವೆಯ ವಿಷಯ ಬಂದಾಗ ಮಾತ್ರ, ಆಕೆ ಸ್ವಲ್ಪ ವೀಕ್ ಆಗಿರೋಕೆ ಇಷ್ಟಪಡುತ್ತಾಳೆ. ತನಗಿಂತಲೂ ನೂರುಪಟ್ಟು  ಹೆಚ್ಚಿನವ ಸಿಗಬೇಕು ಎಂಬ ಯೋಚನೆಯ ಜಾಗಕ್ಕೆ ತಾನೇ ಅದನ್ನು ಸಂಪಾದಿಸಿಬಿಡಬಲ್ಲೆ ಎಂಬ ಭಾವ ಮೂಡಿಸಿಕೊಳ್ಳುವುದೇ ಇಲ್ಲ. ಹಾಗೆ ಯೋಚಿಸಿದ್ರೂ, ಅದು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಅದನ್ನೇ ಎಲ್ಲ ಹೆಣ್ಣುಮಕ್ಕಳು ಅಳವಡಿಸಿಕೊಂಡು ಬಿಟ್ಟರೆ, ಸಮಸ್ತ ಹೆಣ್ಣುಕುಲವೇ ಅಪರೂಪದ ಮುತ್ತುಗಳಾಗಿಬಿಡುತ್ತವೆ. ಪುರುಷನೊಂದಿಗೆ ಸಮಾನತೆ ಬೇಡುವ ನಾವುಗಳು ಕೂಡ ಹಾಗೇ ಯೋಚಿಸಿದ್ರೆ, ಸಮಾಜದಲ್ಲಿ ಸಮಾನತೆ ತನ್ನಿಂತಾನೇ ಮೂಡುವುದರಲ್ಲಿ ಆಶ್ಚರ್ಯವಿಲ್ಲ.

- ಭಾಗ್ಯಚಿಕ್ಕಣ್ಣ

Thursday, 3 March 2016

ಪ್ರೀತಿಗೊಂದಿಷ್ಟು ಸಮಯ ಬೇಕಾಲ್ಲವಾ..!?



ಇಬ್ಬರ ಕಣ್ಣೋಟಗಳು ಆಗಾಗ್ಗೆ ಭೇಟಿಯಾಗುತ್ತಲೇ ಇರ್ತವೆ. ಉಹುಂ... ಮಾತಿಲ್ಲ ಕತೆಯಿಲ್ಲ! ಈಗೆಲ್ಲವೂ ಬಂದ್. ಮಾತು ಮಾತು ಮಾತು.. ಮಾತಿನಲ್ಲೇ ಮುಳುಗಿರುತ್ತಿದ್ದ ಮನಗಳಿಗೀಗ ಕಾಲ ಮಿತಿ ಇಲ್ಲದ ವನವಾಸದ ಸಮಯ. ತೀರಾ ಅನಿವಾರ್ಯ ಬಿದ್ದರೆ, ಔಪಚಾರಿಕ ಮಾತುಕತೆಯಷ್ಟೇ. ಕುಶಲೋಪರಿ ವಿಚಾರಿಸುವ ಧಾವಂತ ಇಬ್ಬರಿಗೂ ಇದೆ. ಆದರೆ, ಬಾಯ್ಬಿಟ್ಟು ಕೇಳುವ ಅನಿವಾರ್ಯತೆ ಇಬ್ಬರಿಗೂ ಒಂದೆಳೆಯೂ ಇದ್ದಂತಿಲ್ಲ. ಹೇಗಿದ್ದವರು ಹೇಗಾಗಿಬಿಟ್ಟರು ಎಂಬುದು ಅವರನ್ನೇ ಗಮನಿಸುತ್ತಿದ್ದ ಅದೆಷ್ಟೋ ಕಣ್ಣುಗಳ ಕುತೂಹಲ! ಆ ಕುತೂಹಲದ ತೆರೆ-ಮರೆಯಲ್ಲೂ ಅವರಿಬ್ಬರ ನಡುವೆ ಮಾತೇ ಆಡದಂತಹ ಯಾವ ಘಟನೆ ಸಂಭವಿಸಿತೆಂಬುದಕ್ಕೆ ಅವರಿಬ್ಬರ ಹೊರತಾಗಿ ಬೇರಾರಿಗೂ ಅದರ ಸುಳಿವಿಲ್ಲ. ಯಾವ ಕಾರಣಕ್ಕೂ ಅದರ ಗಂಧ-ಗಾಳಿಯೂ ಬಿಟ್ಟುಕೊಡಬಾರದು ಎಂಬ ಪಟ್ಟು ಇಬ್ಬರಿಗೂ ಇದ್ದಂತಿದೆ. ಅದಂತೂ ಹೊರ ಜಗತ್ತಿಗೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಯಾಕಿಷ್ಟು ಹಟ? ಯಾರನ್ನು ಮೆಚ್ಚಿಸಲು ಈ ಪರಿ ಮೌನ ಕಾದಾಟ?
ಪ್ರೀತಿಸುವ ಮನಗಳು ಇದ್ದಕ್ಕಿದ್ದ ಹಾಗೇ ಈ ಪರಿ ಬದಲಾಗುವುದೇಕೆ? ತಿಂಗಳ ಹಿಂದಷ್ಟೇ ಭೇಟಿಯಾದಾಗ ಇಬ್ಬರ ಮಾತುಗಳು, ಅವರ ನಡವಳಿಕೆಗಳು ಸಾರಿ ಸಾರಿ ಹೇಳಿದ್ದವು. ಇಬ್ಬರ ಬಳಿಯೂ ಮತ್ತೊಬ್ಬರ ಬಗ್ಗೆ ಗೇಲಿ ಮಾತಿಲ್ಲ, ಹಾಗಂತ ಸಮಾಧಾನದ ನಿಟ್ಟುಸಿರೂ ಇಲ್ಲ. ಕಾರಣ ಕೆದಕುವ ಗೋಜಿಗೆ ನಾನೂ ಹೋಗ್ಲಿಲ್ಲ. ಭೇಟಿಯಾದ ದಿನದಂದೇ ಮಧ್ಯರಾತ್ರಿ ಆಕೆ ಫೆÇೀನಲ್ಲಿ ಮಾತಿಗೆ ಸಿಕ್ಕಿದ್ದಳು. ಹುಡುಗಿ ಕೊಂಚ ಹೆಚ್ಚೇ ಎನಿಸುವಷ್ಟು ಭಾವುಕಳಾಗಿದ್ದಳು, ಆಗ ಹೇಳಿಬಿಟ್ಟಳು ಸಮಸ್ಯೆಯ ಗುಟ್ಟನ್ನ. ಅವನು ಮಾತು ಮಾತಿಗೂ ನಾವು ತುಂಬ ಅವಸರ ಪಡ್ತಿದ್ದೀವಿ ಅಂತನ್ನಿಸ್ತಿದೆ. ಒಂದೆರಡು ವರ್ಷ ಕಾಯೋಣ ಅಂದಿದ್ದ. ನಾನು ಚಕಾರವೆತ್ತದೆ ನಿಂತ ನಿಲುವಲ್ಲೇ ಒಪ್ಪಿಗೆ ಕೊಟ್ಟಿದ್ದೆ. ಪದೇ ಪದೆ ಮೆಸೇಜ್ ಮಾಡ್ಬೇಡ ಅಂದ ಅದನ್ನೂ ಬಂದ್ ಮಾಡ್ದೆ. ಕೊನೆಗೆ, ನಿನ್ನ ಮಾತುಗಳು ನನ್ನ ತುಂಬಾ ಡಿಸ್ಟರ್ಬ್ ಮಾಡ್ತಿದೆ ಕೆಲಸದಲ್ಲಿ ನಿಗಾ ಇಡಲು ಆಗ್ತಿಲ್ಲ ಅಂದ ನಾನು ಮಾತಾಡುವುದನ್ನೇ ನಿಲ್ಲಿಸಿ ಬಿಟ್ಟೆ. ಈಗ ನೋಡು ಅವನ ಪಾಡಿಗೆ ಅವನು, ನನ್ನ ಪಾಡಿಗೆ ನಾನು ಅಷ್ಟೇ! ಪ್ರೀತಿ ಉಳಿದಿದೆ ಎಂಬುದಕ್ಕೆ ಯಾವ ಕುರುಹೂ ಇಲ್ಲ..!
**
ಆಕೆ ಬಿ.ಎ ಅಂತಿಮ ವರ್ಷದ ವಿದ್ಯಾರ್ಥಿ. ಓದನ್ನು ಮುಂದುವರೆಸಬೇಕು ಎಂಬ ಅದಮ್ಯ ಆಸೆ ಅವಳಿಗೆ. ಆದರೆ ಮನೆಯಲ್ಲಿ ತಂದೆ-ತಾಯಿಗೆ ಎದೆಯೆತ್ತರಕ್ಕೆ ಬೆಳೆದ ಮಗಳನ್ನು ಮದುವೆ ಮಾಡಿ ತಮ್ಮ ಜವಾಬ್ದಾರಿ ಇಳಿಸಿಕೊಳ್ಳುವ ಇರಾದೆ . ಆಗಲೇ ಕೂಡಿಬಂದಿತ್ತು ಶ್ರೀಮಂತ ಮನೆಯ ಸಂಬಂಧ. ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದು ಹಾಲು ಅನ್ನ ಅಂದ ಹಾಗಾಯ್ತು ಆಗಿನ ಪರಿಸ್ಥಿತಿ. ಹಿಂದೂ ಮುಂದು ಯೋಚಿಸದೆಯೇ ದೊಡ್ಡ ಜನ ಅಂತ್ಹೇಳಿ, ಮದುವೆ ಮಾಡಿ ಮುಗಿಸಿಯೇಬಿಟ್ಟರು. ಆದರೆ, ತಮ್ಮ ಕರ್ತವ್ಯ ಮುಗಿಯಿತೆಂದು ನೆಮ್ಮದಿಯ ನಿಟ್ಟುಸಿರು ಬಿಡುವ ಮುಂಚೆಯೇ ಆಕೆ ತವರಿಗೆ ವಾಪಾಸಾಗಿದ್ದಾಳೆ ಅದು 2ತಿಂಗಳ ಬಸಿರನ್ನೊತ್ತುಕೊಂಡು. ಇಬ್ಬರು ತಮಗೆ ತಾವು ಏನೆಂದೂ ಅರ್ಥ ಮಾಡಿಕೊಳ್ಳುವ ಮುಂಚೆಯೇ ಇಬ್ಬರಿಗೂ ತಮ್ಮ ಅಭಿರುಚಿಗಳು ಹಿಡಿಸಿಲ್ಲ, ಆದ ಸಣ್ಣ ಪುಟ್ಟ ಮನಸ್ತಾಪಗಳಿಗೆ ದೊಡ್ಡ ರಾದ್ದಾಂತ ಮಾಡಿ ಊರು-ಕೇರಿ ಒಂದಾಗುವ ಹಾಗೇ ಜಗಳಗಳು ನಡೆದುಹೋಗಿ ಇಬ್ಬರೂ ದೂಷಿಸಿಕೊಂಡು ಬೇರಾಗಿದ್ದಾರೆ. ಆಕೆ ತವರು ಮನೆ ಹಾದಿ ಹಿಡಿದರೆ, ಆತ  ಇನ್ನೊಂದು ಸಂಬಂಧಕ್ಕೆ ಕೈಚಾಚಿದ್ದಾನೆ.
ಆದರೆ ಗಂಡ ಹೆಂಡತಿಯ ನಡುವೆ ಮನಸ್ಸಿನ ಯಾವ ಭಾವಗಳು ಹಂಚಿಕೆಯಾಗಿಲ್ಲ. ದೇಹ ಒಂದಾಗಿದ್ದಕ್ಕೆ ಅವಳ ಬಸಿರು ಸಾಕ್ಷಿ ಹೇಳಿದ್ದರೆ, ಅವಳು ಆ ಪರಿ ಮನಕೆಡಿಸಿಕೊಂಡು ಹೊರಟು ಬಂದಿದ್ದಕ್ಕೆ ಮನಸ್ಸುಗಳು ಒಂದಾಗಲಿಲ್ಲ ಎಂಬ ಕುರುಹು ಗೋಚರವಾಗಿದೆ.   ಇತ್ತ ಇವಳ ಓದಿನ ಕನಸು ಅಲ್ಲೆ ಮಕಾಡೆ ಮಲಗಿಬಿಟ್ಟಿದೆ. ಇಲ್ಲ ಸಲ್ಲದ ಕಾರಣಗಳಿಗೆಲ್ಲಾ ಮುಖ ಸರಿಸುವಷ್ಟು ಮುನಿಸು. ಕೇವಲ ಎರಡೇ ತಿಂಗಳಿಗೆ ಇಬ್ಬರೂ ಹೇಳಿಕೊಳ್ಳಲಾರದಷ್ಟು ದೂರಾಗಿಬಿಟ್ಟಿದ್ದಾರೆ.
ಏನನ್ನೋ ಸಾಧಿಸ್ಬೇಕು ಅನ್ನುವ ಅದಮ್ಯ ಕನಸುಗಳನ್ನು ಹೊತ್ತ ಇಂದಿನ ಪ್ರೇಮಿಗಳು ತಮಗೆ ತಾವು ಸಮಯ ಕೊಟ್ಟುಕೊಳ್ಳುವುದಕ್ಕೆ ಆಸ್ಥೆ ವಹಿಸುವುದೇ ಇಲ್ಲ. ಪ್ರೀತಿಗೆ ಭದ್ರಬುನಾದಿಯಾಗಬೇಕಾದ  ಆ ಅಮೂಲ್ಯ `ಮಾತುಗಳು' ಕಾಲಹರಣ ಎನಿಸಿಬಿಡುವಷ್ಟು ಸಪ್ಪೆ ಸಪ್ಪೆಯಾಗಿಬಿಡುತ್ತದೆ.  ಅದೇ ಕಾರಣಕ್ಕಾಗಿಯೇ ಅವನೊಂದಿಗೆ ಇವಳು, ಇವಳೊಂದಿಗೆ ಅವನು ಅದೆಷ್ಟೋ ಭಾವಾಭಿರಾಗಗಳು ಹುಟ್ಟುತ್ತಲೇ, ಮನಬಿಚ್ಚಿ ಹೇಳಿಕೊಳ್ಳದೇ ಅಸುನೀಗಿರುತ್ತವೆ. ಅದೆಷ್ಟೋ ಕನಸುಗಳ ಹುಟ್ಟಿಗೆ ಪ್ರೇರಣೆಯಾಗಬೇಕಿದ್ದ ಮಧುರ ಬಾಂಧವ್ಯ ಚಿಗುರುವ ಹಾದಿಯಲ್ಲೇ ಜೀವ ತೆತ್ತಿರುತ್ತದೆ!
ಇಬ್ಬರ ಮಧ್ಯ ಇರಬೇಕಾದ ಮಧುರ ಮಾತುಗಳು ಸಮಯದ ಅಭಾವಕ್ಕೆ ಸಿಲುಕಿ ಕುಬ್ಜಗೊಂಡಿದೆ. ಸಣ್ಣ ಪುಟ್ಟ ವಾಗ್ವಾದಗಳೇ ದೊಡ್ಡದಾಗಿ ಕಾಣುತ್ತವೆ. ಇಷ್ಟಕ್ಕೆ  ಬೇಸತ್ತ ಮನಗಳು ಬೇರಾಗಲೊಂದು ಕಾರಣ ಹುಡುಕಿಕೊಳ್ಳುವುದರಲ್ಲಿ ಆಶ್ಚರ್ಯವೇನಿಲ್ಲ. ಆದರೂ ಬದುಕಲ್ಲಿ ಹೀಗೆ ಬಂದು ವಿರಮಿಸುವ ಪ್ರೇಮಗಳು, ಇಂತಹದ್ದೊಂದು ಬೇಸರದ ಅಧ್ಯಾಯಕ್ಕೆ ನಾಂದಿ ಹಾಡಿದ್ದಲ್ಲದೇ, ಜೀವಮಾನವಿಡೀ ಪ್ರೀತಿಯೆಂದರೆ ಸಾಕು ಅಸಮಾಧಾನದ ಬಳಲಿಕೆಗಳು ಮನಸ್ಸಿನ ಸ್ಮೃತಿಪಟದಲ್ಲಿ ಬಂದು ಮರೆಯಾಗುವ ಪರಿ ನೆನೆದರೇನೇ ಬದುಕಲ್ಲೇನಿದೆ ಎನಿಸುವಷ್ಟು ಜಿಗುಪ್ಸೆ ಉಂಟುಮಾಡುವುದಿಲ್ಲವಾ? ನಮಗಾಗಿ ಅಲ್ಲದಿದ್ದರೂ ಬೇಕಿದ್ದ ಪ್ರೀತಿಗಾಗಿಯಾದರೂ ಒಂದಿಷ್ಟು ಸಮಯ ಕೊಡುವುದು ನಮ್ಮನ್ನಿಷ್ಟ ಪಡುವ ಮನಸ್ಸುಗಳ, ಸಂಬಂಧಗಳ ಆರೋಗ್ಯಕ್ಕೆ ಒಳ್ಳೆಯದು ಅಲ್ಲವಾ..?

- ಭಾಚಿ 




Friday, 12 February 2016

ಅವನಿಲ್ಲದ ಹೊತ್ತು... ಕಳೆಯೋದು ಹೇಗೆ ಗೊತ್ತಾ??



ಇನ್ನೇನು ಪ್ರೇಮಿಗಳ ದಿನ ಬಂದೇ ಬಿಡ್ತು. ಕಳೆದ ವರ್ಷ ಇದೇ ಸಮಯಕ್ಕೆ ಪ್ರೇಮಿಯಾಗಿದ್ದವನು, ಇಂದು ಗಂಡನಾಗಿಬಿಟ್ಟಿದ್ದಾನೆ. ಪ್ರೇಮಿಯಿಂದ ಗಂಡನಾಗಿ ಬಡ್ತಿ ಪಡೆದ ಹೆಚ್ಚುಗಾರಿಕೆ ಅವನದಾದರೆ, ಇನ್ನು ಜೀವಮಾನವಿಡೀ ಸಂಸಾರದ ಜವಾಬ್ದಾರಿ ಹೊರುವ ಕಾಯಕ ಅವಳ ಹೆಗಲಿಗೆ. ಮದುವೆ ಕಾರ್ಯಗಳೆಲ್ಲವೂ ಈಗಷ್ಟೇ ಮುಗಿದಿವೆ. ಸ್ವರ್ಗಕ್ಕೆ ಮೂರೇ ಗೇಣು ಆ ಪ್ರಣಯ ಪಕ್ಷಿಗಳಿಗೆ. ಆದರೆ ಆಗಲೇ ಬೇರೊಂದು ದೇಶಕ್ಕೆ ಹೋಗಲು ಕಚೇರಿಯಿಂದ ಆದೇಶವಾಗಿ ಬಿಟ್ಟಿದೆ ಅವನಿಗೆ. ಬಿಟ್ಟು ಹೊರಡಲೇಬೇಕು, ಕೆಲವೇ ತಿಂಗಳುಗಳ ತರಬೇತಿಗಾಗಿ. ಅವನಿಗೋ ಆ ಮುದ್ದು ಮೊಗದ ಸಂಗಾತಿಯನ್ನು ಬಿಟ್ಟು ಹೊರಡಲು ಮನಸ್ಸಿಲ್ಲ.
ಈಕೆಗೆ ಅವನಿಲ್ಲದ ದಿನಗಳನ್ನು ಕಳೆಯೋದಾದರೂ ಹೇಗೆ ಅನ್ನೋ ಯಾತನೆ. ಆದರೆ, ಇದು ಜೀವನಪರ್ಯಂತ ಅಲ್ಲದೇ ಹೋದರೂ ಆಗಷ್ಟೇ ಮದುವೆಯಾದ ದಂಪತಿ ನಡುವೆ ನಿರ್ಮಾಣವಾಗುವ ಈ ವೇದನೆ ನಿಜಕ್ಕೂ ಹೇಳಿಕೊಳ್ಳಲಾರದಂಥದ್ದು.
ಪ್ರೀತಿಸಿ ಮದುವೆಯಾಗಿದ್ದರಂತೂ ಮುಗಿದೇಹೋಯ್ತು. ಅವನೊಟ್ಟಿಗಿನ ಮಧುರ ಬಾಂಧವ್ಯ ಎತ್ತಲೂ ಮನ ಹೊರಳದಂತೆ ಮಾಡಿಬಿಡುತ್ತದೆ. ಆದರೆ, ಹೋಗಲೇಬೇಕಾದ ಅನಿವಾರ್ಯ ಅವನಿಗೆ. ಒಲ್ಲದ ಮನಸ್ಸಿನಿಂದಲೇ ಹೊರಡಿಸುವ ಕಾರ್ಯ ಇವಳಿಗೆ. ವೈಯಕ್ತಿಕ ಹಾಗೂ ವೃತ್ತಿಬದುಕನ್ನು ಸಮರ್ಥವಾಗಿ ನಿಭಾಯಿಸುವ ಹೊಣೆಗಾರಿಕೆ ಅವಳ ಹೆಗಲೇರುತ್ತದೆ. ಅಷ್ಟೇ ಧಾವಂತದಲ್ಲಿ ಹೊರಡಿಸುವ ಮನಸ್ಸು ಮಾಡಿಯೇ ಬಿಡುತ್ತಾಳಾಕೆ. ಆದರೆ, ಇದೇ ವಿಷಯವಾಗಿ ಕೆಲಸಕ್ಕೆ ಬೈ ಬೈ ಹೇಳುವ ಮನಸ್ಸು ಅವನದ್ದು. ಆಕೆಗಿಂತ ಬೇರ್ಯಾವುದೂ ಹೆಚ್ಚಲ್ಲ ಅವನಿಗೆ ಆ ಸಮಯಕ್ಕೆ..! ಆದರೆ, ತಾನೀಗ ಒಂಟಿಯಲ್ಲ. ಅವಳನ್ನು ತುಂಬ ಚೆನ್ನಾಗಿ ನೋಡಿಕೊಳ್ಳಬೇಕು. ಹಾಗಂತ ಅವಳಿಗೆ ಪ್ರಾಮಿಸ್ ಮಾಡಿದ್ದೀನಿ. ಅದನ್ನ ಚಾಚೂತಪ್ಪದೆ ಪಾಲಿಸ್ತೀನಿ ಕೂಡ ಅಂಥ ತನ್ನೊಳಗೆ ಶಪಥ ಮಾಡಿಕೊಂಡು, ಹೊರಡಲು ರೆಡಿಯಾಗಿ ಬಿಡುತ್ತಾನವನು. ದಾಂಪತ್ಯದ ಹೊಸ್ತಿಲನ್ನು ಆಗತಾನೇ ತುಳಿದಿರುವ ದಂಪತಿಗೆ ಹೀಗೆ ದೂರವಾಗುವ ಸಂದರ್ಭ ಒದಗಿದರೆ ಅವರ ಪರಿಸ್ಥಿತಿ ಏನಾಗಬೇಡ? ಅವನೇನೋ ಹೊಸ ದೇಶ, ಹೊಸ ಪರಿಸರ, ಹೊಸ ಕೆಲಸಗಳಲ್ಲಿ ಮುಳುಗಿ ಹೋಗಬಹುದು. ಆದರೆ ಅವನಿಲ್ಲದ ದಿನಗಳನ್ನು ಅವಳು ಕಳೆಯುವುದಾದರೂ ಹೇಗೆ?
ಹೀಗೆ ಮಾಡಿ
* ಅವನ ಫೆÇೀಟೋ, ಅವನನ್ನು ನೆನಪಿಸುವ ವಸ್ತುಗಳನ್ನು ಜೋಪಾನವಾಗಿಡಿ. ಅದನ್ನು ಸಾಧ್ಯವಾದಷ್ಟೂ ನಿಮ್ಮ ಹತ್ತಿರದಲ್ಲಿಯೇ ಇಟ್ಟುಕೊಳ್ಳಿ. ಅವುಗಳಲ್ಲೇ ಅವನ ಬಿಂಬ ಕಾಣಿ.
* ಅವನ ಬಾಲ್ಯದ ಫೆÇೀಟೋಗಳನ್ನು ಒಂದೆಡೆ ಶೇಖರಿಸಿ ಫೈಲ್ ಮಾಡಿಡಿ, (ಅದರಲ್ಲೂ ಬಾಲ್ಯದ ಭಾವಚಿತ್ರಗಳಾಗಿದ್ದರೆ ಉತ್ತಮ). ಅದರಲ್ಲಿ ನಿಮ್ಮ ಮಗುವಿನ ಪ್ರತಿರೂಪ ಕಾಣಿ. ಮೈನವಿರೇಳಿಸುವ ಪುಳಕವದು!
* ಮತ್ತೆ ಮತ್ತೆ ಅವನನ್ನು ನೆನಪಿಸುವ, ಅವನಿಗೆ ಆಪ್ತವಾದ ಘಟನೆಗಳನ್ನು ನೆನೆಯುತ್ತಿರಿ. ಜಸ್ಟ್ ಚಿಲ್ ಮಾಡುತ್ತ ಆ ಕ್ಷಣವನ್ನು ಎಂಜಾಯ್ ಮಾಡಿ.
* ಅವನ ಗಿಫ್ಟ್‍ಗಳನ್ನು ಜೋಪಾನ ಮಾಡಿ. ಅವನು ವಾಪಸ್ ಬರುವ ಹೊತ್ತಿಗೆ ಅವನ ಅಭಿರುಚಿಗೆ ತಕ್ಕಂತೆ ನಿಮ್ಮ ಮನೋಭಾವ, ಡ್ರೆಸ್ಸಿಂಗ್ ಸೆನ್ಸ್, ನಡವಳಿಕೆಗಳನ್ನು ಬದಲಾಯಿಸಿಕೊಳ್ಳಿ. ಆತ ಮತ್ತೆ ನಿಮ್ಮನ್ನು ನೋಡುವಷ್ಟರಲ್ಲಿ ಸರ್‍ಪ್ರೈಸ್ ನೀಡಿ. ಅವನ ಮೊಗದ ಆ ಸಂತೋಷವನ್ನು ಮಿಸ್ ಮಾಡಿಕೊಳ್ಳಬೇಡಿ.
* ಅಡುಗೆಯಿಂದ ಸಂಗಾತಿಯನ್ನು ಖುಷಿಪಡಿಸುವುದು ಸಾಮಾನ್ಯ ವಿಷಯವಲ್ಲ. ಆದರೆ, ನಿಜಕ್ಕೂ ಬಾಯಿರುಚಿಯಿಂದ ಅವನನ್ನು ಮತ್ತಷ್ಟು ಒಲಿಸಿಕೊಳ್ಳಬಹುದು. ಅದು ಶಾಶ್ವತವಾಗಿಯೂ ಉಳಿಯುವಂತಹುದು. ಹಾಗಾಗಿಯೇ ಒಳ್ಳೊಳ್ಳೆಯ ಅಡುಗೆ ತಿಂಡಿ-ತಿನಿಸುಗಳನ್ನು ಮಾಡುವುದನ್ನು ಕಲಿಯಿರಿ. ಅವನಿಲ್ಲದ ಘಳಿಗೆಯನ್ನು ಅವನಿಗಾಗಿಯೇ ಮೀಸಲಿಡಿ.
* ನಿತ್ಯ ಅವನ ಯಾವ್ಯಾವ ಚೇಷ್ಟೆ, ವರ್ತನೆ ಅತಿಯಾಗಿ ನೆನಪಾಯಿತು ಎಂಬುದನ್ನು ನೋಟ್ ಮಾಡಿಡಿ. ಸಾಕಷ್ಟು ಖುಷಿ ಕೊಟ್ಟ ನೆನಪುಗಳನ್ನು ಡೈರಿಯಲ್ಲಿ ಬರೆದಿಡಿ.
* ಅವನೊಟ್ಟಿಗೆ ಓಡಾಡಿದ ಸ್ಥಳಗಳಿಗೆ ಆಗಿಂದಾಗ್ಗೆ ಭೇಟಿ ನೀಡುತ್ತಲಿರಿ. ಅವನ ಸಂಬಂಧಿಕರು, ಗೆಳೆಯರು ಅವನ ಬಗೆಗೆ ಆಡುವ ಒಳ್ಳೆಯ ಮಾತುಗಳನ್ನು ಆಲಿಸಿ. ಒಳಗೊಳಗೆ ಹೆಮ್ಮೆ ಪಡಿ. ಸಂಗಾತಿಯೆಂದರೆ ಸುಮ್ಮನೆ ಅಲ್ಲ, ಅವನ ಖ್ಯಾತಿ ಎಲ್ಲೆಲ್ಲೂ ಹಬ್ಬಿದೆ ಎಂಬ ಭಾವ ನಿಮ್ಮನ್ನು ಆವರಿಸಲಿ.
* ಅವನಿಗಾಗಿ ಒಂದಷ್ಟು ಕಿರು ಕವನಗಳನ್ನು ಬರೆಯಲು ಪ್ರಯತ್ನಿಸಿ. ಸಾಧ್ಯವಾದರೆ, ಪ್ರೇಮಪೂರಿತವಾಗಿ ಒಂದು ಸುದೀರ್ಘ ಲವ್ ಲೆಟರ್ ಬರೆಯಿರಿ. ಭಾವಗಳು ಪೂರ್ಣವಾಗಿ ವ್ಯಕ್ತವಾಗುವಷ್ಟು ಅಲ್ಲದೆ ಹೋದರೂ ಪರವಾಗಿಲ್ಲ. ಅನಿಸಿದ್ದನ್ನೆಲ್ಲ, ಅವನಿಗೆ ಹೇಳಲು ಮಿಸ್ ಮಾಡಿಕೊಂಡದ್ದನೆಲ್ಲ ಒಂದೆಡೆ ಬರೆದಿಡಿ. ಅವುಗಳಿಗೆ ಕಾವ್ಯದ ರೂಪ ತರಲು ಸಾಧ್ಯವಾ? ಟ್ರೈ ಮಾಡಿ.
* ಇಬ್ಬರಿಗೂ ಇಷ್ಟವಾಗುವ ಮತ್ತು ಇಷ್ಟವಾಗದಿರುವ ಬಣ್ಣ, ಹವ್ಯಾಸ, ದೇಹದ ಹಾವಭಾವ, ತಿಂಡಿ, ದಿರಿಸು, ಯಾವಾಗಲೂ ಕಾಮನ್ ಆಗಿ ಥ್ರಿಲ್‍ಗೊಳಿಸುವ ವಿಷಯಗಳ ಬಗ್ಗೆ ಒಂದು ಪಟ್ಟಿ ಮಾಡಿಡಿ. ಇಬ್ಬರಿಗೂ ಅದೆಷ್ಟು ಸಮನಾದ ಅಭಿರುಚಿಯಿದೆ ಎಂಬುದು ಅರಿವಿಗೆ ಬರುತ್ತದೆ.
* ಅವನನ್ನು ಮಿಸ್ ಮಾಡಿಕೊಂಡ ಕ್ಷಣಗಳ ಬಗ್ಗೆಯೂ ಬರೆಯುವ ಅಭ್ಯಾಸವಿಟ್ಟುಕೊಳ್ಳಿ. ಇನ್ಯಾವತ್ತೋ ಅವನೊಟ್ಟಿಗೆ ಕುಳಿತು ಆ ಕ್ಷಣಗಳನ್ನು ವಿವರಿಸುವ ಸನ್ನಿವೇಶ ಒದಗಬಹುದು. ಯಾವತ್ತಿಗೂ ಅದು ಮುದವಾದ ಅನುಭೂತಿ ಕೊಡುವುದು ಸುಳ್ಳಲ್ಲ.
* ಅವನು ಮೊದಲ ಬಾರಿ ನಿಮ್ಮನ್ನು ಭೇಟಿಯಾದ ಶರ್ಟ್ ಇದ್ದರೆ, ನೀವೇ ಅದನ್ನು ತೊಟ್ಟು ಒಮ್ಮೆ ಕನ್ನಡಿಯಲ್ಲಿ ನಿಮ್ಮ ಪ್ರತಿಬಿಂಬ ನೋಡಿಕೊಳ್ಳಿ. ಸುಮ್ಮನೆ ಅವನನ್ನು ಮನದಲ್ಲಿ ನೆನೆಯಿರಿ. ಆ ಖುಷಿ ಇದೆಯಲ್ಲ, ಜಸ್ಟ್ ಫೀಲ್ ದಟ್!
ಇಷ್ಟು ಮಾಡಿ ನೋಡಿ. ಹೊಸ ಸಂವತ್ಸರ, ಹೊಸ ಮನ್ವಂತರ ಶುರುವಾಗುತ್ತದೆ ಇನಿಯನ ಆಗಮನದ ಹೊತ್ತಿಗಾಗಲೇ.. ಇನಿಯನೊಂದಿಗೆ ಕಳೆವ ಹೊತ್ತು ಇz್ದÉೀ ಇದೆ.. ಅವನಿಲ್ಲದ ಆ ಹೊತ್ತನ್ನು ಜಸ್ಟ್ ಫೀಲ್ ಮಾಡುತ್ತಿರಿ. ಮೇಲೆ ಹೇಳಿರುವ ಎಲ್ಲ ಕಿವಿಮಾತುಗಳನ್ನು ಒಮ್ಮೆ ಪಾಲಿಸಿ. ಯುಗಗಳು ಕ್ಷಣಗಳಾಗಿ ಕಳೆದಿರುತ್ತವೆ. ಆಗ ಹೇಳಬಹುದು,
ನೀನು ನನ್ನ ಅಗಲಿ ಹೊರಡುವ
ಮುನ್ನ ಕಾಡಿದ
ಬೇಸರದ ಭಾವ ಈಗಿಲ್ಲ ಬಿಡು
ಎದೆ ಕಂಪಿಸಲು ಶುರುವಿಟ್ಟಿದ್ದು
ಕಳೆದುಹೋದ
ಆ ನಿನ್ನ ಕಳ್ಳನಗೆಗೆ, ಮಾದಕ ಸ್ಪರ್ಶಕ್ಕೆ...


- ಭಾಚಿ

Thursday, 28 January 2016

ಪಶ್ಚಾತ್ತಾಪದ ನಿಟ್ಟುಸಿರು ಅವನಿಗೆ ಮಾತ್ರನಾ?

ಬಿ ಪ್ರಾಕ್ಟಿಕಲ್ ಅನ್ನೋ ಹುಡುಗಿ. ನಾಳೆಯ ಬಗ್ಗೆ ಚಿಂತಿಸಿ ಗುಣಿಸಿ, ಭಾಗಿಸಿ, ಲೆಕ್ಕಾಚಾರ ಹಾಕಿಯೇ ಮುಂದಿಡಿಯಿಡುವ ಹುಡುಗ. ಇಬ್ಬರಿಗೂ ಎತ್ತಣದಿಂತ್ತೆಣ ಸಾಮೀಪ್ಯ. ಆದರೂ ಅದಮ್ಯವಾಗಿ ಪ್ರೀತಿಸಿದ್ರು, ದೂರನೂ ಆಗ್ಬಿಟ್ರು. ಅಯ್ಯೋ, ಹೀಗದೆಲ್ಲಾ ಕಾಮನ್ ಆಗ್ಬಿಟ್ಟಿದೆ ಬಿಡಿ. ಇವತ್ತು ಇವರ ಜತೇಲಿದ್ದವರು ನಾಳೆ ಇನ್ನೊಬ್ಬರ ಜತೆ ಗುರುತಿಸ್ಕೋತಾರೆ ಅನ್ನುವವರ ಮಧ್ಯೆ, ಕಳೆದ ಎರಡು ವರ್ಷಗಳಿಂದಲೂ ಇಬ್ಬರು ಖಾಸಾ ಒಂಟಿಯಾಗಿಯೇ ಉಳಿದಿದ್ದಾರೆ. ಪರಸ್ಪರರಿಬ್ಬರೂ ವಿರುದ್ಧ ದಿಕ್ಕುಗಳು ಅನ್ನೋದೆನೋ ನಿಜ. ಆದರೆ ಅಷ್ಟು ಗಾಢವಾಗಿ ಹಗಲು ರಾತ್ರಿಗಳ ಪರಿವೆಯೇ ಇಲ್ಲದೆ ಪ್ರೀತಿಸಿದ್ದವರು ಹೀಗ್ಯಾಕಾದ್ರೂ? ಅವರೇನು ಟೀನೇಜ್ ಲವರ್ಸ್ ಅಲ್ಲ. ಪ್ರೀತಿ ಹುಟ್ಟಿದ್ದು, ಕಾಲೇಜಿನಲ್ಲೋ, ಕೆಲಸ ಮಾಡುವ ಸ್ಥಳದಲ್ಲೋ ಅಲ್ಲ. ಇಬ್ಬರು ಪ್ರಬುದ್ಧರು, ಜವಾಬ್ದಾರಿಗಳ ಮೂಟೆಯನ್ನು ಹೆಗಲ ಮೇಲಿರಿಸಿಕೊಂಡೇ ಸಾಂಗತ್ಯಕ್ಕೆ ಕೈ ಚಾಚಿ ನಿಂತವರು. ಪರಸ್ಪರರಿಬ್ಬರಿಗೂ ತಮ್ಮ ಅಭಿರುಚಿ, ನಿರ್ಧಾರಗಳ ಬಗ್ಗೆ ಗೌರವವಿದ್ದೆ ಪ್ರೀತಿಗೆ ಅನುಮತಿ ನೀಡಿದ್ದರು. ಆದರೂ, ಇದ್ದಕ್ಕಿದ್ದ ಹಾಗೇ ಒಂದು ದಿನ ಇಬ್ಬರೂ ಪರಿಚಯವೇ ಇಲ್ಲದವರಂತೆ ಉಳಿದುಬಿಟ್ಟರು. ಬೇರಾಗಿದ್ದು ಒಂದೇ ಮಾತಿಗೆ. ಯಾವುದೋ ಕ್ಷುಲ್ಲಕ ಕಾರಣಕ್ಕೆ ಅವಳದಲ್ಲದ ತಪ್ಪಿಗೆ ಆತ ನೀನು ನನಗೆ ಸಿಗಬಾರದಿತ್ತು. ಅಂದು ನೀನು ನನಗೆ ಸಿಗದೇ ಇದ್ದಿದ್ದರೇ ನನ್ನ ಬದುಕಿನಲ್ಲಿ ಹೀಗೆಲ್ಲಾ ಆಗ್ತಾ ಇರಲಿಲ್ಲ ಎಂದಿದ್ದ. ಅಷ್ಟೇ! ಅವನೆಡೆಗಿನ ಪ್ರೀತಿ ತೊರೆದು, ಆಕೆ ಶಾಶ್ವತ ಮೌನಕ್ಕೆ ಶರಣಾಗಿದ್ದಳು.
ಅವಳೇನು ಅಂತ ಮಾಡಬಾರದ ತಪ್ಪನ್ನೇನೂ ಮಾಡಿರಲಿಲ್ಲ. ಇಬ್ಬರೂ ತಮ್ಮ ಪಾಡಿಗೆ ತಾವು ಅವರವರ ಕೆಲಸಗಳಲ್ಲಿ ಮುಳುಗಿದ್ದರೂ, ಸಿಗುವ ಅಲ್ಪ ಘಳಿಗೆಯಲ್ಲಿ ಅವನ ಸಾಮೀಪ್ಯ, ಒಡನಾಟ ಬಯಸಿದ್ದಳು. ಎಲ್ಲವನ್ನು, ಎಲ್ಲರನ್ನು ತೊರೆದು ಬದುಕುತ್ತಿರುವಾಕೆ. ಬದುಕು ಆಕೆಗೆ ಪ್ರಾಕ್ಟಿಕಲ್ ಆಗಿರುವುದನ್ನ ರಕ್ತಗತವಾಗಿಯೇ ಕಲಿಸಿದೆ ಎನ್ನುವಷ್ಟರ ಮಟ್ಟಿಗೆ ಹೊರಜಗತ್ತಿಗೆ ಪ್ರಾಕ್ಟಿಕಲ್ ಹೌದು. ಆದರೆ, ಒಳಮನಸ್ಸೊಂದು ಭಾವನೆಗಳ ತುಡಿತಕ್ಕೆ ಅವನ ಸಾಂಗತ್ಯ ಯಾವಾಗಲೂ ಅಲ್ಲದಿದ್ದರೂ, ಸಮಯ ಸಿಕ್ಕಾಗಲೆಲ್ಲಾ ಬೇಡುತ್ತಲೇ ಇತ್ತು. ಆದರೆ, ಆತನಿಗೆ ಯಾವುದರಲ್ಲೂ ಆಸಕ್ತಿಯಿಲ್ಲ. ಅರ್ಥಾತ್ ಅವಳ ಮೇಲೂ...! ಮಾತೆತ್ತಿದರೆ ನೀನಂದು ನನಗೆ ಸಿಗಬಾರದಿತ್ತು. ಬದುಕಲ್ಲಿ ನೀ ಬಂದು ಅದೇನೆಲ್ಲಾ ಆಗಿ ಹೋಯ್ತು ಅನ್ನುವ ಮಂತ್ರ ಪಠಣ ಮಾಡುತ್ತಿರುತ್ತಾನೆ.


**
ಒಂದು ವರ್ಷದ ಹಿಂದಿನ ಮಾತು. ಆ ಹುಡುಗ-ಹುಡುಗಿ ನಾವಿಬ್ರೂ ಪಕ್ಕ ದೋಸ್ತ್‍ಗಳು ಅಂತ ಹೇಳ್ಕೊಂಡೇ ಓಡಾಡ್ಕೋಡಿಂದ್ರು. ಆದರೆ, ಇಬ್ಬರು ಪ್ರೀತಿಸ್ತಿದ್ದಾರೆ ಅಂಥ ಜಗತ್ತಿಗೆ ಗೊತ್ತಿತ್ತು. ಅದು ಅಕ್ಷರಶಃ ನಿಜವೂ ಆಗಿತ್ತು. ಒಂದಿನ ಇಬ್ರೂ ರಿಜಿಸ್ಟ್ರಾರ್ ಮದುವೆ ಆದ್ರೂ ಅಂತ ಕೇಳ್ಪಟ್ಟೆ. ಅದಾದ ಸರಿಸುಮಾರು 5-6 ತಿಂಗಳಾಗಿತ್ತೇನೋ ಆಗಲೇ ಡಿವೋರ್ಸ್‍ಗಾಗಿ ಆ ಹುಡುಗ ಓಡಾಡ್ತಿದ್ದಾನೆ ಅನ್ನೋ ವಿಷಯ ಗೊತ್ತಾಯ್ತು. ಅಷ್ಟೆಲ್ಲಾ ಗಾಢವಾಗಿ ಪ್ರೀತ್ಸಿ, ಪರಸ್ಪರರಿಬ್ಬರು ಅಭಿರುಚಿಗಳ ಬಗ್ಗೆ ಅರ್ಥ ಮಾಡಿಕೊಂಡು ಮದುವೆ ಆಗಿ ಯಾಕಿಗಾದ್ರೂ ಅಂದ್ರೆ, ಮನೆಯವರು ಅವಳಿಗಿಂತ ಚೆಂದದ, ಶ್ರೀಮಂತ ಮನೆಯ ಹುಡುಗಿಯನ್ನು ಮದುವೆ ಮಾಡೋಕೆ ನಿಶ್ಚಯಿಸಿದ್ದರಂತೆ. ಆ ಕಡೆ ಮನವೊಲಿದು, ಈಕೆಗೆ ನೀನು ಸಿಗದೇ ಹೋಗಿದ್ರೆ, ನಾನು ಆ ಹುಡುಗೀನಾ ಮದ್ವೆ ಆಗಿ ಲೈಫ್ ಸೆಟ್ಲ್ ಮಾಡ್ಕೊತ್ತಿದ್ದೆ ಅಂತಾ ಇದ್ದನಂತೆ. ಅಷ್ಟಕ್ಕೆ ರೋಸಿ ಹೋಗಿ ಡಿವೋರ್ಸ್‍ಗೆ ಸಮ್ಮತಿಸಿದ್ದಾಳೆ. ಆಕೆ ಮನೆಯಲ್ಲಿಯೂ ಯಾವುದಕ್ಕೂ ಕಡಿಮೆಯಿರಲಿಲ್ಲ. ಒಪ್ಪಿದ್ದರೆ ಅವನಿಗಿಂತ ಚೆಂದದ ಹುಡುಗನ್ನ ನೋಡಿ ಮದ್ವೆ ಮಾಡ್ತಿದ್ದ್ರು. ಆದ್ರೆ ಆಕೆ ಯಾವತ್ತಿಗೂ ಆ ಬಗ್ಗೆ ಅಪ್ಪಿತಪ್ಪಿಯೂ ಸೊಲ್ಲೆತ್ತದವಳಲ್ಲ. ಮನೆಯವರ ವಿರೋಧದ ನಡುವೆಯೂ ಮದುವೆ ಆಗಿ ಬಂದಿದ್ದೀವಿ. ಇಬ್ಬರೂ ಚೆನ್ನಾಗಿ ಬದುಕಿ ತೋರಿಸೋಣ ಎನ್ನುವ ಉವಾಚ ಅವಳದು. ಅವನು   ಈಗ ಅವಳ ಯಾವ ಮಾತು ಕೇಳೋಕು ಅವನು ಕಿವುಡನಾಗಿಬಿಟ್ಟಿದ್ದಾನೆ. ಇತ್ತ ಕಡೆ ತವರು ಮನೆಯಿಂದಲೂ ಆಕೆ ನಿಷ್ಠುರವಾಗಿದ್ದಾಳೆ. ಆದರೆ ಇದ್ಯಾವುದರ ಗೊಡವೆಗೂ ತಲೆ ಕೆಡಿಸಿಕೊಳ್ಳದೇ ಅವಳನ್ನು ಧಿಕ್ಕರಿಸಿ ಬದುಕಲು ಅವನು ಸಕಲ ಸನ್ನದ್ಧನಾಗಿದ್ದಾನೆ.
ಯಾಕೆ ಹೀಗೆ ಗಂಡಿಗೆ ಸಿಗುವ ಕಾರಣಗಳು, ಹೆಣ್ಣಿಗೆ ಸಿಗುವುದಿಲ್ಲವಾ? ಪ್ರೀತಿಯ ಹೊಸತರಲ್ಲಿ ಅವಳ ಎಲ್ಲ ಚಲನ ವಲನಗಳೂ ಚೆಂದವೆನ್ನುತ್ತಿದ್ದ ಆತನಿಗೆ ಏನಾಗಿದೆ ಈಗ. ಅವಳು ದಕ್ಕುವ ಮುನ್ನ ಮೌನಕ್ಕೂ, ಪಿಸು ಮಾತಿಗೂ ದನಿಯಾಗಿ ನಿಲ್ಲುತ್ತಿದ್ದ ಅವನು ಅದೆಲ್ಲಿ ಮಾಯವಾಗಿಬಿಟ್ಟ. ಎಲ್ಲ ಸುಖ ಸೌಲಭ್ಯಗಳು ಬೇಕು ಎನ್ನುವವ ಅವಳನ್ನು ಪ್ರೀತಿಯಲ್ಲಿ ಯಾಕಾದರೂ ಕೆಡವಿಕೊಳ್ಳಬೇಕಿತ್ತು. ಮದುವೆಯಾಗಬೇಕಿತ್ತು. ಎಲ್ಲ ಆದ ಮೇಲೆ ಹೀಗೆ ಪಶ್ಚಾತ್ತಾಪದ ನಿಟ್ಟುಸಿರು ಬಿಟ್ಟು ಜೀವಮಾನವಿಡೀ ಅವಳನ್ನು ಕಣ್ಣೀರಿನಲ್ಲಿ ಕೈತೊಳೆಸಲು ಅಣಿಗೊಳಿಸಬೇಕಿತ್ತು. ಅಷ್ಟಕ್ಕೂ ಪಶ್ಚಾತ್ತಾಪದ ನಿಟ್ಟುಸಿರು ಅವನಿಗೆ ಮಾತ್ರನಾ?
 ಪ್ರೀತಿಸಿದೆ ಅನ್ನೋ ಒಂದೇ ಕಾರಣಕ್ಕೆ ಎಲ್ಲವನ್ನು ಅನುಸರಿಸಿ ಹೋದ ಅವಳಿಗೆ, ತಾನು ಅಂದಿದ್ದಕ್ಕೆಲ್ಲಾ ತಲೆತಗ್ಗಿಸಿ ಬಾಳ್ವೆ ನಡೆಸಬೇಕು   ಎಂಬ ಕಟ್ಟಳೆ ಹೇರೋದು ಅದೆಷ್ಟು ಸರಿ? ಅವನ ಚುಚ್ಚು ಮಾತುಗಳಿಗೆ ಕಿವಿಗೊಡುತ್ತಾ ಅವನೊಟ್ಟಿಗೆ ಹೆಜ್ಜೆ ಹಾಕಬೇಕು ಎನ್ನುವುದು ಯಾವ ನ್ಯಾಯ? ಇಷ್ಟಕ್ಕೂ ಬಂಧ ಬಿಡಿಸಿಕೊಳ್ಳಲೇಬೇಕು ಅಂತ ಅವಳಿಗೂ ಅನಿಸಿದ್ದರೆ ಹೇಳೋಕೆ ನೆಪಗಳಿಗೇನೂ ಬರವಿತ್ತಾ. ಹೇಳುತ್ತಾ ಹೋದರೆ ಪ್ರತಿ ಗುಕ್ಕಿಗೂ ಒಂದು ಸಕಾರಣ ಹುಡುಕಬಹುದಿತ್ತು. ಅವನು ಧಿಕ್ಕರಿಸುತ್ತಾನಲ್ಲ ಎನ್ನುವ ಅವಸರಕ್ಕೆ ಆಕೆಯೂ ಸ್ವಾಭಿಮಾನವನ್ನು ಮುಂದಿಟ್ಟುಕೊಂಡು ಸಂಬಂಧ ಕಡಿದುಕೊಳ್ಳಲು ಮುಂದಾಗಿದ್ದಳಷ್ಟೇ. ಈಗಲೂ ಅವಳು ಅವನಿಷ್ಟಕ್ಕೆ ಸಿಕ್ಕ ಗಾಳ. ಅವನ ಒಪ್ಪಿಗೆ ಅಂತಿಮ ಠಸ್ಸೆ. ಅವನಿಷ್ಟಕ್ಕೆ ಅವಳು ಸರಿ ಎಂದು ತಲೆಯಾಡಿಸಿದ್ದಾಳೆ. ಆದರೂ ಅವಳ ಮನಸ್ಸಿನ ಮಾರ್ದನಿ ಗುಂಯ್‍ಗುಡುತ್ತಲೇ ಇದೆ. ನೆಪ ಮಾತ್ರಕಷ್ಟೆ ನಿನ್ನ ನೆನಪು ಹೌದು ಒಪ್ಪಿಕೊಳ್ಳುತ್ತೇನೆ. ಈಗಲೂ ಮರೆವನ್ನ ನಾನು ಅದಮ್ಯವಾಗಿ ಪ್ರೀತಿಸುತ್ತೇನೆ.

- ಭಾಚಿ 




Thursday, 7 January 2016

ಬದುಕು ಹರಿವ ನದಿಯಂತೆ.....



ಮೊನ್ನೆಯಷ್ಟೇ ಗೆಳತಿಯೊಬ್ಬಳು ದಾರಿಯಲ್ಲಿ ಸಿಕ್ಕಿದ್ಲು. ತೀರಾ ಪರಿಚಯದ ಮುಖವೇನೂ ಅನಿಸಲಿಲ್ಲ. ಆದರೂ ಅದೇನೋ ಕುತೂಹಲ! ಎಲ್ಲಿಯೋ ನೋಡಿಂದಾಗಿದೇಯಲ್ಲಾ.. ನೋಡಿ ಸುಮಾರು ಹತ್ತು ವರ್ಷಗಳ ಮೇಲೆ ಆಗಿತ್ತು. ನೋಟಗಳು ಎದುರು ಬದುರು ಪುನಃ ಪುನಃ ದಿಟ್ಟಿಸಿದಾಗಲೇ ಅರಿವಿಗೇ ಬಂದದ್ದು. ಅವಳು ನನ್ನ ಪ್ರೈಮರಿ ಶಾಲೆಯ ಸಹಪಾಠಿ ಅಂಥ. ನಾನು ಮಾತನಾಡಿಸಲು ಮುಂದಾಗುವ ಹೊತ್ತಿಗೆ ಆಕೆಯೇ ಬಂದು ಮಾತನಾಡಿಸಿದಳು. ಹಾಯ್ ಹೇಗಿದಿಯಾ.. ನಾನು!
ನನಗೂ ಆಕೆಯ ಹೆಸರೇನೂ ನೆನಪಿರಲಿಲ್ಲ. ಮುಖಚರ್ಯೆ ಸ್ವಲ್ಪ ಪರಿಚಿತವೆನಿಸಿತ್ತಷ್ಟೇ. ಆಕೆ ಮಾತ್ರ ನನ್ನ ಹೆಸರು ನೆನಪಿಟ್ಟುಕೊಂಡಿದ್ದಳು. ಆದರೆ, ನಾನು ಹೆಸರಿನೊಂದಿಗೆ ಈಗ ಮುಂದುವರಿದ ಭಾಗವನ್ನು ಹೇಳಿ ಪರಿಚಯ ಮಾಡಿಕೊಂಡೆ. ಎಷ್ಟೆಲ್ಲಾ ಬದಲಾವಣೆ ತಂದಿಟ್ಟಿತ್ತು ಬದುಕು. ಬೌದ್ಧಿಕವಾಗಿ, ಆರ್ಥಿಕವಾಗಿ ಇಬ್ಬರೂ ತಂತಮ್ಮ ವ್ಯಾಪ್ತಿಯ ಇತಿ ಮಿತಿಯಲ್ಲಿ ಬೆಳೆದಿದ್ವಿ. ಆದರೂ, ಆ ಕ್ಷಣಕ್ಕೆ ಕೊಂಚ ಸ್ಟೇಟಸ್‍ಗಳ ಮಟ್ಟಿಗೆ ಮಾತು ಆರಂಭವಾದರೂ, ತದ ನಂತರದಲ್ಲಿ ಮಾತುಗಳು ಹೊರಳಿದ್ದು ನಮ್ಮ ಬಾಲ್ಯದೆಡೆಗೆ.. ನಮ್ಮ ಬಾಲ್ಯದ ದಿನಗಳ ಕಡೆಗೆ.. ಫಾರ್ಮಲಿಟಿ ಹೆಚ್ಚಿನ ಹೊತ್ತು ವರ್ಕ್‍ಔಟ್ ಆಗಲ್ಲ ಅನ್ನೋದಕ್ಕೆ ಇದೂ ಕೂಡ ಒಂದು ಉದಾಹರಣೆಯೇನೋ ದೇಹ ಅದೆಷ್ಟೇ ಬೆಳೆದಿದ್ದರೂ, ಮನಸ್ಸು ಗೆಳೆಯರ ಬಳಗಕ್ಕೆ ಸೇರಿಬಿಟ್ಟಾಗ ಮಗುವಂತೇ ಆಗಿಬಿಡುತ್ತೆ. ಅಲ್ಲಾಗಿದ್ದೂ ಅದೇ!
 ನಾವು ಓದಿದ್ದು, ಒಂದು ಖಾಸಗಿ ಶಾಲೆಯಲ್ಲಿ. ಪ್ರೈಮರಿ ಶಾಲೆಯ ಅವಧಿಯಲ್ಲಿ ಮಾಡಿದ್ದ ಕುಚೇಷ್ಟೆಗಳು, ಆಚರಣೆಗಳ ಕುರಿತಾಗಿ ಒಂದಿಷ್ಟು ಮಾತಿಗಿಳಿದೆವು. ನಾನು ಅದರ ನೆನಪಿನಲ್ಲೊಂದು ಹದಿನೈದು ವರ್ಷಗಳ ಹಿಂದಿನ ಗತಕಾಲದ ವೈಭವವನ್ನು ಮನದಲ್ಲಿಯೇ ಬಯೋಸ್ಕೋಪು ಹಾಕಿ ಓಡಿಸಲಾರಂಭಿಸಿದ್ದೆ. ಏನೇನೆಲ್ಲಾ ಇತ್ತು ಆ ದಿನಗಳಲ್ಲಿ. ಹಾಗಂದುಕೊಂಡರೆ ಏನೀರಲಿಲ್ಲ ಆ ಬದುಕಲ್ಲಿ. ಗೆಳೆಯರೊಟ್ಟಿಗೆ ಇರುತ್ತಿದ್ದ ಅಷ್ಟೂ ವರ್ಷಗಳು ಹೊಸ ವರ್ಷದ ದಿನದಷ್ಟೇ ಕಳೆಗಟ್ಟಿರುತ್ತಿದ್ದವು. ದಿನಾ ಒಂದಿಲ್ಲೊಂದು ನೆಪದಲ್ಲಿ ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ಸಿಹಿ ತಿಂಡಿ. ಅದೂ ಟೀಚರ್ ಕ್ಲಾಸಲ್ಲಿರುವಾಗ್ಲೇ ಕದ್ದು ತಿನ್ನುತ್ತಿದ್ದ ಮಜಾ. ಮಧ್ಯಾಹ್ನದ ಊಟದ ಹೊತ್ತಿಗೆ ಸಿಹಿ ತಂದವರಿಗೆ ಕಾಯುತ್ತಿದ್ದ ಖಾಲಿ ಡಬ್ಬಿ. ಆಗ ತಿಂದ ಅಷ್ಟೂ ಜನರ ಇಂತಿಷ್ಟು ಊಟದ ಪಾಲು. ಎಲ್ಲಾ ತಿಂದು ಭೂರಿ ಭೂಜನ ಸವಿದ ತೃಪ್ತಿ ಅವರಿಗಾದರೆ, ಸಿಹಿ ತಿಂದ ಖುಷಿ ನಮ್ಮದು. ಈ ಚೇಷ್ಟೆಗಳಿಗೆ ಒಂದು ಕಾಲಾವಧಿಯಲ್ಲಿ ದಿನವೂ ಸಿಹಿತಿಂಡಿ. ಮನೆಯಲ್ಲಿ ಸಾಕೆನಿಸುವಷ್ಟು ತಿಂದು, ಅದರ ಪರ್ಯಾಯವಾಗಿ ಎಲ್ಲರ ಮನೆಯ ಮಧ್ಯಾಹ್ನದ ತಿಂಡಿ ಸವಿಯಲು ಬಾಕ್ಸ್ ತರುತ್ತಿದ್ದದ್ದು ಒಂದು ಹವ್ಯಾಸವೇ ಆಗಿಹೋಯ್ತು.  ಸ್ಕೂಲ್‍ನಲ್ಲಿ ಪ್ರತಿ ವರ್ಷವೂ ಆಚರಿಸುತ್ತಿದ್ದ ಹಿರಿಯ ವಿದ್ಯಾರ್ಥಿಗಳ ಬೀಳ್ಕೊಡುಗೆಗೆ ಆಯೋಜಿಸುತ್ತಿದ್ದ ಸರಸ್ವತಿ ಪೂಜೆ, ಶಾಲಾ ವಾರ್ಷಿಕೋತ್ಸವ ಮಾತ್ರವೇ ಅನುದಿನಕ್ಕೂ ನಮ್ಮಲ್ಲಿ ಹೊಸ ಉತ್ಸಾಹ, ಹುಮ್ಮಸ್ಸು ತರುತ್ತಿತ್ತು. ಮಾತ್ರವಲ್ಲ, ಬರುವ ವರ್ಷಕ್ಕೆ ನಾವು ಸೀನಿಯರ್‍ಗಳಾಗಿರ್ತೇವೆ ಎನ್ನುವ ಭಾವನೆಯೇ ಇನ್ನಿಲ್ಲದ ಬದುಕಿನೋತ್ಸಾಹವನ್ನು ಇಮ್ಮಡಿ ಮಾಡುತ್ತಿತ್ತು. ಅದಕ್ಕಾಗಿ ಒಂದಷ್ಟು ತಯಾರಿ ಮಾಡಿಕೊಳ್ಳಲು, ಟೀಚರ್ಸ್‍ಗಳ ನೆಚ್ಚಿನ ವಿದ್ಯಾರ್ಥಿ ಎನಿಸಿಕೊಳ್ಳಲು ನಾ ಮುಂದು ತಾ ಮುಂದು ಅಂಥ ಇನ್ನಿಲ್ಲದ  ಸಾಹಸಗಳಿಗೆ ಕೈಹಾಕುವುದು ನಮ್ಮ ವರ್ಷದ ರೆಸಲ್ಯೂಷನ್‍ಗಳಾಗಿರುತ್ತಿದ್ದವು. ಹೊಸ ವರ್ಷಾಚರಣೆಯ ಗುಂಗು ಅಚಾನಕ್ಕಾಗೂ ನಮ್ಮ ಗಮನಕ್ಕೆ ಸಿಗುತ್ತಿರಲಿಲ್ಲ. ತೀರಾ ಹೈಸ್ಕೂಲಿನ ಮಟ್ಟಿಗೆ ಬಂದಾಗ ಹ್ಯಾಪಿ ನ್ಯೂಇಯರ್ ಅನ್ನುತ್ತಿದ್ದದ್ದು ಬಿಟ್ಟರೇ, ಹೊಸ ವರ್ಷಕ್ಕೊಂದು ರೆಸಲ್ಯೂಷನ್ ಮಾಡ್ಕೊಬೇಕು. ಅದನ್ನ ಚಾಚುತಪ್ಪದ ಹಾಗೇ ಶಿರಸಾ ಪಾಲಿಸಬೇಕು ಎಂಬ ಯಾವ  ತತ್ವವೂ ನಮಗೆ ಗೊತ್ತಿರಲಿಲ್ಲ. ಎಳೆ ವಯಸ್ಸಿನ ಮುಗ್ಧತೆ ಅಂದ್ರೆ ಅದೇ ಅಲ್ವಾ? ಸ್ಕೂಲಿನ ಅವಧಿ ಇದ್ದಷ್ಟು ನಾವೂ ಹ್ಯಾಪಿ ಹ್ಯಾಪಿಯೇ... ಶಾಲಾ ಅವಧಿಯಲ್ಲೇನಾದ್ರೂ ಅಚಾನಕ್ಕಾಗಿ ರಜೆ ಕೊಟ್ರೆ ಇನ್ನೂ ಹ್ಯಾಪಿಯೇ.. ಯಾಕಂದ್ರೆ ಗೆಳೆಯರೊಟ್ಟಿಗೆ ಮೈದಾನದಲ್ಲೋ, ಮತ್ತೆಲ್ಲೋ ಆಟವಾಡಿ ನಾವು ಮನೆಗೆ  ಹೋಗುತ್ತಿದ್ದದ್ದು ಮಾಮೂಲಿ ಸಮಯಕ್ಕೆ. ಅಷ್ಟೂ ಹೊತ್ತು ಯಾರ ಅಡ್ಡಿಯಿಲ್ಲದೇ ದೇಹ ದಣಿಯವಷ್ಟು ಆಟದಲ್ಲಿ ತೊಡಗಿರುತ್ತಿದ್ವಿ. ಮನಸ್ಸು ಮಾತ್ರ ಇನ್ನಷ್ಟು ಆಟದ ಹುಮ್ಮಸ್ಸಿನಲ್ಲಿಯೇ ಇರುತ್ತಿತ್ತು. ಮತ್ತೊಂದು ರಜೆಗೆ ಕಾಯುತ್ತಿತ್ತು!
ಅಲ್ಲಿಗೆ ಮಾತು ಒಂದು ತಹಬದಿಗೆ ಬಂದು ನಿಂತಿತು. ಹೊಸ ವರ್ಷಾಚರಣೆ ಹೇಗ್ ಮಾಡ್ದೆ ಅಂತ ಆಕೆ ಕೇಳುತ್ತಲೇ, ನಾನು, ನನ್ನ ಹಸ್ಬೆಂಡ್ ಗೋವಾಗೋಗಿದ್ವಿ. ಫನ್ ಆಗಿತ್ತು, ಗ್ರಾಂಡ್ ಪಾರ್ಟಿ ಮಾಡಿದ್ವಿ ಅದೂ ಇದೂ ಅಂತ ಹೇಳುತ್ತಾ ಹೊರಟಳು. ಆದರೆ ಮಾರನೇ ದಿನವೇ ಇಬ್ಬರಿಗೂ ಯಾವುದೋ ವಿಷಯಕ್ಕೆ ಮನಸ್ತಾಪ ಆಗಿ ಮಾತುಕತೆ ಬಂದ್ ಆಗಿದೆ. ನಾನು ಅಮ್ಮನ ಮನೆಗೆ ಬಂದಿದ್ದೆ. ಈ ತಿಂಗಳು ಪೀರಿಯಡ್ಸ್ ಬೇರೆ ಆಗಿಲ್ಲ. ಅದ್ಕೆ ಚೆಕ್ ಅಪ್ ಮಾಡಿಸೋಣ ಅಂತ ಬಂದೆ. ಹಾಗೇನಾದ್ರೂ ಪಾಸಿಟೀವ್ ಇದ್ರೆ ತೆಗೆಸಿಬಿಡೋಣ ಅಂತ ಅಂದ್ಲು.
ಎಲಾ ಇವಳಾ! ಏನಾಶ್ಚರ್ಯ ಬೆರಳೆಣಿಕೆಯಷ್ಟೇ ದಿನದ ಹಿಂದೆ ಗಂಡನೊಟ್ಟಿಗೆ ನ್ಯೂಇಯರ್ ಸೆಲೆಬ್ರೇಷನ್ ಮಾಡಿದ ಖುಷಿಯಲ್ಲಿರಬೇಕಾದವಳು ಹೀಗೆಲ್ಲಾ ಮಾತಾಡುತ್ತಿದ್ದಾಳಲ್ಲ ಅಂತ. ಮನಸ್ತಾಪಕ್ಕೆ ಕಾರಣ ಕೇಳ್ಬೇಕು ಎನಿಸಿದರೂ, ಹಾಗೆಲ್ಲಾ ಕೇಳೋದು ತೀರಾ ಬಾಲಿಶತನವೆನಿಸಿತು. ಆದರೂ ಕೊಂಚ ಅನುಭವದ ಪರಿಧಿಯಲ್ಲಿ ಇದರಿಂದ ಭವಿಷ್ಯದಲ್ಲಾಗುವ ತೊಂದರೆಗಳ ಕುರಿತು ನನಗೆ ತಿಳಿದ ಮಟ್ಟಿಗೆ ಕನ್‍ವಿನ್ಸ್ ಮಾಡೋಕೆ ಟ್ರೈ ಮಾಡ್ದೆ. ಊಹೂ! ಆಕೆ ಕೇಳುವ ಪರಿಸ್ಥಿತಿಯಲ್ಲೇ ಇಲ್ಲ. ತಾನು ಮಾಡುತ್ತಿರುವುದೇ ಸರಿ ಎನ್ನುವ ಊವಾಚ ಮೊದಲೇ ಆಕೆ ಹಾಕಿಕೊಂಡಾಗಿದೆ. ನಾನಾದರೂ ಎಷ್ಟರವಳು. ಬಾಲ್ಯದ ಗೆಳತಿಯಾದರೂ ಕೆಲ ನಿಮಿಷಗಳ ಹಿಂದಷ್ಟೇ ಸಿಕ್ಕವಳು! ಮುಂದೆ ಸಿಗುತ್ತೇವೋ ಇಲ್ಲವೋ ಯಾವ ಗ್ಯಾರೆಂಟಿಯೂ ಇಲ್ಲದವಳು. ಆದರೂ, ನ್ಯೂಇಯರ್ ಸೆಲೆಬ್ರೇಷನ್ ದಿನದ ಬಗ್ಗೆ ಹೇಳುವಾಗಿನ ಅವಳ ಮುಖದ ನಗು, ಆನಂತರದ ವಿಷಯಗಳನ್ನು ಹಂಚಿಕೊಳ್ಳುವಾಗ ಇರಲಿಲ್ಲ. ಆ ಸಮಯಕ್ಕೆ ಮಾಡಿದ ಖರ್ಚು, ಮೋಜು, ಮಸ್ತಿ ಕೇವಲ ನೆನಪಿಗಷ್ಟೇ ಸೀಮಿತವಾಗಿ, ಉಳಿದ ನೋವುಗಳು ಬದುಕಿನ ಪರ್ಯಂತ ತನ್ನ ಅಧಿಪತ್ಯ ಸಾಧಿಸುವುದಾದರೆ! ವರ್ಷಾಚರಣೆಗೆ ಎಲ್ಲಿಯ ಅರ್ಥ?! ಆಗಲೇ ಥಟ್ಟನೆ ಹೊಳೆದದ್ದು, ಈ ವರ್ಷ ತಾನು ನ್ಯೂಇಯರ್ ವಿಷ್ ಹೇಳೋಕು ಕೇಳೋಕು ಮಧ್ಯರಾತ್ರಿ ಎಚ್ಚರದಲ್ಲಿರಲಿಲ್ಲ. ಕಾರಣ, ನಾನೂ ಕೂಡ ಯಾವುದೋ ಕ್ಷುಲ್ಲಕ ಕಾರಣದಿಂದ ಬೇಸತ್ತು, ಯಾವುದರ ಚಿಂತೆಯಿಲ್ಲದೇ, ಮಗನೊಟ್ಟಿಗೆ ಗಡದ್ದು ನಿದ್ದೆಗೆ ಜಾರಿಬಿಟ್ಟಿದ್ದೆ ಎಂಬುದು ನೆನಪಾಯ್ತು. ನೂತನ ವರ್ಷ ಆಚರಿಸಿದೇವೋ ಇಲ್ಲವೋ ಮುಖ್ಯವಲ್ಲ. ಅದು ಗತಿಸಿದ ಸಂಗತಿ. ಬದುಕಿನ ಆಚರಣೆ ಸಕಾಲದಲ್ಲಿ ಮಾಡದಿದ್ದರೆ ನಮ್ಮಂತಹ ನಿರುತ್ಸಾಹಿಗಳು ಬೇರೊಬ್ಬರಿರಲ್ಲ ಎಂಬುದರ e್ಞÁನೋದಯ ಅಂದು ಕಾಫಿ ಡೇನಲ್ಲಿ  ನನಗಾಯ್ತು.....

- ಭಾಚಿ

Monday, 21 December 2015

ತಿರಸ್ಕಾರಕ್ಕೂ ಪ್ರತಿಕ್ರಿಯೆ ಬೇಕಾ...?

ಅಂದ್ಯಾಕೋ ಮನೆ ಸಂಪೂರ್ಣ ನಿಶ್ಯಬ್ದವಾಗಿತ್ತು... ಮನಸ್ಸು ಕೂಡ! ಏನೂ ಮಾಡ್ಬೇಕು ಅಂತ ಅನಿಸಲಿಲ್ಲ. ಹಾಗಾಗಿಯೇ ಬಹಳ ದಿನಗಳ ನಂತರ ಟಿವಿ ಮುಂದೆ ಕೂತೆ. ‘ಅಮ್ಮಾ... ಚಿಂಟು, ಪೋಗೋ ಹಾಕು’ ಅನ್ನೋಕೆ ಮಗರಾಯ ಮನೆಯಲ್ಲಿರಲಿಲ್ಲ. ಸಂಜೆಯಾಗಿದ್ದರಿಂದ ಹೊರಹೋಗುವ ಮನಸ್ಸಾಗಲಿಲ್ಲ. ಟಿವಿ ಆನ್-ಆ- ಉಸಾಬರಿ ವಹಿಸಿದ್ದ ನಮ್ಮನೆಯ ಖುಷಿಯ ಉಪಸ್ಥಿತಿ ಕಾಡುತ್ತಲೇ ಇತ್ತು. ಅಂತೂ ಅದೆಷ್ಟೋ ದಿನಗಳ ತರುವಾಯ ನಾನಾಗಿಯೇ ಟಿವಿ ಆನ್ ಮಾಡಿದೆ. ಟಿವಿಯನ್ನೇನೋ ಆನ್ ಮಾಡಿದೆ. ಆದರೆ ಯಾವ ಅಡಿಕ್ಷನ್‌ಗೂ ಒಳಗಾಗದ ನಾನು ಏನು ನೋಡೋದು? ನ್ಯೂಸ್...? ಸೀರಿಯಲ್? ಸಿನಿಮಾ...? ಗೊಂದಲಕ್ಕೆ ಬಿದ್ದು ಅದೆಷ್ಟೇ ಚಾನೆಲ್ ಬದಲಾಯಿಸಿದರೂ ಮನಸ್ಸು ಯಾವುದನ್ನು ನೋಡುವುದಕ್ಕೂ ಒಪ್ಪಲಿಲ್ಲ. ಕೊನೆಗೂ ಹದಿನೈದು ನಿಮಿಷ ಶತಾಯಗತಾಯ ಸರ್ಕಸ್ ನಡೆಸಿದ ಬಳಿಕ ಅದ್ಯಾರೋ ಯಾರಿಗೋ ಕಪಾಳಕ್ಕೆ ಹೊಡೆಯುವ ದೃಶ್ಯ ಕಣ್ಣಿಗೆ ಬಿತ್ತು ಅಷ್ಟೇ. ಅಚಾನಕ್ಕಾಗಿ ಬೆರಳು ಚಾನೆಲ್ ಬದಲಾಯಿಸುವುದನ್ನು ಸಂಪೂರ್ಣ ಬಂದ್ ಮಾಡಿತು. ಹೊಡೆದದ್ದು ಹೀರೋ, ಹೊಡೆಸಿಕೊಂಡದ್ದು ಮಾತ್ರ ಹೀರೋಯಿನ್ ಅಲ್ಲ. ಮತ್ಯಾರು? ಅವಳು ಗರ್ಲ್ - ಫ್ರೆಂಡಾ..! ಅಲ್ಲ. ಮತ್ಯಾರು ಎಂಬ ಕುತೂಹಲದಲ್ಲೇ ಇಡೀ ಸಿನಿಮಾ ನೋಡುವ ಹಾಗಾಯ್ತು. ಅದು ದೊಡ್ಡ ಬ್ಯಾನರ್‌ನ ಅಡಿಯಲ್ಲಿ ಬಂದ ಹೊಸ ನಾಯಕನ ಹೊಸ ಸಿನಿಮಾ. ಸಿನಿಮಾ ಯೂಥ್ ಓರಿಯೆಂಟೆಡ್ ಅನಿಸಿದರೂ, ಈಗಿನ ಯುವಮನಸ್ಸುಗಳು ಭಾವನೆಗಳೊಟ್ಟಿಗೆ ಹೇಗೆಲ್ಲ ಯೋಚಿಸುತ್ತವೆ ಎಂಬುದರ ವಿವರಣೆ ಅಲ್ಲಿ ಅನಾವರಣಗೊಂಡಿತ್ತು. ನಾಯಕ ಸಿಕ್ಕಾಪಟ್ಟೆ ದಿಲ್ದಾರ್ ಹುಡುಗ. ಎಲ್ಲವನ್ನೂ ಪಾಸಿಟಿವ್ ಆಗಿ ತಗೊಂಡು ನಿಭಾಯಿಸುವ ಕ್ಯಾರೆಕ್ಟರ್. ಅಲ್ಲದೆ ಗಿಟಾರಿಸ್ಟ್. ಮ್ಯೂಸಿಕ್‌ನಲ್ಲೇ ಮಂತ್ರಮುಗ್ಧರನ್ನಾಗಿಸಿ, ಅವನೊಂದಿಗಿದ್ದ ಯಾರಿಗೂ ಬೋರ್ ಅನಿಸುವುದಕ್ಕೆ ಬಿಡದೆ ಇರುವಂಥವನು.ಸಂಗೀತಸ್ಪರ್ಧೆಗಾಗಿ ಗೋವಾಕ್ಕೆ ಹೋಗುತ್ತಿದ್ದಾಗ ನಾಯಕನಿಗೆ ಪರಿಚಯವಾದ ಹುಡುಗಿ ಆಕೆ. ಅವಳಿಗೂ ಈ ಮೊದಲೇ ಒಬ್ಬ ಬಾಯ್-ಫ್ರೆಂಡ್ ಇರುತ್ತಾನೆ. ಅವಳ ಚೆಲ್ಲುಚೆಲ್ಲು ವರ್ತನೆ ಸಹಿಸದೆ ಬ್ರೇಕ್ ಅಪ್ ಆಗಿದ್ದ. ಅದಕ್ಕೆ ಅವಳು ವಿಷ ಕುಡಿದು ಸಾಯೋಕೆ ಹೋಗುತ್ತಾಳೆ. ಅದನ್ನು ನೋಡಿದ ನಾಯಕ ಮತ್ತವರ ಗ್ಯಾಂಗ್ ಅವಳಿಗೆ ಸಮಾಧಾನ ಹೇಳಿ, ಕರೆತಂದು ಅವನು ಮತ್ತೆ ಒಪ್ಪಿಕೊಳ್ಳುವ ಹಾಗೆ ಮಾಡ್ತೀವಿ ಅಂತ್ಹೇಳಿ, ‘ಬ್ರೇಕ್ ಅಪ್ ಪಾರ್ಟಿ’ ಪ್ಲಾನ್ ಮಾಡುತ್ತಾರೆ.
ಕೊನೆಗೆ ಅವರು ಅಂದುಕೊಂಡ ಹಾಗೆ ಅವಳ ಬಾಯ್-ಫ್ರೆಂಡ್‌ಗೆ eನೋದಯವಾಗಿ, ‘ನೀನಿಲ್ದೆ ನಾನಿರೋಲ್ಲ ಮತ್ತೆ ಒಂದಾಗೋಣ’ ಎನ್ನುತ್ತಾನೆ. ಆದರೆ ಅವಳು ‘ನೋ...’ ಅಂತ ಹೇಳಿ ಅಲ್ಲಿಂದ ಖುಷಿಯಿಂದಲೇ ಹೊರಟುಬಿಡುತ್ತಾಳೆ. ಅವಳ ಹಿಂದೆಯೇ ಹೋಗುವ ನಾಯಕ, ‘ನಾವು ಪ್ಲಾನ್ ಮಾಡಿದ್ದು ಇದಕ್ಕೆ ತಾನೆ? ಅವನು ಒಪ್ಪಿಕೊಂಡ ಮೇಲೂ ನೀನ್ಯಾಕೆ ಬೇಡ ಎಂದಿದ್ದು?’ ಅಂತ ಪ್ರಶ್ನಿಸ್ತಾನೆ. ಆದರೆ, ಆಕೆ ಕೊಡುವ ಉತ್ತರ, ‘ಯಾವತ್ತೂ ನನ್ನನ್ನು ಅವನು ಬೇಡ ಅನ್ಬಾರ್ದು. ಅದನ್ನ ನಾನ್ಹೇಳಿದ್ರೇನೆ, ನಾನು ಬ್ರೇಕ್ ಅಪ್ ಮಾಡಿಕೊಂಡ್ರೇನೆ ನನಗೆ ಖುಷಿ’ ಅಂದುಬಿಡ್ತಾಳೆ. ಅಷ್ಟಕ್ಕೇ ಅವನಿಗೆ ರೇಗಿಹೋಗಿ ಕಪಾಳಕ್ಕೆ ಬಾರಿಸುತ್ತಾನೆ. ಅದಾದ್ಮೇಲೆ ಕಥೆ ಏನೋ ಮುಂದುವರೀತು. ಆದ್ರೆ ನನ್ನ ಮನಸ್ಸು ಮಾತ್ರ ಅಲ್ಲೇ ಫ್ರೀಜ್ ಆಗಿಹೋಯ್ತು. ಇಷ್ಟಕ್ಕೂ ಮನಃಸ್ಥಿತಿಗಳು ಯಾಕೆ ಕ್ಷಣಕ್ಕೊಮ್ಮೆ ಬದಲಾಗುತ್ತವೆ? ಆಧುನಿಕ ಜೀವನವು, ಯಾರಿಲ್ಲದಿದ್ದರೂ ನಿರ್ದಿಷ್ಟ ಆದಾಯವಿದ್ದರೆ ಬದುಕು ನಡೆಸಬಹುದು ಎಂಬ ವಾತಾವರಣ ಸೃಷ್ಟಿಸಿರುವುದು ನಿಜ. ಆದರೆ, ಬಂಧಗಳಿಲ್ಲದೆ ಬದುಕು ಬರಿದು ಅನ್ನೊದೂ ಅಷ್ಟೇ ನಿಜ. ಎಲ್ಲ ಸಂಬಂಧಗಳು ಪ್ರತಿಷ್ಠೆಯ ಮೇಲಾಟದಲ್ಲೇ ಪ್ರಸ್ತುತವಾಗುತ್ತಿದ್ದರೆ ಯಾವ ಸಂಬಂಧ ಉಳಿದೀತು? ತಲೆಯಲ್ಲಿ ಅಚಾನಕ್ಕಾಗಿ ಇಂತಹದ್ದೊಂದು ಪ್ರಶ್ನೆ ಭುಗಿಲೆದ್ದಿತ್ತು.ವ್ಯವಹಾರಗಳಲ್ಲಿ ಅನಿರೀಕ್ಷಿತವಾಗಿ ಆಗುವ ಬದಲಾವಣೆಗಳಿಗೇನೋ ಕುಟುಂಬದ, ಸ್ನೇಹಿತರ ಬೆಂಬಲ, ಸಾಂತ್ವನ ಸಿಗುತ್ತದೆ. ಒಂದಿಷ್ಟು ಸ್ವಯಂ ಯೋಜನೆಗಳು ಅದನ್ನ ಸರಿದೂಗುವಂತೆ ಮಾಡಿಬಿಡುತ್ತವೆ. ಆದರೆ ಮನಸ್ಸಿನ ಸ್ಥಿಮಿತ ಇಲ್ಲದೆ, ಸ್ಪಷ್ಟತೆ ಇಲ್ಲದೆ ಟೈಂಪಾಸ್‌ಗೆ ನಾವಾಗಿಯೇ ಮಾಡಿಕೊಳ್ಳುವ ಪ್ರೀತಿ -ಪ್ರೇಮಗಳಂಥ ಸಂಬಂಧಗಳು ಮಾನಸಿಕ ಸ್ವಾಸ್ಥ್ಯವನ್ನು ಹೇಗೆ ಹದಗೆಡಿಸಬಲ್ಲದು ಎಂಬುದಕ್ಕೆ ಸಾಕ್ಷಿ ಈ ಸಿನಿಮಾ. ಎಲ್ಲದಕ್ಕೂ ಅನುಕೂಲ ಮಾಡಿಕೊಡುವ ಕುಟುಂಬ, ಯಾವುದಕ್ಕೂ ಪರದಾಡುವ ಸ್ಥಿತಿಯನ್ನು ತಂದೊಡ್ಡದು. ಅಂಥ ಸಂದರ್ಭಗಳಲ್ಲಿ ಉಂಟಾಗುವುದೇ ಇಂಥ ಟೈಂಪಾಸ್ ಪ್ರೀತಿ-ಪ್ರೇಮ. ಪ್ರೀತಿಸಿದರೆ ಪರಸ್ಪರ ಪ್ರೇಮ ನಿವೇದನೆಗೆ ಪೈಪೋಟಿ. ಕಳಚಿಬಿದ್ದರೆ ಅದರಲ್ಲೂ, ತಾನೇ ಮೊದಲು ಬ್ರೇಕ್ ಅಪ್ ಆಗ್ಬೇಕು, ತಾನೇ ಮೊದಲಾಗಬೇಕು ಎಂಬ ಸ್ಪರ್ಧೆ. ತಿರಸ್ಕಾರವೇ ಇಲ್ಲಿ ಬಹು ಮುಖ್ಯ ಎಂದಾದಮೇಲೆ ನಿಜಕ್ಕೂ ಈ ಮನಸ್ಸುಗಳು ಪ್ರೀತಿಸಿದ್ದವಾ? ಅಥವಾ ತನ್ನನ್ನು ಆರಾಧಿಸುವ ಮನಸ್ಸನ್ನು ತಾನೂ ಆರಾಧಿಸಬೇಕೆ ಎಂಬುದಕ್ಕಿಂತಲೂ, ತಾನೇ ಅವನನ್ನು ತಿರಸ್ಕರಿಸಿದರೆ ಹೇಗೆಂಬ ಪ್ರತಿಕ್ರಿಯೆಯೇ ಪ್ರೀತಿಯ ಮುಖವಾಡ ತೊಟ್ಟಿತ್ತಾ?! ಈ ಎಲ್ಲ ಗೊಂದಲಗಳಿಗೂ ಉತ್ತರ ಮಾತ್ರ ಸಿಗದೆ ಚಿತ್ರ ಮುಗಿದಿತ್ತು.ಕಥೆ ಚಿತ್ರದ್ದೇ ಆದರೂ, ಚಿತ್ರಿತವಾಗಿದ್ದು ನೈಜ ಘಟನೆಗಳೇ. ಈಗಿನ ಯುವ ಮನಸ್ಸುಗಳ ತುಡಿತ ಇಷ್ಟೇ. ಎಲ್ಲರೂ ತನ್ನತ್ತ ನೋಡುವ ಹಾಗೆ ತನ್ನನ್ನು ಅನಾವರಣ ಮಾಡಬೇಕು, ಎಲ್ಲರೂ ತನ್ನ ಪ್ರೀತಿಸ್ಬೇಕು ಅಂತ. ತಾನು ಮಾತ್ರ ಯಾರೊಬ್ಬರನ್ನೂ ಅದೇ ಬಗೆಯ ಮನಃಸ್ಥಿತಿಯಲ್ಲಿ ಪ್ರೀತಿಸಲು ಮುಂದಾಗೋದೇ ಇಲ್ಲ. ತಿರಸ್ಕಾರದಲ್ಲಿ ಮಾತ್ರ ಮನಸ್ಸು ಪ್ರತಿಕ್ರಿಯಿಸಲು ಮೊದಲು ಮಾಡುತ್ತದೆ ಎಂಬುದೇ ಬಹು ದೊಡ್ಡ ದುರಂತ. ಒಬ್ಬರನ್ನು ತಿರಸ್ಕರಿಸುವುದು ದೊಡ್ಡ ವಿಷಯ ಅಲ್ಲ. ಹುಟ್ಟುತ್ತಲೇ ಜತೆಗಂಟಿಕೊಂಡ ಸಂಬಂಧಗಳೋ, ನಾವಾಗಿಯೇ ಮಾಡಿಕೊಂಡ ಸಂಬಂಧಗಳೋ ಆದರೆ ಅವುಗಳನ್ನು ಉಳಿಸಿಕೊಳ್ಳುವಲ್ಲೇ ಇರುವುದು ನಿಜವಾದ ಗೆಲುವು... ಅಲ್ವಾ? 

-  ಭಾಚಿ